Tuesday 20 October 2020

ಸಾಗಿಬಾರಯ್ಯ ಭವರೋಗದ ವೈದ್ಯನೆ ankita vijaya vittala SAAGI BAARAYYA BHAVAROGADA VAIDYANE

 ರಾಗ ಸಾವೇರಿ   ಆದಿತಾಳ 

Audio by Mrs. Nandini Sripad
 

ಶ್ರೀ ವಿಜಯದಾಸರ ಕೃತಿ 


ಸಾಗಿಬಾರಯ್ಯ ಭವ।ರೋಗದ ವೈದ್ಯನೆ ।

ಬಾಗುವೆ ನಿನಗೆ ಚೆನ್ನಾಗಿ ತುತಿಸಿ ಇಂದು ॥ ಪ ॥

ಭಾಗೀರಥೀಪಿತ ಭಾಗವತರ ಸಂ - ।

ಯೋಗ ರಂಗ ಉರಗಗಿರಿ ವೇಂಕಟಾ ॥ ಅ ಪ ॥


ರಥದ ಮಧ್ಯದಲಿಪ್ಪನೆ । ರಥಾಂಡಜವಾಹನ ।

ರಥಾಂಗಪಾಣಿಯೆ ದಶ।ರಥನೃಪತಿಪಾಲಿ ಪಾ - ।

ರಥಗೆ ವಲಿದವನ । ರಥವ ನಡೆಸಿ ಅತಿ -।

ರಥಮಹಾರಥರ ವಿ।ರಥರ ಮಾಡಿ ಗೆಲಿಸಿದೆ ॥

ಪ್ರಥಮ ದೈವವೆ ಮ।ನ್ಮಥಪಿತ ದೈತ್ಯರ -।

ಮಥನ ಭಕ್ತರ ಮನೋ।ರಥವೆ ಸತತ ತಾರಾ - ।

ಪಥ ಮಣಿವರ್ಣನೆ । ಕಥಾಶ್ರವಣದಲಿ ಸು - ।

ಪಥವ ತೋರಿಸುತಿಪ್ಪ । ಪ್ರಥಮಾಂಗನೊಡಿಯಾ ॥ 1 ॥


ನಿಲ್ಲದೆ ಬರುವುದು । ಪುಲ್ಲಲೋಚನ ಸಿರಿ - ।

ವಲ್ಲಭ ಸರ್ವರಿಗೆ । ಬಲ್ಲಿದನೆ ಅಪ್ರತಿ - ।

ಮಲ್ಲ ಮುರವಿರೋಧಿ । ಮೆಲ್ಲಮೆಲ್ಲನೆ ಪಾದ -।

ಪಲ್ಲವ ತೋರಿಸುತ್ತ । ಸುಲ್ಲಲಿತವಾಗಿ ॥

ಎಲ್ಲಕಾಲದಿ ನಮ್ಮ।ನೆಲ್ಲ ವುದ್ಧರಿಪದು ।

ಎಲ್ಲಿ ನಿನಗೆ ಸರಿ।ಯಿಲ್ಲವೊ ನೋಡಲು ।

ಸಲ್ಲುವುದೋ ಬಿರು।ದಲ್ಲಿಗಲ್ಲಿಗೆ ಗುಣ ।

ಬಲ್ಲವರಾರಿನ್ನು। ಕಲ್ಲಕೊನೆಯಲ್ಲಿಪ್ಪ ॥ 2 ॥


ಬೊಮ್ಮ ಮೊದಲು ಮನುಜೋ।ತ್ತಮ್ಮರು ಕಡೆಯಾಗಿ ।

ನಿಮ್ಮ ದಾಸರು ಅವರ । ಸಮ್ಮಂಧಿಗಳ ಪಾದ - ।

ನಮ್ಮಿಕೊಂಡಿಪ್ಪ ಅ।ಧಮ್ಮನಾ ಸರ್ವೋ- ।

ತ್ತುಮ್ಮನೆ ಅನೇಕ ಮ।ಹಿಮ್ಮ ಸರ್ವಭೂಷಿತ ॥

ರಮ್ಮೆ ಧರಣಿದೇವಿ । ಇಮ್ಮಹಿಷೇರ ಗೂಡಿ ।

ಸಮ್ಮೊಗವಾಗುತ । ಘಮ್ಮನೆ ಬಾ ಬಾ ।

ಹಿಮ್ಮೆಟ್ಟದೆ ಸಿರಿ । ವಿಜಯವಿಟ್ಠಲ ಅನು - ।

