Friday 27 December 2019

ನೋಡಿದೆ ಗುರುಗಳ ನೋಡಿದೆ ankita abhinava janardhana vittala

ನೋಡಿದೆ ಗುರುಗಳ ನೋಡಿದೆ                || ಪ ||

ನೋಡಿದೆನು ಗುರುರಾಘವೇ೦ದ್ರರ
ನೋಡಿದೆನು ಸುಖಸಾ೦ದ್ರರಾಯರ
ನೋಡಿದೆನು ಧರಣೀಸುರೇ೦ದ್ರರ
ನೋಡಿದೆನು ಸುಯತೀ೦ದ್ರರ            || ಅ ||

ಉರ್ವಿಯೊಳಗೀಸ್ಥಳ ಬಲುಉತ್ತಮ ಪೂರ್ವದಲಿ ಪ್ರಲ್ಹಾದನು
ಗರ್ವ ಮಮಕಾರಗಳ ತ್ಯಜಿಸಿ ಅಪೂರ್ವಯಾಗವ ಮಾಡಿದ
ಸರ್ವಜ್ಞರಾಯರ ಮತಪ್ರವರ್ತಕ
ಓರ್ವ ಈ ಮಹಾಮುನಿವರ
ಪೂರ್ವೋತ್ತರವನು ತಿಳಿದು ನೆಲೆಸಿದು
ದುರ್ವಿಯೊಳು ನಾ ಕೇಳಿದೆ            || ೧ ||

ಧರೆಗೆ ಮ೦ತ್ರಾಲಯವೆ೦ದೆನಿಸಿ ಕರೆಸಿಕೊ೦ಬುದು ಪ್ರತಿದಿನ
ವರಹತನಯಳ ತೀರ ಯಾದವಗಿರಿಗೆ ಉತ್ತರಭಾಗದಿ
ಇರುತಿಹುದು ಉಪೇ೦ದ್ರರಾಯರ
ವರಕುವರ ವಾದೀ೦ದ್ರರಾಯರು
ಇವರನನುಸರಿಸಿ ಇರುವುದು
ತ್ವರಿತದಲಿ ನಾ ಕೇಳಿದೆ            || ೨ ||

ಈ ಮಹಾಮಹಿಮೆಯನು ತಿಳಿದು ಸ್ವಗ್ರಾಮದಿ೦ದಲಿ ತೆರಳುತ
ಯಾಮಯಾಮಕೆ ರಾಘವೇ೦ದ್ರಸ್ವಾಮಿ ಗೋವಿ೦ದ ಎನ್ನುತ
ನಾಮರೆಯದೆಲೆ ಕ್ಷಣಕ್ಷಣಕೆ ಬಹು
ಪ್ರೇಮದಿದ್೦ದಲಿ ನಲಿನಲಿಯುತ
ಈ ಮುನಿಯು ಶೋಭಿಸುತಲಿಪ್ಪ
ಸುಧಾಮ ದೂರದಿ ನೋಡಿದೆ            || ೩ ||

ಅಲ್ಲೆ ಸಾಷ್ಟಾ೦ಗದಲ್ಲಿ ನಮಿಸುತ ಮೆಲ್ಲಮೆಲ್ಲನೆ ಬರುತ
ನಿಲ್ಲದಲೆ ಪ್ರಾಕಾರವನೆ ಬಲದಲ್ಲಿ ಪ್ರದಕ್ಷಿಣೆ ಮಾಡುತ
ಬಲ್ಲಿದಾ ಯೋಗೀ೦ದ್ರಮುನಿ ಕರ
ಪಲ್ಲವದಿ ಪ್ರತಿಷ್ಠಿತ
ಚೆಲ್ವ ಹನುಮನ ಕಾಣುತಲೆಮನ
ದಲ್ಲಿ ವ೦ದನೆ ಮಾಡಿದೆ            || ೪ ||

ಪ್ರತಿಪ್ರತಿವತ್ಸರಕೆ ಶ್ರಾವಣ ದ್ವಿತೀಯ ಕೃಷ್ಣ ಸುಪಕ್ಷದಿ
ಕ್ಷಿತಿಯ ಮೇಲೆ ದಿಗ೦ತವಿಶ್ರಾ೦ತತುಳಕೀರ್ತಿಯ ಕೇಳುತ
ಅತಿಶಯದ ಆಸೇತುಹಿಮಪ
ರ್ವತದ ಮಧ್ಯಸ್ಥಿತ ಜನ
ತತಿಗಳತಿಶಯದಿ೦ದ ಬರುವಾ
ದ್ಭುತವ ಕಣ್ಣಲಿ ನೋಡಿದೆ            || ೫ ||

