Thursday 5 August 2021

ಸ್ಮರಿಸಿ ಬೇಡುವೆ ಗುರುವರರ ಪಾದ ಸರಸಿಜ ಸ್ಮರಿಪ ankita kamalanabha vittala

 ..

kruti by Nidaguruki Jeevubai


ಸ್ಮರಿಸಿ ಬೇಡುವೆ ಗುರುವರರ ಪಾದ-

ಸರಸಿಜ ಸ್ಮರಿಪರಘುಪರಿಹರಿಸುವರಪ


ಇಂದಿರೇಶನ ಮಹಿಮೆ ಬಲ್ಲ ಭಕ್ತ

ಸಂದಣಿಯೊಳು ಇವರಿಗೆ ಸಮರಿಲ್ಲ

ತಂದೆ ವೆಂಕಟೇಶ ವಿಠ್ಠಲನೆಂದು

ಸಂಭ್ರಮ ಪಡುವ ಶಿಷ್ಯರಿಗೆಣೆಯಿಲ್ಲ 1


ಸಿರಿವೆಂಕಟೇಶನ್ನ ಸ್ಮರಿಸಿ ಬಹು

ಪರಿಯಿಂದ ಪಾಡಿ ಕೊಂಡಾಡಿ ಸ್ತುತಿಸಿ

ಗಿರಿಯ ವೆಂಕಟನನ್ನು ಭಜಿಸಿ ನಮ್ಮ

ಉರಗಾದ್ರಿವಾಸ ವಿಠ್ಠಲದಾಸರೆನಿಸಿ2


ಸದ್ವೈಷ್ಣವರ ಸುರಧೇನು ಸರ್ವ

ರುದ್ಧಾರವಾಗಲು ಜನಿಸಿದರಿನ್ನು

ಬುದ್ಧಿ ಶಿಷ್ಯರಿಗೊರೆದರಿನ್ನು ತಂದೆ

ಮುದ್ದು ಮೋಹನ್ನ ವಿಠ್ಠಲದಾಸರನ್ನು 3


ಸುಂದರ ಮೂರ್ತಿಯ ತಂದು ದುರ್ಗ

ಮಂದಿರದಲಿ ಸ್ಥಾಪಿಸಿದರೊ ಅಂದು

ಛಂದದಿ ಸೇವಿಸಿರೆಂದು ಶಿಷ್ಯ

ಮಂಡಲಿಗಳಿಗೆ ಬೋಧಿಸಿದರೆಂತೆಂದು 4


ಕಳವಳ ಪಡುತಿಹೆನಲ್ಲ ಕಾಲ

ಕಳೆದು ಹೋಗುತಲಿದೆ ಅರಿವು ಬರಲಿಲ್ಲ

ಪರಮ ಭಕ್ತರ ಪರಿಯನೆಲ್ಲ 

ತಿಳಿವಕಮಲನಾಭ ವಿಠ್ಠಲನಲ್ಲದಿಲ್ಲ 5

***


No comments:

Post a Comment