ಪಮ್ಮ ಚರಿತ ಪರ।ಬೊಮ್ಮ ತಿರುಮಲೇಶ ॥ 3 ॥

***

Sagi barayya bavarogada vaidyane

Baguve ninage cennagi tutisi indu |

Bagiratipita bagavatara samyoga

Ranga uragagiri venkata |


Rathada madhyadallippane rathaganujavahana

Rathangapaniye dasarathanrupati pala |

Parthage sarathiyagi rathava nadesi |

Athirathamaharathara virathara madi geliside |

Prathamadaivave manmathapitadaityara

Mathana Baktara manoratha paripurnane

Pathamanivarnane kathasravanadali

Supathava torisutippa prathamanganodeya | 1 |


Nillade baruvudu pullalocana siri-

Vallaba sarvarige ballidane aprati-

Malla muravirodhiye mella mellane

Pada Pallava torisutta illa kaladi namma

Nella uddharisuvudu elli ninage sari-

Yillavo nodalu salluvudo birudalli

Gallige guna ballavararinnu –

Nella koti koneyalippa visva || 2 ||


Bomma modalu manujottamaru kadeyagi

Nimma dasaru avara sambandhigala pada

Nammikondippa adhama na sarvottamane

Aneka mahima sarvabushita Iremme

Mahishare gudi sammoga-

Vaguta Gammane ba ba |

Himmettide sirivijayavithala anupamma-

Charita parabomma tirumalesa ||3||

***


 ಈ ಕೃತಿಯನ್ನು ರಚಿಸಿದ ಸಂದರ್ಭ : 