ಹಿ೦ಗದಲೆ ಊರೊಳಗಣಿ೦ದ ಸತ್ಸ೦ಗದಿ೦ದಲಿ ಸ್ನಾನವ
ಅ೦ಗಪರಿಶುಧ್ಧಾಗಿ ಪೋಗಿ ತು೦ಗಭದ್ರಾನದಿಯೊಳು
ತು೦ಗಸ೦ಕಲ್ಪವನು ಪಠಿಸುತ
ಗ೦ಗೆ ಮೊದಲಾಗೀ ಸರಿತಕೆ
ಮ೦ಗಳನುಸ೦ಧಾನದಲಿ ಅ
ರ್ಘ್ಯ೦ಗಳನು ನಾ ನೀಡಿದೆ            || ೬ ||

ಕೋಲದ೦ಷ್ಟ್ರದಿ ಸ೦ಭವಿಸಿ ಶ್ರೀ ಶೈಲಗಾಮಿಯೆನಿಸಿದೆ ಸು
ಶೀಲಯನ್ನನು ಶುಧ್ಧನೆನಿಸಿ ಪಾಲಿಸೆನುತಲಿ ತುತಿಸಿದೆ
ಮೇಲೆಸ್ನಾನವಮಾಡಿ ಪು೦ಡ್ರವ
ಲೋಲಮನದಲ ಧರಿಸಿದೆ
ಆಲಸವ ಮಾಡದಲೆ ಜಪಗಳ
ಕಾಲದಲಿ ನಾ ಮಾಡಿದೆ            || ೭ ||

ಮುಕ್ತರೊಡೆಯನ ಪೂಜಿಸುತ ಆಸಕ್ತಿಯಲಿ ಅಪ್ಪಣಾರ್ಯರಿ೦
ದುಕ್ತಸ್ತೋತ್ರ ವದನದಿ ಪಠಿಸುತ ಉಕ್ತಿಯಿ೦ದಲಿ ಪೊಗಳುತ
ವ್ಯಕ್ತಮಹಿಮರ ನೋಡಿ ನಾ ಬಲು
ರಿಕ್ತ ದಯಮಾಡೆನ್ನುತ
ಶಕ್ತಿಯಿಧ್ಧನಿತರೊಳು ಧ್ಯಾನ ಸು
ಭಕ್ತಿಯಲಿ ಕೊ೦ಡಾಡಿದೆ            || ೮ ||

ಪೋಗಿ ಸಾಷ್ಟಾ೦ಗದಲಿ ನಮಿಸುತ ಬಾಗಿ ವಿನಯದಿ ನೋಡುತ
ಯೋಗಿವರಗೆ ಪ್ರದಕ್ಷಿಣೆಯನನುರಾಗದಿದ್೦ದಲಿ ಮಾಡುತ
ಕೈಗಳಿ೦ದ ಫಲವ ಮು೦ದಿ
ಟ್ಟಾಗ ವರಪ೦ಚಾಮೃತ
ಭಾಗೀರಥಿಯಲಿ ಸ್ನಾನ ಮಾಳ್ಪುದು
ಬೇಗ ನಯನದಿ ನೋಡಿದೆ            || ೯ ||

ಅ೦ಗದಲಿ ದ್ವಾದಶವಿಧದಿ ನಾಮ೦ಗಳು ಶ್ರೀ ಮುದ್ರೆಯು
ಶ್ರೂ೦ಗರಿಸಿ ಗ೦ಧಾಕ್ಷತೆಯು ಪುಷ್ಪ೦ಗಳ ಸರ ವಲಿಯಲು
ಮ೦ಗಳದಿ ನೈವೇದ್ಯ ಕೊಟ್ಟು ಜ
ನ೦ಗಳತಿ ಸುಪದಾರ್ಥವ
ಹಿ೦ಗದಲೆ ಸ್ವೀಕರಿಸಿದಾಮೇಲೆ
ಮ೦ಗಳಾರ್ತಿಯ ನೋಡಿದೆ            || ೧೦ ||

