Saturday 1 May 2021

ವರದಾ ನದಿ ತೀರದೀ ಶೋಭಿಪ ಯತಿವರನ್ಯಾರೇ ಪೇಳಮ್ಮಾ ankita venkatanatha dheerendra teertha stutih

dheerendra teertha rayara mutt yati 1785 stutih


ವರದಾ ನದಿ ತೀರದೀ ಶೋಭಿಪ -

ಯತಿವರನ್ಯಾರೇ ಪೇಳಮ್ಮಾ ।

ಗುರು ಸುಧೀಂದ್ರ ಸುತ ಗುರು-

ರಾಯರ ಸನ್ನಿಧಾನ ಪಾತ್ರಾ ।

ಧೀರೇಂದ್ರ ಯತಿ -

ನೋಡಮ್ಮಯ್ಯಾ ।।


ನಾರಾಯಣೋಪನಿಷ-

ದ್ವ್ಯಾಖ್ಯಾನ ಮನ್ಯುಸೂಕ್ತ ।

ಗುರುಗುಣಸತ್ವವನ -

ವಿಷಯವಾಕ್ಯ ಸಂಗ್ರಹ ।

ಗುರುಸ್ತೋತ್ರ ಅಂಭ್ರಣೀ-

ಸೂಕ್ತಕೆ ವ್ಯಾಖ್ಯಾನ ।

ವಿರಚಿಸಿದ ಧೀರೇಂದ್ರ -

ವಸುಧೇಂದ್ರ ಪುತ್ರ ಕಾಣಮ್ಮಾ ।।


ಧರಣಿಯಲಿ ಗುರುರಾಘವೇಂದ್ರ -

ವಂಶದಿ ಜನಿಸಿ । ಭೂ ।

ಸುರರ ವಂದ್ಯ ವಾದೀಂದ್ರ -

ಪೌತ್ರ ಕಾಣಮ್ಮಾ ।

ಗುರು ಜಯಾರ್ಯರ -

ಸುಧಾಕ್ಕೆ ವ್ಯಾಖ್ಯಾನ ರಚಿಸಿ ।

ಧರಣಿಯಲ್ಲಿ ಖ್ಯಾತರಾದ ಧೀರೇಂದ್ರ -

ಯತೀಂದ್ರನು ನಮ್ಮ -

ಧೀರ  ಶ್ರೀ ವೇಂಕಟನಾಥನ 

ದೂತನು ಕಾಣಮ್ಮ ।।

****


 

No comments:

Post a Comment