Sunday 1 August 2021

ಪಾಲಿಪುದು ನಯನಗಳ ನಾಲಿಗೆಯ ನೀನು ಶ್ರೀಲೋಲ ಸಾರ್ವಭೌಮನೇ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಪಾಲಿಪುದು ನಯನಗಳ ನಾಲಿಗೆಯ ನೀನು

ಶ್ರೀಲೋಲ ಸಾರ್ವಭೌಮನೇ ಪ


ನೀಲಮೇಘಶ್ಯಾಮ ಬೇಲಾಪುರಾಧೀಶ

ಶೀಲ ಅಚ್ಚುತದಾಸಗೆ ಸ್ವಾಮಿ ಅ.ಪ


ಪರಮಪದನಾಥ ಇಂದಿರೆಯರಸ ಸಕಲ ನಿ

ರ್ಜರರು ಪೂಜಿಸುವಂಘ್ರಿಯಾ

ಶಿರಿಯನೀಕ್ಷಿಸಿ ಬದುಕಿ ಪದ ನಾಮಾ ಸುಳಾದಿ

[ವರ]ನೇಮದಿಂ ಪಾಡೀ ಆಡೀ

ಮೊರೆಯೊಕ್ಕು ಬದುಕಿ ಆವರಿಸಿಕೊಂಡಗಲದಿಹ

ದುರಿತಭವ ಶರಧಿಯಾ

ಪಿರಿದು ದಾಟುವೆನೆಂದು ಭರದೊಳೈದಿದವಗಾ

ಶ್ಚರ್ಯದಾಪತ್ತಡಸಿತ್ತೇ ಸ್ವಾಮಿ 1


ಹಿಂದೆ ಮಾಡಿದ ಕರ್ಮವೆಂಬದಕೆ ಜನನವಾದು

ದಿಂದು ಊನನಲ್ಲಾ

ಪೊಂದಲೀ ನಗರವನು ಪೋಗಲಾಕ್ಷಣದಿ ವಾಗ್ಬಂಧವತ್ವವೆರೆಡು

ಮುಂದಕಡಿಯಿಡಲು ಇಂದಿನದೊಲಚ್ಚುತನ ದಾಸ

ನಂದವಳಿದುಬ್ಬಸದೊಳು

ಇಂದು ನೀ ಸಲಹಿದಡೆ ಪೂರ್ವಾರ್ಜಿತ ಕರ್ಮ

ವೃಂದಗಳು ನಿಂದಿರುವವೆ ಸ್ವಾಮಿ 2


ಮನುಜ ಮಾಡಿದ ಪಾತಕಗಳನು ಎಣಿಸುವಡೆ

ಘಣಿರಾಜಗಳವಡುವುದೇ

ಗುಣ ತರಂಗಿಣಿಯೆ ದುರ್ಗುಣಗಳೆಣಿಸಲು ಶ

ರಣಜನರೊಳೇಂಪುರುಳಿರುವುದೇ

ಚಿನುಮಯನೆ ಭಕ್ತವತ್ಸಲನೆ ಅಚ್ಚುತz

ಸನವಗುಣಗಳನೀ ಮರೆದು

ಗುಣನಿಧಿಯೆ ಚೈತನ್ಯವಿತ್ತುಳುಹೆ ಬೇಗ ನಾ

ಧನ್ಯನೆಲೊ ವೈಕುಂಠರಮಣಾ 3

***


No comments:

Post a Comment