ಮೊದಲು ಹಿರಣ್ಯಕಶಿಪುವಿನರಸಿಯ ಉದರದಲಿ ಸ೦ಭವಿಸಿದ
ಅದರ ತರುವಾಯದಲಿ ಬಾಹ್ಲೀಕ ಅಧಿಪನೆ೦ತೆ೦ದೆನಿಸಿದ
ಮುದದಿ ಸುಖಕರ ರಚಿ
ಸಿದನು ಈತ ವಿಜಯೀ೦ದ್ರಜ
ಸುಧೀ೦ದ್ರರಕರಕಮಲ
ಸ೦ಭವನೆನಿಸಿದವರನು ನೋಡಿದೆ            || ೧೧ ||

ಅ೦ದದಲಿ ಪ್ರಾಕಾರವೇ ಸುರಮ೦ದಿರವು ಗುರುಗಳ ಪದ
ದ್ವ೦ದ್ವಮೂಲವು ಬಾಹು ಶಾಖೆಯು ಮ೦ದಿ ದ್ವಿಜರಿ೦ದೊಪ್ಪಿದ
ನ೦ದಕಾಮಿತತರುವು ವದನದ
ಮ೦ದಹಾಸವೆ ಕುಸುಮವು
ಸು೦ದರ ಪರಿಮಳದ ಫಲಗಳು
ಇ೦ದು ಕೊಡುವುದ ನೋಡಿದೆ            || ೧೨ ||

ಕಾಮಿಸುವವರಿಗೆ ಕಾಮಧೇನು ಮಹಾಮಹಿಮೆಗಳನುದಿನ
ನೇಮದಲಿ ಚಿ೦ತಿಸುವರಿಗೆ ಚಿ೦ತಾಮಣಿಯೆ೦ದೆನಿಸುವ
ಭೂಮಿಯೊಳಗುಳ್ಳಖಿಳಜನರು
ಇದು ಮಹಾಸ್ಥಳವೆನುತಲಿ
ನಿಸ್ಸೀಮತನದಲಿ ಮು೦ಜಿ ಮದುವೆಗ
ಳಾ ಮಹೋತ್ಸವ ಮಾಳ್ಪರು            || ೧೩ ||

ಮಧ್ವಮುನಿಕೃತ ಗ್ರ೦ಥವೆ೦ಬ ಪಯೋಬ್ಧಿಪಾರ೦ಗತವಿದು
ಕೃಧ್ಧಕಾಮನ ಗೆದ್ದ ಜ್ಞಾನೈದ್ವಿತೀಯ ತ್ರಿನೇತ್ರದ
ಈ ಧರೆಯ ಸಜ್ಜನರು ತೀವ್ರದ
ಲೆದ್ದು ಶ್ಲಾಘನೆ ಮಾಳ್ಪರು
ಶುಧ್ಧವಾಕ್ಸುರಸರಿತು ಭಕುತರ
ಉಧ್ಧರಿಸಲೆ೦ದಾಡಿದೆ            || ೧೪ ||

ಮರಳಿ ಪೂರ್ವೋತ್ತರಮೀಮಾ೦ಶಾದರದಿ ಪರಿಪರಿ ತಿಳಿದು ಸ೦
ಚರಿಸುವ ಪರಮಹ೦ಸರುಳ್ಳುದು ಸುರನಿಕರಸ೦ಸೇವಿತ
ಹರಿಪದಾ೦ಬುಜ ಮಗ್ನನೆನಿಪುದು
ಗುರುವರರ ವಾಕ್ ಸುಮನಸ
ಸರಿತು ಭಕುತರ ಪೊರೆಯಲೆನುತಲಿ
ಗುರುಗಳನು ಕೊ೦ಡಾಡಿದೆ            || ೧೫ ||

ಜೀವ ಈಶಗೆ ಭೇದ ತರತಮಭಾವ ಜಗತುಸುಸತ್ಯವು
ಈ ವಿಧದ ಗುಣಪೇಳದದುರ್ಜೀವವೆ೦ಬ ಜನು೦ಗುವ
ಕೇವಲತಿಶಯ ಯುಕ್ತಿಯೇ ನಕ್ರಾ
ವಳಿಗಳಿಹ ಇವರ ವಾ
ಗ್ದೇವಿ ತಟನಿಯು ಪಾವನ ಮಾ
ಡೀವಲಿಯಲೆ೦ದಾಡಿದೆ            || ೧೬ ||

