Sunday 29 November 2020

ಸುಜನರಾವನ ಮನೆ prasannavenkata ankita suladi ಸತ್ಸಂಗ ಸುಳಾದಿ SUJANARAVANA MANE SATSANGA SULADI

Audio by Mrs. Nandini Sripad

 ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತ  ಸತ್ಸಂಗ ಸುಳಾದಿ 

( ದಾಸರು ಸಜ್ಜನರ ಸಂಗವನ್ನು , ಅದರಿಂದುಂಟಾಗುವ ಆಧ್ಯಾತ್ಮಿಕ ಲಾಭಾತಿಶಯಗಳನ್ನು ಎಳೆಎಳೆಯಾಗಿ ಈ ಸುಳಾದಿಯಲ್ಲಿ ಬಿಡಿಸಿ ಹೇಳಿದ್ದಾರೆ. ಪರಮಭಾಗವತರು , ಸಾಧುಸಂತರು , ಭಗವದ್ಭಕ್ತರು ಭೋಜನ ಸ್ವೀಕರಿಸಿದರೆ ಅದರಿಂದುಂಟಾಗುವ ಪ್ರಯೋಜನವನ್ನು ಹೇಳುತ್ತಾ , ಸಜ್ಜನ ಸಂಗವು ಜನರ ವಿಷಯ ನಿವೃತ್ತಿಯನ್ನು ಮಾಡುವುದಲ್ಲದೆ , ಭವಸಾಗರವನ್ನು ದಾಟಿಸುವ ತೆಪ್ಪವಾಗಬಲ್ಲದು , ಭಗವದ್ಭಕ್ತರ ಸಹವಾಸವೇ ಮೋಕ್ಷಕ್ಕೆ ಸಾಧನ ಎಂದು ಭಾಗವತದ ಆಶಯವನ್ನೆಲ್ಲಾ ಇಲ್ಲಿ ವ್ಯಕ್ತಪಡಿಸಿದ್ದಾರೆ. ) 


 ರಾಗ ಅಠಾಣ 


 ಧ್ರುವತಾಳ 


ಸುಜನರಾವನ ಮನೆಯಲ್ಲುಂಡು ದಣಿದರೆ

ಅಜನಜನಕನೇವೆ ತೃಪುತನಾದನು ಗಡ

ಅಜನಜನಕ ತೃಪುತನಾದಡೆ ತಡಿಯದೆ

ತ್ರಿಜಗಜ್ಜೀವರುಂಡಂತಾಯಿತು ನೋಡಿರೊ

ಸುಜನರಿಂದುರು ವಿಷಯದ ನಿವೃತ್ತಿ

ಸುಜನ ಸಂಗವೆ ಭವಾಂಬುಧಿಗೆ ಪ್ಲವ

 ಪ್ರಸನ್ನವೆಂಕಟ ಕೃಷ್ಣನೆ ಕರ್ಣಾಧಾರ ॥ 1 ॥ 


 ಮಠ್ಯತಾಳ 


ಎಲ್ಲಿ ಹರಿಯ ಪೂಜಕರಿದ್ದ ದೇಶ

ಅಲ್ಲಿ ಗಂಗಾದಿ ನದಿಗಳ ನಿವಾಸ

ಅಲ್ಲಿ ಸರ್ವಸಂಪದ ಶ್ರೇಯಸಕ್ಕು

ಸಲ್ಲಲಿತ ಪಾತ್ರ ಲಾಭವೆಲ್ಲಕ್ಕು

ಫುಲ್ಲಲೋಚನ ಪ್ರಸನ್ನವೆಂಕಟ ಕೃಷ್ಣನ 

ಬಲ್ಲ ಭಾಗ್ಯನಿಧಿಗಳ ಬರವೆಲ್ಲಿ

ಅಲ್ಲಿ ಸರ್ವಸಂಪದ ಶ್ರೇಯಸಕ್ಕು ॥ 2 ॥ 


 ರೂಪಕತಾಳ 


ಬ್ರಹ್ಮವಿದ್ಯಾ ತಪೋಪೂರ್ಣ ಹೃದಯರಾದ

ಬ್ರಾಹ್ಮರಿದ್ದಲ್ಲಿ ಪರಬ್ರಹ್ಮನಿಪ್ಪನಾಗಿ

ಬೊಮ್ಮನಲ್ಲಿ ವಿಶ್ವವಿಪ್ಪದು ತಪ್ಪುದ

ಬ್ರಹ್ಮವಿದ್ಯಾ ತಪೋಪೂರ್ಣ ಹೃದಯರಾದ

ಬೊಮ್ಮನ ಪ್ರತಿಮರು ಬ್ರಹ್ಮಜ್ಞ ಬ್ರಾಹ್ಮರು

ಬ್ರಾಹ್ಮರ ದೈವ ಪ್ರಸನ್ವೆಂಕಟ ಕೃಷ್ಣ 

ಬ್ರಹ್ಮವಿದ್ಯಾ ತಪೋಪೂರ್ಣ ಹೃದಯರಾದ ॥ 3 ॥ 


 ಅಟ್ಟತಾಳ 


ಪುಷ್ಕರತ್ರಯ ಕುರುಕ್ಷೇತ್ರ ಪುಲ -

ಹಾಶ್ರಮ ಗಯಾ ಪ್ರಯಾಗ ಶ್ರೀ -

ಪುಷ್ಕರಾಕ್ಷನ ದಾಸರಲ್ಲಿ ನೈ -

ಮಿಷಾರಣ್ಯ ಫಲ್ಗುಶೇತು ಕು -

ಶಸ್ಥಳ ಮಧುರಾಪುರವು ಪ್ರಭಾ -

ಸಕ್ಷೇತ್ರವು ವಾರಣಾಸಿ ಬಿಂದುಸರ ಪಂ -

ಪಾಕ್ಷೇತ್ರವು ಶ್ರೀಪ್ರಸನ್ನವೆಂಕಟ ಕೃಷ್ಣ ತೀರ್ಥಚರಣ ಶ್ರೀ -

ಪುಷ್ಕರಾಕ್ಷನ ದಾಸರಲ್ಲಿ ॥ 5 ॥ 


 ಏಕತಾಳ 


ನಾರಾಯಣಾಶ್ರಮ ನಂದಾಶ್ರಮ ಸೀ -

ತಾರಾಮಾಶ್ರಮ ಸರ್ವಾಶ್ರಮದಲಿ

ನೈರಂತರವಾಸಕೆ ಸಹಸ್ರಾಧಿಕವು

ಶ್ರೀರಮಣನ ಶರಣರು ಕೊಂಡರೆ

ಮೇರು ಮಹೇಂದ್ರವು ಮಲಯಾದಿ ಕುಲಗಿರಿ

ಭೂರಿಪುಣ್ಯದ ಧರ್ಮಾದಿ ಫಲಸ್ಥಳ

ಕಾರುಣ್ಯನಿಧಿ ಪ್ರಸನ್ನವೆಂಕಟ ಕೃಷ್ಣ 

ಚಾರು ಚರಣ ಚಾರಕರೆ ಪಾವನರು ॥ 6 ॥ 


 ಜತೆ 


ಸುಜ್ಞಜನರ ಪ್ರಿಯ ಪ್ರಸನ್ವೆಂಕಟಕೃಷ್ಣ 

ಸುಜ್ಞರೆ ಹರಿಪ್ರಿಯರಹರೆಂದೆಂದು ॥ 7 ॥

*******


No comments:

Post a Comment