Thursday 5 December 2019

ನೀನೇ ದಯಾಸಂಪನ್ನನೊ ಕಾವೇರಿ purandara vittala NEENE DAYA SAMPANNANOKAAV ERI

Audio by Mrs. Nandini Sripad

ಪುರಂದರದಾಸರು
ರಾಗ ತೋಡಿ ಆದಿ ತಾಳ 

ನೀನೇ ದಯಾಸಂಪನ್ನನೋ, ಕಾವೇರಿರಂಗ
ನೀನೇ ಬ್ರಹ್ಮಾದಿ ವಂದ್ಯನೋ ||ಪ||

ಬಂಧುಗಳೆಲ್ಲರ ಮುಂದಾ ದ್ರುಪದನ
ನಂದನೆಯೆಳೆ ತಂದು ಸೀರೆಯ ಸೆಳೆವಾಗ
ಬಂಧು ಕೃಷ್ಣ ಸಲಹೆಂದರೆ ಅಕ್ಷಯ-
ವೆಂದು ಕಾಯ್ದ ಗೋವಿಂದನು ನೀನೇ ||

ನಿಂದಿತ ಕರ್ಮನೊಂದುಳಿಯದೆ ಬೇ-
ಕೆಂದು ಮಾಡಿದನಂದಜಮಿಳನು
ಕಂದ ನಾರಗ ಎಂದರೆ ಮುಕ್ತಿಯ
ಕುಂದದೆಯಿತ್ತ ಮುಕುಂದನು ನೀನೇ ||

ಮತ್ತಗಜವ ನೆಗಳೊತ್ತಿ ಪಿಡಿದು, ಬಲು
ಒತ್ಯಧರೋಷ್ಠವ ಮೃತ್ಯುವಿನಂತಿರೆ
ಭಕ್ತರ ಸಲಹುವ ಪುರಂದರವಿಟ್ಠಲ
ಹಸ್ತಿಗೊಲಿದ ಪರವಸ್ತುವು ನೀನೇ ||
***

pallavi

nInE dayA sampannanO kAvEri ranga nInE brahmAdi vandyanO

caraNam 1

bandhugaLellara mundA drupadana nandaneyeLe tandu sIreya seLevAga
bandhu krSNa salahendare akSayavendu kAida gOvindanu nInE

caraNam 2

nindita karmanonduLiyade bEkendu mADidanandajamiLanu
kanda nAragA endare muktiya kundadeyitta mukundanu nInE

caraNam 3

mattagajava negaLotti piDidu balu otyadharOSThava mrtyuvinantire
bhaktara salahuva purandara viTTala hastigolida para vasatuvu nInE
***

ನೀನೇ ದಯಾಸಂಪನ್ನನೊ ಕಾವೇರಿ ರಂಗನೀನೆ ಬ್ರಹ್ಮಾದಿವಂದ್ಯನೊ ಪ

ಬಂಧುಗಳೆಲ್ಲರ ಮುಂದಾ ದ್ರುಪದನನಂದನೆಯೆಳತಂದು ಸೀರೆಯ ಸೆಳೆಯಲು ||ನೊಂದು ಕೃಷ್ಣ ಸಲಹೆಂದರೆಅಕ್ಷಯಕುಂದದಲಿತ್ತ ಮುಕುಂದನು ನೀನೇ 1

ನಿಂದಿತ ಕರ್ಮಗಳೊಂದು ಬಿಡದೆ ಬೇ-ಕೆಂದು ಮಾಡಿದನಂದಜಮಿಳನು ||ಕಂದಗೆ ನಾರಗನೆಂದರೆ ಮುಕುತಿಯಕುಂದದಲಿತ್ತ ಮುಕುಂದನು ನೀನೇ 2

ಮತ್ತಗಜವನೆಗಳೊತ್ತಿ ಪಿಡಿಯೆ ಬಲುಒತ್ತಿ ರಭಸದಿ ಬಿತ್ತರಿಸಲುಗುಣ||ಭೃತ್ಯವರದ ಶ್ರೀ ಪುರಂದರವಿಠಲಹಸ್ತಿಗೊಲಿದ ಪರವಸ್ತುವು ನೀನೇ 3
********

No comments:

Post a Comment