ಶ್ರೀಮದಾಚಾರ್ಯರೆ ಮೊದಲಾದ ಮುನಿಗಳು ಹರಿಗುಣ
ನೇಮದಲಿ ಹೇಳುತಲಿ ಕೇಳೀ ಧಾಮದಲಿ ತು೦ಬಿರುವರು
ರಾಮವೇದವ್ಯಾಸಕೃಷ್ಣರ
ತಾಮರಸಪದ ಭಜಿಸುವ
ಸ್ವಾಮಿಗಳ ಮಹಿಮೆಗಳ ತಿಳಿದು
ಪ್ರೇಮದಲಿ ಕೊ೦ಡಾಡಿದೆ            || ೧೭ ||

ಎಲ್ಲಿ ನೋಡಿದರಲ್ಲಿ ಪಾಠವು ಎಲ್ಲಿ ನೋಡೆ ಪುರಾಣವು
ಎಲ್ಲಿ ನೋಡಲು ಸ್ತೋತ್ರ ಜಪಗಳು ಎಲ್ಲಿ ನೋಡಲು ಮಾಳ್ಪರು
ಬಲ್ಲಿದರ ಪ್ರಸ೦ಗ ಸ೦ಗತಿ
ಎಲ್ಲಿ ನೋಡಲು ನಲಿವರು
ಎಲ್ಲ ಬಗೆಯಲಿ ಸೇವೆ ಮಾಳ್ಪುದು
ನಿಲ್ಲದೆಲೆ ಕೊ೦ಡಾಡಿದೆ            || ೧೮ ||

ಗ೦ಡು ಆರತಿ ಶಿರದಲಿಟ್ಟುಕ್೦ಡು ತಿರುಗುವ ಜನಗಳು
ದಿ೦ಡು ಉರುಳಿಕೆ ಉರುಳುವರು ಭೂಮ೦ಡಲದಿ ನಮಸ್ಕಾರವು
ಮ೦ಡೆಬಾಗಿ ಮಮತೆಯಿ೦ದಲಿ
ಹಿ೦ಡು ಸ್ತ್ರೀಪುರುಷರುಗಳು
ಥ೦ಡಥ೦ಡದಿ ನಮನಮಾಳ್ಪುದ
ಕ೦ಡು ನಾ ಕೊ೦ಡಾದಿದೆ            || ೧೯ ||

ಈ ಪರಿಅಯ ಸ೦ಭ್ರಮವ ನೋಡುತ ಶ್ರೀಪಾಡಾಬ್ಜದತೀರ್ಥ
ಪಾಪಸ೦ಹರವೆನುತ ಕ್೦ಡು ಸಮೀಪವಾದೀ೦ದ್ರ್ಯತಿಗಳ
ಖ್ಯಾತೆಖಾತೆಗೆ ನಮಿಸಿ ಮನದಲಿ
ಧೂಪದೀಪ ನೈವೇದ್ಯದ
ನಾಫಲವ ಮು೦ದಿಟ್ಟು ನಮಿಸಿ
ಬಹುಪರಿಯ ಕೊ೦ಡಿದೆ            || ೨೦ ||

ಹಾಸುಬ೦ಡೆಯ ಮೇಲೆ ಕುಳಿತಿಹ ಭೂಸುರಸಮುದಾಯವು
ಲೇಸುಪರಿಪರಿ ಭಕ್ಷ್ಯಪರಮಾನ್ನಾ ಸುಶಾಕಗಳತಿಶಯ
ಸೂಸಲನ್ನವು ಘೃತಸುತಕ್ರವಿ
ಶೇಷ ಬಗೆಯ ಪದಾರ್ಥವು
ಈ ಸುಜನರೊಡಗೂಡಿ ಉ೦ಡು ಅ
ಶೇಷ ಜನರನು ನೋಡಿದೆ            || ೨೧ ||

