ಪ್ರಣವ ಪ್ರತಿಪಾದ್ಯ ಪ್ರಹ್ಲಾದವರದಾ l
ಪ್ರಣತ ಕಾಮದನೆ ಪ್ರಾರ್ಥಿಸುವೆ ಪ್ರಭುವೆಂದೂ ll ಪ ll
ಸಕಲ ಜೀವ ಜಡಾತ್ಮಕ ಜಗತಿನೊಳಗಿದ್ದು l
ಅಕಳಂಕ ನಾಮರೂಪದಲಿ ಕರಿಸೀ l
ಪ್ರಕಟನಾಗದಲೆ ಮಾಡಿಸಿ ಸರ್ವವ್ಯಾಪಾರ l
ಸುಖದುಃಖಗಳಿಗೆ ಎಮ್ಮನು ಗುರಿ ಮಾಡಿನೋಳ್ಪೆ ll 1 ll
ಏನೆಂಬೆ ನಿನ್ನ ಮಹಿಮೆಗೆ ರಮಾಪತಿ l
ನಿನ್ನಧೀನರಲ್ಲವೆ ತತ್ವಮಾನಿ ಸುರರೂ l
ದಾನವಾಂತಕನೆ ವಿಜ್ಞಾಪನವ ಕೈಕೊಂಡು l
ದೀನರುದ್ಧರಿಸುವದು ದಯದಿಂದ ನಿರತಾ ll 2 ll
ಸರ್ವ ಸ್ವತಂತ್ರ ನೀನಾದ ಕಾರಣ ಬ್ರಹ್ಮ l
ಶರ್ವಾದಿ ಸುರರು ಪ್ರಾರ್ಥಿಸುತಿಪ್ಪರೂ l
ದುರ್ವಿಭಾವ್ಯನೆ ಸುರರಿಗಮೃತ ಪಾನವಗೈಸಿ l
ಗರ್ವಿಸಿದ ದಾನವರ ಗಣವ ಸಂಹರಿಪೆ ll 3 ll
ಬುದ್ಧ್ಯಾದಿ ಇಂದ್ರಿಯಗಳೊಳಗೆ ತತ್ಪತಿಗಳೊಳ l
ಗಿದ್ದು ಬಹುವಿಧ ಚೇಷ್ಟಗಳನೇ ಮಾಡೀ l
ಬದ್ಧರನೆ ಮಾಳ್ಪೆ ಭವದೊಳಗೆ ಜೀವರನ ಅನಿ l
ರುದ್ಧನೆಂದೆನಿಪೆ ಎಲ್ಲರೊಳು ವ್ಯಾಪಕನಾಗಿ ll 4 ll
ಧಾಶರಥಿ ನೀನು ಗತಿ ಎಂದು ಮೊರೆಹೊಕ್ಕ ವಿ l
ಭೀಷಣಗೆ ಲಂಕಾಧಿಪತ್ಯವಿತ್ತೆ l
ವಾಸವಾನುಜ ಜಗನ್ನಾಥವಿಟ್ಠಲ ಭಕ್ತ l
ಪೋಷಕನು ನೀನಹುದು ಕಲ್ಪ ಕಲ್ಪಗಳಲ್ಲಿ ll 5 ll
***
ಪ್ರಣತಕಾಮದನೆ ಪ್ರಾರ್ಥಿಸುವೆ ಪ್ರಭುವೆಂದು ಅ.ಪ.
ಸಕಲ ಜೀವ ಜಡಾತ್ಮಕ ಜಗತ್ತಿನೊಳಗಿದ್ದು
ಅಕಳಂಕ ನಾಮರೂಪದಲಿ ಕರೆಸಿ
ಪ್ರಕಟನಾಗದಲೆ ಮಾಡಿಸಿ ಸರ್ವ ವ್ಯಾಪಾರ
ಸುಖ ದುಃಖಗಳಿಗೆ ಗುರಿಮಾಡಿ ಎಮ್ಮನು ನೋಳ್ಪೆ 1
ಏನೆಂಬೆ ನಿನ್ನ ಮಹಿಮೆಗೆ ರಮಾಪತಿ ನಿನ್ನ
ಸುರರು ದೀನರುದ್ಧರಿಸುವುದು ದಯದಿಂದ ನಿರುತಾ 2
ಸರ್ವ ಸ್ವತಂತ್ರ ನೀನಾದ ಕಾರಣ ಬ್ರಹ್ಮ
ಶರ್ವಾದಿಸುರರು ಪ್ರಾರ್ಥಿಸುತಿಪ್ಪರು
ದುರ್ವಿಭಾವ್ಯನೆ ಸುರಗಮೃತ ಪಾನವ ಗೈಸಿ
ಗರ್ವಿಸಿದ ದಾನವರ ಗಣವ ಸಂಹರಿಪೆ 3
ಬುಧ್ಯಾದಿ ಇಂದ್ರಿಯಗಳೊಳಗೆ ತತ್ಪತಿಗಳೊಳ
ಗಿದ್ದು ಬಹುವಿಧ ಚೇಷ್ಟೆಗಳನೆ ಮಾಡಿ
ಬದ್ಧರನ ಮಾಳ್ಪೆ ಭವದೊಳಗೆ ಜೀವರನ ಅನಿ
ರುದ್ಧರೆಂದೆನಿಪೆ ಎಲ್ಲರೊಳು ವ್ಯಾಪಕನಾಗಿ 4
ದಾಶರಥಿ ನೀನೆ ಗತಿಯೆಂದು ಮೊರೆಹೊಕ್ಕೆ ವಿ
ಭೀಷಣಗೆ ಲಂಕಾಧಿಪತ್ಯವಿತ್ತೇ
ವಾಸವಾನುಜ ಜಗನ್ನಾಥ ವಿಠ್ಠಲ ಭಕ್ತ
ಪೋಷಕನು ನೀನಹುದು ಕಲ್ಪ ಕಲ್ಪಗಳಲ್ಲಿ 5
*******
No comments:
Post a Comment