Tuesday 14 December 2021

ಹನುಮಂತ ದೇವ ನಮೋ ವನಧಿಯನು purandara vittala HANUMANTA DEVA NAMO VANADHIYANU





ಹನುಮಂತ ದೇವ ನಮೋ ||ಪ||

ವನಧಿಯನು ದಾಟಿ ದಾನವರ ದಂಡಿಸಿದ ||ಅ.ಪ||

ಅಂಜನೆಯ ಗರ್ಭ ಪುಣ್ಯೋದಯನೆಂದೆನಿಪೆ
ಕಂಜಸಖ ಮಂಡಲಕೆ ಕೈದುಡುಕಿದೆ
ಭುಂಜಿಸಿ ಇರಲು ಜನಂಗಳನು ನಡುಗಿಸಿದೆ
ಭಂಜರತ್ಮಕೆ ನಿನಗೆ ಸರಿ ಯಾರು ಗುರುವೆ ||

ಹೇಮಕುಂಡಲ ಹೇಮಯಜ್ಞೋಪವೀತಧರ
ಹೇಮಕಟಿಸೂತ್ರ ಕೌಪೀನವನು ಧರಿಸಿ
ರೋಮರೋಮಕೆ ಕೋಟಿ ಲಿಂಗ ಸರ್ವಾಂಗ
ರಾಮಭೃತ್ಯನೆ ನಿನಗೆ ಸರಿ ಯಾರು ಗುರುವೆ ||

ಅಕ್ಷಕುಮಾರಕನ ನಿಕ್ಷರಸಿ ಬಿಟ್ಟೆ ನೀ
ರಾಕ್ಷಸರೊಳಧಿಕ ರಾವಣನ ರಣದಲ್ಲಿ
ವಕ್ಷಸ್ಥಳ ಒದೆದು ಮೂರ್ಛಿಸಿ ಬಿಸಾಟೆ ತ್ರಿಜಗ-
ರಕ್ಷಕನ ಶಿಕ್ಷಕ ಶ್ರೀ ರಾಮದಳರಕ್ಷ ||

ರಾಮ ಲಕ್ಷ್ಮಣರ ಕಟ್ಟಾಳಾಗಿ ನೀ ನಡೆದೆ
ಭೂಮಿಜೆಗೆ ಮುದ್ರೆಯುಂಗುರವನಿತ್ತೆ
ಆ ಮಹಾ ಲಂಕೆನಗರವೆಲ್ಲವನು ನೀ
ಧೂಮಧಾಮವ ಮಾಡಿ ಮೆರೆದೆ ಮಹಾತ್ಮ ||

ಶ್ರೀಮದಾಚಾರ್ಯರ ಪುರಪತಿಯೆಂದೆನಿಪ
ಶ್ರೀ ಮಹಾಲಕುಮಿ ನಾರಾಯಣ ರೂಪ
ಶ್ರೀ ಮನೋಹರ ಪುರಂದರ ವಿಠಲನವಸರಾ-
ಪ್ರೇಮದಾಳು ಹನುಮಂತ ಬಲವಂತ ||
****

ರಾಗ: ಭೂಪಾಳಿ. ಏಕ ತಾಳ (raga, taala may differ in audio)


pallavi

hanumanta dEva namO

anupallavi

vanadhiyanu dATi dAnavara daNDisida

caraNam 1

anjaneya garbha puNyOdayanendenipe kanja sakha maNDalake kai tuDukide
bhunji sIrELu jagangaLanu uLuhide bhanjanAtmaja guruve sari kANe ninage

caraNam 2

hEmakuNDala hEma yajnOpavItakhiLa hEma kaTi sUtra kaupInadaHri
rOma kOTi linga sarva shyAmala varNa rAma bhrtyane ninage sari kANe guruve

caraNam 3

akSaya kumArakana niTTorasi pisuTu nI rAkSasAdhipa rAvaNanu raNadali
vakSa sthaLadalli shikSisalu mUrceya bakeya rakSisite rakSisite rAya balavanta

caraNam 4

rAma lakSmaNara kaNDALAgi nI merade bhUmijege mudreyunguravanitte
A mahA lankA nagara vellavanu suTTu dhUmadhAmava mADi aLideyA mahAtma

caraNam 5

shrImadAcAryara purapatiyendenipa shrI mahAlakumi nArAyaNa rUpa
shrI manOhara purandara viTTala rAyana saumya manadALu hanumanta balavanta
***

ಹನುಮಂತ ದೇವ ನಮೋ ಪ

ವನಧಿಯನು ದಾಟಿ ರಾವಣನ ದಂಡಿಸಿದೆ ಅ.ಪ

ಅಂಜನೆಯ ಆತ್ಮದಿಂದುದಿಸಿ ನೀ ಮೆರೆದೆಯೋಕಂಜಸಖಮಂಡಲಕೆ ಕೈ ದುಡುಕಿದೆ ||ಭುಂಜಿಸೀರೇಳು ಜಗಂಗಳನು ಉಳುಹಿದೆ ಪ್ರ-ಭಂಜನಾತ್ಮಜ ಗುರುವೆ ಸರಿಗಾಣೆ ನಿನಗೆ 1

ಹೇಮಕುಂಡಲಹೇಮಯಜೊÕೀಪವೀತಖಿಳಹೇಮಕಟಿಸೂತ್ರಕೌಪೀನಧಾರೀ ||ರೋಮ ಕೋಟಿ ಲಿಂಗ ಸರ್ವಶ್ಯಾಮಲ ವರ್ಣರಾಮಭೃತ್ಯನೆ ನಿನಗೆ ಸರಿಗಾಣೆ ಗುರುವೆ 2

ರಾಮ-ಲಕ್ಷನರ ಕಂಡಾಳಾಗಿ ನೀ ಮೆರೆದೆ |ಭೂಮಿಜೆಗೆ ಮುದ್ರೆಯುಂಗುರವನಿತ್ತೆ ||ಆ ಮಹಾ ಲಂಕಾ ನಗರವೆಲ್ಲವನು ಸುಟ್ಟುಧೂಮ ಧಾಮವ ಮಾಡಿ ಆಳಿದೆಯೊ ಮಹಾತ್ಮ 3

ಆಕ್ಷಯ ಕುಮಾರಕನ ನಿಟ್ಟೊರಸಿ ಬಿಸುಟು ನೀರಾಕ್ಷಸಾಧಿಪ ರಾವಣನು ರಣದಲಿ ||ವಕ್ಷಸ್ಥಳದಲ್ಲಿ ಶಿಕ್ಷಿಸಲು ಮೂರ್ಛೆಯ ಬಗೆಯರಕ್ಷಿಸಿದೆ, ರಕ್ಷಿಸಿದೆ ರಾಯ ಬಲವಂತ 4

ಶ್ರೀಮದಾಚಾರ್ಯ ಕುಲದವನೆಂದೆನಿಸಿದೆಯೈಶ್ರೀ ಮಹಾಲಕುಮಿ ನಾರಾಯಣಾಖ್ಯ ||ಶ್ರೀ ಮನೋಹರಪುರಂದರವಿಠಲ ರಾಯನಸೌಮ್ಯಮನದಾಳು ಹನುಮಂತ ಬಲವಂತ 5
*********

No comments:

Post a Comment