Sunday 1 August 2021

ಮರೆವರೇನೊ ರಾಮ ನಿನ್ನ ಚರಣ ಸೇವಕನನ್ನು ಪರರಿಗೊಪ್ಪಿಸಿ ಹೀಗೆ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಮರೆವರೇನೊ ರಾಮ ನಿನ್ನ ಚರಣ ಸೇವಕನನ್ನು

ಪರರಿಗೊಪ್ಪಿಸಿ ಹೀಗೆ ಪ


ಪರಮ ದಯಾನಿಧಿ ಅಲ್ಲವೆ ಮುನ್ನ

ಶರಣರ ಪಾಲಿಸಲಿಲ್ಲವೆ ಇದು

ಸರಿಯೇನೊ ಜನ ನಗರೇನೊ ಇನ್ನು

ಧರಣಿಯೊಳ್ ನಾನೇನು ಭಾರವೆ ದೂರವೆ ಅ.ಪ.

ಗತಿಹೀನರಿಗೆ ನೀ ಗತಿಯೆಂದು | ನೀನೆ

ಪತಿತರ ಪತಿಕರಿಸುವನೆಂದು

ಕೇಳಿ ಬಂದೆನೈ ಭವದಿ ನೊಂದೆನೈ ಮುಂದೆ

ಗತಿದೋರೆಂದು ಸಾರಿದೆ ಚೀರಿದೆ ದೂರಿದೆ 1


ದೋಷರಾಶಿಗಳೆಲ್ಲ ಅಳಿಸಯ್ಯ

ವಿಷಯ ವಾಸನೆ ವಿಷವೆಂದು ತಿಳಿಸಯ್ಯ | ನಿನ್ನ

ದಾಸಾನುದಾಸ ದಾಸನು ಎನಿಸಿ | ಪರಿ-

ಪೋಷಿಸಬೇಕಯ್ಯ ದಮ್ಮಯ್ಯ ಎಮ್ಮಯ್ಯ 2


ಏನು ಸಾಧನವನ್ನು ನಾ ಕಾಣೆ | ನಿನ್ನಾ-

ಧೀನದವನು ನಾ ನಿನ್ನಾಣೆ

ದೀನ ಬಂಧುವೆ ದಯಾಸಿಂಧುವೆ

ನಿನ್ನ ಪರಮಾನಂದ ಮೂರ್ತಿಯ ತೋರೋ ಶ್ರೀಕಾಂತನೆ 3

***


No comments:

Post a Comment