ರಾಗ - : ತಾಳ -
ಜಯಜಯಾ ಶ್ರೀನಿವಾಸಾ
ಜಗದೀಶಾ ವೆಂಕಟೇಶಾ
ದಯದಿಂದಲಿ ಪಾಲಿಸಿನ್ನು
ದೋರಿನಿಜ ಪ್ರಕಾಶಾ ll ಪ ll
ಉರಗಾದ್ರಿಯಲಿ ಬಂದು
ಭೂವೈಕುಂಠಿದೇಯೆಂದು
ಕರದಿಂದ ಮಹಿಮೇದೋರಿ
ತಾರಿಸುವ ಜನದಿಂದು ll 1 ll
ಧರ್ಮಾರ್ಥ ಕಾಮ್ಯ
ಚತುರ್ವಿಧಮುಕ್ತಿಗಳು
ಧರ್ಮವರಿತೆಸಾಧುರಿಗೆ
ನೀಡುತಿಹೆ ದಯಾಳು ll 2 ll
ಕುಲಧರ್ಮದಿಂದಲೆನಗೆ
ಮಾನ್ಯತಾನ ಬಂದ್ಹಾಂಗೆ
ವಲುಮೆಯಿಂದ ಪರಗತಿಗೆ
ಕುಡುಮಾನ್ಯತೆನವೀಗ ll 3 ll
ಮಂದರೊಳು ಮಂದನಾನು
ಜ್ಞಾನಭಕ್ತಿಯನರಿಯೆನು
ತಂದೆ ಮಹಿಪತಿಸ್ವಾಮಿ
ಇಂದು ಉದ್ಧರಿಸು ನೀನು ll 4 ll
***
No comments:
Post a Comment