Saturday 1 May 2021

ಅತಿ ದಯಾಪರಮೂರ್ತಿ ಅನಿಮಿತ್ತ ಬಂಧು ರಘುಪತಿ ವಿಠ್ಠಲ ankita vyasa vittala raghupati vittala dasa stutih

 ಅಂಕೀತೋಪದೇಶ : ಶ್ರೀ ವ್ಯಾಸ  ವಿಠ್ಠಲರು ( ಶ್ರೀ ಕಲ್ಲೂರು ಸುಬ್ಬಣ್ಣದಾಸರು )

ಅಂಕಿತ : ಶ್ರೀ ರಘುಪತಿ ವಿಠ್ಠಲ

" ಅಂಕಿತ ಪ್ರದಾನ ಪದ "


ರಾಗ : ಕಾಂಭೋಧಿ      ತಾಳ : ಝ೦ಪೆ


ಅತಿ ದಯಾಪರಮೂರ್ತಿ । ಅನಿ ।

ಮಿತ್ತ ಬಂಧು । ರಘು ।

ಪತಿ ವಿಠ್ಠಲ ಸಲಹೋ ಇವನಾ ।। ಪಲ್ಲವಿ ।।


ಪತಿತ ಪಾವನ ನಿನ್ನ ಪರಮ ಮಂಗಳ ನಾಮ ।

ಸತತ ಪೊಗಳುವಂತೆ ಸಾನುಕೂಲನಾಗಿ ।। ಅ ಪ ।।


ಜನನಿ ಗರ್ಭದಲಿಂದ ಜನಿಸಿದ ಮೊದಲು ಮಾಡಿ ।

ಗುಣವಂತ ನೆನೆಸಿದವನೋ ।

ಕನಸಿನೊಳಗಾದರೂ ಧನ ವನಿತೆ ತನು ಭೋಗ ।

ನೆನಸದಿಹ ನಿಪುಣನಿವನೋ ।।

ಕ್ಷಣಕ್ಷಣಕೆ ನಿನ್ನನೇ ಧ್ಯೇನಿಸುತ ಪರಮ ಸುಖ ।

ವನಧಿಯೊಳಗಾಡುವನೋ ।

ಪ್ರಣತ ಜನ ಮಂದಾರ ಪ್ರಾಣನಂತರ್ಯಾಮಿ ।

ನಿನಗೆ ಸಮ್ಮತವಾದ ನಿಜ ದಾಸನ ಮ್ಯಾಲೆ ।। ಚರಣ ।।


ಶೀತೋಷ್ಣ ಸುಖ ದುಃಖ ಮಾನಾಪಮಾನಗಳು ।

ಮಾತು ಮನಸಿಗೆ ತಾರನೋ ।

ಧಾತುಗೆಡದಲೆ ತಿಳಿದು ದಯಾ ಪಯೋನಿಧಿ ನಿನ್ನ ।

ಪ್ರೀತಿಯೆಂದಾಡುವವನೋ ।।

ವಾತಜನ ಮತದವರ ಪ್ರೀತಿಯಲಿ ಸೇವಿಸಿ । ಕೃ ।

ಪಾತಿಶಯ ಪಡದಣುಗನೋ ।

ಈ ತೆರದಿ ಭಕ್ತನ್ನ ರೀತಿ ನೀ ಬಲ್ಲವನೇ ।

ನಾ ತುತಿಸಿ ಪೇಳ್ವ ಪೊಸಮಾತು ಮತ್ತುಂಟೆ ।। ಚರಣ ।।


ನಿನ್ನ ಕರುಣದಳತಿ ಇನ್ನಿವನಮ್ಯಾಲಿರಲು ।

ಚನ್ನಿಗನೆ ನಿನಗೆ ನಾನೂ ।

ಬಿನ್ನೈಸಿದೆನೋ ಸ್ವಾಮಿ ಎನ್ನ ಗುರುಗಳ ಆಜ್ಞ ।

ಚನ್ನಾಗಿ ಶಿರದಿವೊಹಿಸಿ ।।

ಸಣ್ಣವಗೆ ಅಂಕಿತವ ಕೊಟ್ಟನಲ್ಲದೆ ಲೇಶ ।

ಎನ್ನ ಸ್ವತಂತ್ರವಿಲ್ಲ ।

ಚನ್ನಾಗಿ ಕಾಪಾಡಿ ಬೆಳಸಿ ಫಲವನೇ ತೋರೋ ।

ಸನ್ನುತಾಂಗಿಯರಮಣ ವ್ಯಾಸ ವಿಠ್ಠಲವಿಭುವೇ ।। ಚರಣ ।।

****

No comments:

Post a Comment