Friday 13 December 2019

ಆಕಳ ಕಾಯ್ದ ಗೋಕುಲವಾಸನು ankita gopala vittala

by ಗೋಪಾಲದಾಸರು
ಆಕಳ ಕಾಯ್ದ ಗೋಕುಲವಾಸನು
ಆಕಳ ಕಾಯ್ದ ಗೋಕುಲವಾಸನನೇಕ ಗುಣನಿಧಿನಾಕೇಶವಿನುತಪುರದಲ್ಲಿದ್ದಂಥ 
ಕೇರಿಯ ಮಕ್ಕಳ ನೆರಹಿ ಯಾದವ 
ಪರಿವಾರವೆಲ್ಲನಳಿನಕೇತಕಿ ಎಳೆಯ 
ಮಾವಿನ ತಳಿಲ ವನದ ಒಳಗೆ ರಂಗನು
ತೊಂಡರೊಡಗೂಡಿಪುಂಡರೀಕಾಕ್ಷ
ಗೋವಿಂದ ಕಾಳಿಯ ದಂಡೆಯಲ್ಲಿರಿಸಿಕಡು 
ತೃಷದಿ ಆ ಮಡುವಿನುದಕ ಕುಡಿದು 
ಗೋವುಗಳೆಲ್ಲ ನಡುಗಿ ಬೀಳಲುಹೊಕ್ಕ 
ಭರದಿ ದೇವಕಿ ಸುತನ ಸಿಕ್ಕಿಸಿಕೊಂಡು 
ಬಾಲಕೆ ಬಿಗಿಯಲುಇಂದಿರಾಪತಿ 
ಆನಂದದಿಂದಾಡಲು ಬಂದುಬೊಮ್ಮವಾಯು
ಉರಗಾಂಗನೆಯರ ಮೊರೆಯ ಲಾಲಿಸಿ 
ಕರುಣಿ ಅವರಿಗೆ ಗರುಡನ ಭಯಗರಳಭಯದಿ 
ಧರೆಗೆ ಬಿದ್ದಂಥ ತುರುಗಳಿಗೆಲ್ಲ ಸ್ಮರಣೆ ಬಪ್ಪಂತೆಮಂಗಳ ಮೂರುತಿ ಪೊಂಗೊಳಲೂದುತ್ತ ತಿಂಗಳಿನಂದದಿ
********

No comments:

Post a Comment