ವಿಳಂಬಿ ಸಂವತ್ಸರದ ಆಶ್ವಯುಜಮಾಸ , ತಿರುಪತಿಯಲ್ಲಿ ಶ್ರೀಶ್ರೀನಿವಾಸನ ಬ್ರಹ್ಮೋತ್ಸವದ ವಿಜಯದಶಮಿಯ ದಿನ. ಅಂದು ಶ್ರೀಶ್ರೀನಿವಾಸನ ಉತ್ಸವಪ್ರತಿಮೆಯನ್ನು ಮುಹೂರ್ತಕ್ಕೆ ಸರಿಯಾಗಿ ರಥಕ್ಕೆ ವಾದ್ಯವೈಭವದೊಡನೆ ಕರೆತಂದಿದ್ದಾರೆ. ಮಹಂತರು ರಥವನ್ನೆಳೆಯುವ ಮುಹೂರ್ತ ನಿರೀಕ್ಷಣೆ ಮಾಡುತ್ತಲಿದ್ದು , ಕಾಲಕ್ಕೆ ಸರಿಯಾಗಿ ರಥವನ್ನೆಳೆಯಲು ಭಕ್ತವೃಂದಕ್ಕೆ ಸೂಚಿಸಿದರು. ಗೋವಿಂದಾ ಗೋವಿಂದಾ!! ಎನ್ನುವ ಧ್ವನಿಯು ಭೊರ್ಗರೆಯುತ್ತಿದ್ದು , ಶ್ರೀಶ್ರೀನಿವಾಸನಿಗೆ ಮಂಗಳಾರತಿ ಮಾಡಿದ ನಂತರ ರಥವನ್ನು ಎಳೆಯಲು ಪ್ರಾರಂಭಿಸಿದರು. ಆದರೆ , ರಥ ಒಂದು ಅಂಗುಲವೂ ಜರುಗಲಿಲ್ಲ ! ಮಹಂತರು ಕಾರಣ ತಿಳಿಯದೆ , ಶ್ರೀನಾಥನನ್ನು ಪ್ರಾರ್ಥಿಸಿದರು. ಯಾರಾದರೂ ಭಕ್ತರು ಹರಕೆ ಹೊತ್ತಿದ್ದು , ಹರಕೆ ಸಲ್ಲಿಸಲು ಮರೆತಿದ್ದರೆ , ಅಪರಾಧ ಕಾಣಿಕೆಯೊಡನೆ ಹರಕೆ ಸಲ್ಲಿಸಿರಿ ಎಂದು ಭಕ್ತರಲ್ಲಿ ವಿಜ್ಞಾಪಿಸಿದರು. ಆ ಹೊತ್ತಿಗೆ ಸರಿಯಾಗಿ , ಬಾಲಕನೊಬ್ಬನ ಮೇಲೆ ಆವೇಶ ಬಂದದ್ದು ಕಂಡಿತು - ' ಗುಡಿಯ ಒಳಗೆ ಇರುವ ಭಕ್ತನೊಬ್ಬನು ತನ್ನ ಹೃದಯಕಮಲಕರ್ಣಿಕೆಯಲ್ಲಿ ಕಟ್ಟಿಹಾಕಿದ್ದಾನೆ! ಅವನು ನನ್ನನ್ನು ಬಿಟ್ಟುಕೊಟ್ಟರೆ ನಾನಿಲ್ಲಿ ಬರುವುದು , ರಥ ಮುಂದೆ ಸಾಗುವುದು ' ಎಂದು ಬಾಲಕನು ಕೂಗಲಾರಂಭಿಸಿದನು. ಮಹಂತರಿಗೆ ಆಶ್ಚರ್ಯವಾಗಿ , ದೇವಸ್ಥಾನದ ಬೀಗಮುದ್ರೆಗಳನ್ನು ತೆಗೆಸಿ ಹುಡುಕಲು , ಶ್ರೀನರಸಿಂಹನ ಗುಡಿಯ ಬಲಭಾಗದ ಕೊಠಡಿಯಲ್ಲಿ ಶ್ರೀಪುರಂದರದಾಸರು ನಿತ್ಯ ಜಪಕ್ಕೆ ಕೂಡುತ್ತಿದ್ದ ಸ್ಥಳದಲ್ಲಿ ಶ್ರೀವಿಜಯದಾಸರು ಧ್ಯಾನಾಸಕ್ತರಾಗಿ ಕುಳಿತಿದ್ದರು! ಶ್ರೀದಾಸರನ್ನು ಎಚ್ಚರಿಸಿ , ವಾದ್ಯವೈಭವದೊಡನೆ ರಥದ ಸಮೀಪಕ್ಕೆ ತಂದು ನಿಲ್ಲಿಸಿ , ' ಶ್ರೀನಾಥನ ರಥವನ್ನು ಮುಂದೆ ಸಾಗುವಂತೆ ಮಾಡಲು ' ವಿಜ್ಞಾಪಿಸಿದರು. 

ತಕ್ಷಣ ಗೆಜ್ಜೆಕಾಲಿಗೆ ಕಟ್ಟಿ , ತಂಬೂರಿ ಮೀಟುತ್ತಾ , ಚಿಟಿಕೆಯನ್ನು ಹಿಡಿದು , ಶ್ರೀಶ್ರೀನಿವಾಸನ ಎದುರಿಗೆ ನಿಂತು ಈ ಪದವನ್ನು ಶ್ರೀದಾಸರಾಯರು ಆನಂದಬಾಷ್ಪ ಪರಿಪೂರಿತ ಕಂಗಳಿಂದ ಕೂಡಿ ಹಾಡಿ ನಲಿದಾಡಿದರು . ಭಕ್ತರು ರಥವನ್ನು ಸೆಳೆಯಲಾರಂಭಿಸಿದರು , ರಥವು ಸುಗಮವಾಗಿ ಮುಂದೆ ಸಾಗಿತು. 

