Saturday 1 May 2021

ಶ್ರೀಸುಕೃತೀಂದ್ರರ ನೀ ಸೇವಿಸೆ ವೈಕುಂಠ ವಾಸುದೇವ ಒಲಿವ ankita lakumeesha sukruteendra teertha stutih

sukruteendra teertha rayara mutt yati 1912 stutih

ಶ್ರೀ ಲಕುಮೀಶಾಂಕಿತ ಕುರುಡಿ ರಾಘವೇಂದ್ರಾಚಾರ್ಯರು., ಮಂತ್ರಾಲಯ..


ಶ್ರೀ ಸುಕೃತೀಂದ್ರರ 

ನೀ ಸೇವಿಸೆ ವೈಕುಂಠ ।

ವಾಸುದೇವ ಒಲಿವ ।। ಪಲ್ಲವಿ ।।


ಹೇಸಿ ಭವ ಕ್ಲೇಶ ರಾಶಿ ಬಿಡಿಸಿ ।

ಶ್ರೀ ಸಮೀರರ ಶಾ

ಸ್ತ್ರ ಜ್ಞಾನವಿತ್ತು ।

ದೋಷಿ ಜನರ ಸಂಗ ಬಿಡಿಸುತ ।

ತೋಷದಿಂದಲಿ ಸತತ ರಕ್ಷಿಪ ।। ಅ ಪ ।।


ಮಧ್ವ ಶಾಸ್ತ್ರದ ಶ್ರೀ 

ಉದ್ಧಾಮ ಬುಧರೆನಿಸಿ ।

ಗೆದ್ದು ದುರ್ವಾದಿಗಳ ।

ಮುದ್ದು ವೇಣುಗೋಪಾಲಾರ್ಯರೆನ್ನಿ ।

ಶ್ರದ್ಧೆಯಲಿ ಶ್ರೀ ಸುಪ್ರಜ್ಞೇ೦ದ್ರರ ।

ಪದ್ಮಕರ ಸಂಭೂತರೆನಿಸುತ ।

ಗದ್ದುಗೆಯಲ್ಲಿ ಮೆರೆದು 

ಮಾನ್ಯರಾದ ।। ಚರಣ ।।


ಕ್ಷೇತ್ರ ಶ್ರೀಮುಷ್ಣ ಶ್ರೀರಂಗ 

ಕುಂಭಕೋಣ ।

ಯಾತ್ರಾದಿಗಳ ಚರಿಸಿ ।

ಸೂತ್ರಭಾಷ್ಯ ಸುಧೆಯ ಬೋಧಿಸಿ ।

ಸೂತ್ರನಾಮಕ ಒಲಿಮೆಗಳಿಸಿ ।

ಮೂರ್ತಿ ಮೂಲರಾಮನ್ನ ಅರ್ಚಿಸಿ ।

ಕೀರ್ತಿಯ ಪಡೆದು 

ಮಹಾತ್ಮರಾದ ।। ಚರಣ ।।


ಸಕಲ ವೈಭವದಿಂದ 

ಸುಶೀಲೇಂದ್ರತೀರ್ಥರಿಗೆ ।

ನಿಖಿಳ ವಿಧಿಲಿ ಪಟ್ಟಗಟ್ಟಿ ।

ಸಕಲ ವೈಷ್ಣವ ಮಂತ್ರ ಬೋಧಿಸಿ ।

ಮುಕುತಿಗಾಗಿ ಪಥವ ತೋರಿಸಿ ।

ಸುಖ ಮುನಿಯ ಹೃದಯವಾಸ ಶ್ರೀ -

ಲಕುಮೀಶನ ದಯದಿ 

ಬಾಳೆಂದು ।। ಚರಣ ।।

****


No comments:

Post a Comment