Wednesday 1 September 2021

ಆನಮಿಪೆ ಶ್ರೀ ಸತ್ಯಧ್ಯಾನಯತಿಗಳಿಗೆ ankita venkatesha vittala satyadhyana teertha stutih

 by ತಂದೆ ವೆಂಕಟೇಶವಿಠಲ ದಾಸರು


ಆನಮಿಪೆ ಶ್ರೀ ಸತ್ಯಧ್ಯಾನಯತಿಗಳಿಗೆ | ಪ |

ಹೀನೈಕ್ಯಕಾನನ ತನೂನಪಾತನಿಗೆ | ಅ.ಪ |


ಆಸೇತು ಹಿಮಗಿರಿ ಪ್ರವಾಸ ಕೈಕೊಂಡಖಿಳ

ವ್ಯಾಸಸೂತ್ರಾದಿ ಪ್ರಸ್ಥಾನತ್ರಯದಲೀ

ದೇಶಿಕರ ವಿದ್ವದ್ಸಭಾಸಮ್ಮೇಳಾದೊಳನಿಲ

ಭಾಷ್ಯಾರ್ಥಗಳ ಪ್ರತಿಷ್ಟಾಪಿಸಿದನೆಂದೊ | ೧ |


ಸತ್ಯಜ್ಞಾನಾರ್ಣವ ಮಹತ್ತರೋಡುವ ಭಕ್ತ

ಹೃತ್ತಮಾಂತಕ ಭಾನು ಪ್ರತ್ಯರ್ಥಿಹ

ಮಿಥ್ಯವಿದ್ರಾವಣ ವಿಚಾರಸಾರಾದ್ಯಮಿತ

ತತ್ತ್ವಪ್ರಮೇಯ ಸರ್ವತ್ರ ಮೆರೆಸಿದನೆಂದು | ೨ |


ಜ್ಞಾನಾಯು ಭಕ್ತಿ ವೈರಾಗ್ಯಾನುಕೂಲದಲಿ

ದಾನಾನುಕಂಪ ವಿದ್ವತ್ಪ್ರಭೆಯಲಿ

ಜಾನಕೀಪತಿವಿಠಲ ಕೃಷ್ಣ ವ್ಯಾಸಾರ್ಚನೆ ವ್-

ಚಾನದೊಳಗಭಿನವಾನಂದ ಮುನಿಯೆಂದು | ೩ |


ಈ ವಿಧ ಮಹಾ ಮಹಿಮರೀಭುವಿಲಿ ಜನಿಸುವುದೇ

ಪಾವಮಾನಿಗರ ಸದ್ಭಾಗ್ಯವೆನುತ |

ಭಾವದೊಳು ಇವರಂಘ್ರಿರೇಣಿನವರವನಾಗಿ

ಸೇವಿಸಲು ದುರ್ಮೋಹ ವ್ಯಾವರ್ತವೆಂದು | ೪ |

ಭೌಮವಾದ ವಸಂತ ಚೈತಾದಿ ಅಷ್ಟಮಿಯ

ಯಾಮ್ಯಯಾಮದೆ ಚಿತ್ರಭಾನುವಿನಲಿ

ಭೀಮತಥೀತೀರ ತಂದೆ ವೆಂಕಟೇಶವಿಠಲನ

ಧಾಮವೈದಿದ ಕರ್ಮದೇವರಿವರೆಂದು | ೫ |

***

         – 

No comments:

Post a Comment