 ವಿವರಣೆ : 

 ಹರಿದಾಸರತ್ನಂ ಶ್ರೀಗೋಪಾಲದಾಸರು

********


ಸಾಗಿಬಾರೈಯ ಭವರೋಗದ ವೈದ್ಯನೆ
ಬಾಗಿ ನಿನಗೆ ಚೆನ್ನಾಗಿ ತುತಿಪೆ ನಿಂದು
ಭಾಗೀರಥಿಪಿತ ಭಾಗವತರ ಸಂ
ಯೋಗರಂಗ ಉರಗಗಿರಿ ವೆಂಕಟ ||pa||

ರಥದ ಮಧ್ಯದಲಿಪ್ಪನೆ ರಥಾಂಡಜ ವಾಹನನೆ
ರಥಾಂಗಪಾಣಿಯೆ ದಶರಥ ನೃಪಬಾಲ
ಪಾರ್ಥಗೆ ಒಲಿದವನ ರಥವ ನಡಿಸಿ ಅತಿ-
ರಥ ಮಹರಥರ ವಿರಥರ ಮಾಡಿ ಗೆಲಿಸಿದೆ
ಪ್ರಥಮ ದೈವವೆ ಮನ್ಮಥಪಿತ ದೈತ್ಯರ-
ಮಥನ ಭಕ್ತರ ಮನೋರಥನೆ ತಾರಾ-
ಪಥವರ್ಣನೆ ತವ ಕಥಾಶ್ರವಣದಲಿ ಸು-
ಪಥವನು ತೋರಿಸು ಪ್ರಥಮಾಂಗದೊಡೆಯ ||1||

ನಿಲ್ಲದೆ ಬರುವುದು ಪುಲ್ಲಲೋಚನೆ ಸಿರಿ-
ವಲ್ಲಭ ಸರ್ವರಿಗು ಬಲ್ಲಿದನೆ ಅಪ್ರತಿ-
ಮಲ್ಲ ಮುರವಿರೋಧಿ ಮೆಲ್ಲಮೆಲ್ಲನೆ ಪಾದ
ಪಲ್ಲವ ತೋರುತ್ತ ಎಲ್ಲಾ ಕಾಲದಿ ನಮ್ಮ-
ನೆಲ್ಲರುದ್ಧರಿಪುದು ಎಲ್ಲಿ ನಿನಗೆ ಸರಿ-
ಯಿಲ್ಲವೊ ನೋಡಲು ಸಲ್ಲುವುದೋ ಬಿರು-
ದಲ್ಲಿಗಲ್ಲಿಗೆ ಗುಣಬಲ್ಲವರಾರಿನ್ನು
ನೆಲ್ಲಕಟ್ಟು ಕೊನೆಯಲ್ಲಿಪ್ಪ ವಿಶ್ವ ||2||

ಬೊಮ್ಮ ಮೊದಲು ಮನುಜೋತ್ತಮರು ಕಡೆಯಾಗಿ
ನಿಮ್ಮ ದಾಸರು ಅವರ ಸಮ್ಮಂಧಿಗಳ ಪಾದ-
ನೆಮ್ಮಿಕೊಂಡಿಪ್ಪಂಥ ಧಮ್ಮನು ನಾ ಸರ್ವೋ-
ತ್ತುಮ್ಮಾನೇಕ ಗುಣಮಹಿಮ ವಿಭೂಷಿತ
ರಮ್ಮೆಧರಣಿದೇವಿ ಇಮ್ಮಹಿಷೇರ ಕೂಡಿ
ಸಮುಖನಾಗುತ ಸುಮ್ಮನೆ ಬಾ ಬಾ
ಹಿಮ್ಮೆಟ್ಟಿದೆ ಸಿರಿ ವಿಜಯವಿಠ್ಠಲ ಅನು-
ಪಮ್ಮಚರಿತ ಪರಬೊಮ್ಮ ತಿರುಮಲೇಶ ||3||
*******

ವಿಜಯದಾಸ
ಸಾಗಿ ಬಾರೈಯ ನೀನು, ಗೋವಿಂದ ವೆಂಕಟ ಪ

ಸಾಗಿಬಾರೈಯ ಭವರೋಗದ ವೈದ್ಯನೆ
ಬಾಗಿ ನಿನಗೆ ಚೆನ್ನಾಗಿ ತುತಿಪೆ ನಿಂದು
ಭಾಗೀರಥಿಪಿತ ಭಾಗವತರ ಸಂ
ಯೋಗರಂಗ ಉರಗಗಿರಿ ವೆಂಕಟ ಅ.ಪ.
ರಥದ ಮಧ್ಯದಲಿಪ್ಪನೆ ರಥಾಂಡಜ ವಾಹನನೆ
ರಥಾಂಗಪಾಣಿಯೆ ದಶರಥ ನೃಪಬಾಲ
ಪಾರ್ಥಗೆ ಒಲಿದವನ ರಥವ ನಡಿಸಿ ಅತಿ-
ರಥ ಮಹರಥರ ವಿರಥರ ಮಾಡಿ ಗೆಲಿಸಿದೆ
ಪ್ರಥಮ ದೈವವೆ ಮನ್ಮಥಪಿತ ದೈತ್ಯರ-
ಮಥನ ಭಕ್ತರ ಮನೋರಥನೆ ತಾರಾ-
ಪಥವರ್ಣನೆ ತವ ಕಥಾಶ್ರವಣದಲಿ ಸು-
ಪಥವನು ತೋರಿಸು ಪ್ರಥಮಾಂಗದೊಡೆಯ 1

ನಿಲ್ಲದೆ ಬರುವುದು ಪುಲ್ಲಲೋಚನೆ ಸಿರಿ-
ವಲ್ಲಭ ಸರ್ವರಿಗು ಬಲ್ಲಿದನೆ ಅಪ್ರತಿ-
ಮಲ್ಲ ಮುರವಿರೋಧಿ ಮೆಲ್ಲಮೆಲ್ಲನೆ ಪಾದ
ಪಲ್ಲವ ತೋರುತ್ತ ಎಲ್ಲಾ ಕಾಲದಿ ನಮ್ಮ-
ನೆಲ್ಲರುದ್ಧರಿಪುದು ಎಲ್ಲಿ ನಿನಗೆ ಸರಿ-
ಯಿಲ್ಲವೊ ನೋಡಲು ಸಲ್ಲುವುದೋ ಬಿರು-
ದಲ್ಲಿಗಲ್ಲಿಗೆ ಗುಣಬಲ್ಲವರಾರಿನ್ನು
ವಿಶ್ವ 2

ಬೊಮ್ಮ ಮೊದಲು ಮನುಜೋತ್ತಮರು ಕಡೆಯಾಗಿ
ನಿಮ್ಮ ದಾಸರು ಅವರ ಸಮ್ಮಂಧಿಗಳ ಪಾದ-
ನೆಮ್ಮಿಕೊಂಡಿಪ್ಪಂಥ ಧಮ್ಮನು ನಾ ಸರ್ವೋ-
ತ್ತುಮ್ಮಾನೇಕ ಗುಣಮಹಿಮ ವಿಭೂಷಿತ
ರಮ್ಮೆಧರಣಿದೇವಿ ಇಮ್ಮಹಿಷೇರ ಕೂಡಿ
ಸಮುಖನಾಗುತ ಸುಮ್ಮನೆ ಬಾ ಬಾ
ಸಿರಿ ವಿಜಯವಿಠ್ಠಲ ಅನು-
ಪಮ್ಮಚರಿತ ಪರಬೊಮ್ಮ ತಿರುಮಲೇಶ 3
*********


No comments:

Post a Comment