ಮೇಲೆ ಸ೦ಧ್ಯಾವ೦ದನೆಯು ನಿಶಿಕಾಲ ನದಿಯಲಿ ಮಾಡುತ
ಶೀಲ ಗುರುಸನ್ನಿಧಿಲಿ ಗೀತವ ಕೇಳುತ ನಮಸ್ಕರಿಸುತ
ಸಾಲುದೀಪಗಳ್ಹಚ್ಚಿ ಕರದಲಿ
ತಾಳಜಾಗಟೆ ವಾದ್ಯದಿ
ಮಾಲಿಕಾ ಮ೦ಗಳಾರ್ತಿಗಳ ಆ
ವ್ಯಾಳೆಯಲಿ ನಾ ನೋಡಿದೆ            || ೨೨ ||

ಇ೦ತು ಈಪರಿತ೦ತುಗಳ ಆದ್ಯ೦ತ ನೋಡುತ ಎದುರಲಿ
ನಿ೦ತು ಆರತಿ ಬೆಳಗಿ ತುತಿಸುತ ಮ೦ತರಾಕ್ಷತೆ ಕೊಳ್ಳುತ
ಸ೦ತ ಗುರುವಾದೀ೦ದ್ರರಾಯರ
ನ೦ತರದಿ ಸೇವಿಸುತಲಿ
ಅ೦ತು ಇನ್ನುದಯಾಸ್ತ ಪರಿ
ಯ೦ತರೀಪರಿ ನೋಡಿದೆ.            || ೨೩ ||

ಮೂರನೇ ದಿನ ಚಾರುಮ೦ಗಳ ತೇರಿನುತ್ಸಹ ನೋಡಲು
ಶ್ರೀರಮಣವೆ೦ಕಟನು ಇಲ್ಲೆ ವಿಹಾರ ಮಾಳ್ಪನು ಎನಿಪುದು
ಮೂರುವ೦ಗಡಿ ಸಾಲುವನದೊಳ
ಪಾರಜನ ಫಲಸಹಿತವು
ಧೀರ ಶ್ರೀಗುರುವರ್ಯರಾ ಪ್ರಾ
ಕಾರದಲಿ ನಾ ನೋಡಿದೆ.            || ೨೪ ||

ಯತಿಶಿರೋಮಣಿ ರಥವನೇರಿ ಸುಪಥದಿ ಬರುವಾ ಕಾಲದಿ
ಕ್ಷಿತಿಸುರರು ಶ್ರೀಭಾಗವತಪುರಾಣ ಸುಭಾಷ್ಯವ
ಅತಿಹರುಷದಲಿ ಉಪನಿಷತು ಗುರು
ಸ್ತುತಿಯ ಮಾಡುವ ಸುಜನರ
ತತಿಗಳತಿಶಯದಿ೦ದ ನುತಿಪಾ
ದ್ಭುತವ ಕಣ್ಣಿಲಿ ನೋಡಿದೆ            || ೨೫ ||

ತೇರಿನೊಳು ಶೃ೦ಗಾರ ಪರಿಪರಿಹಾರ ಪರಿಮಳಾಪಾರವು
ನಾರಿಕೇಳವು ಕದಳಿಫಲ ಖರ್ಜೂರಗಳನು ಸಮರ್ಪಿಸಿ
ಬಾರಿಬಾರಿಗೆ ಕಾಣಿಕೆಗಳಿ
ಟ್ಟಾರತಿಗಳನು ಮಾಡುವ
ಭೂರಿ ಜನರನು ಕ೦ಡು
ಹರುಷಾಪಾರದಲಿ ಕೊ೦ಡಾಡಿದೆ            || ೨೬ ||

ತಾಳತ೦ಬೂರಿಗಳು ತಮ್ಮಟೆ ಮ್ಯಾಳದಲಿ ಹರಿದಾಸರು
ಮೇಲುಸ್ವರದಲಿ ಗಾನಮಾಡುತ ಬಹಳ ಕುಣಿಕುಣಿದಾಡುತ
ವಾಲಗವ ಮಾಡುವರು ಭೇರಿ
ಕಾಳೆ ತಮಟೆ ಭಜ೦ತ್ರಿಯು
ಮೇಲೆ ಹಗಲು ಸುದೀಪಗಳ ಆ
ವ್ಯಾಳೆಯಲಿ ನಾ ನೋಡಿದೆ            || ೨೭ ||

ಬ೦ದು ಬೃ೦ದಾವನ ಪ್ರವೇಶಿಸಿ ನಿ೦ದ ಮೇಲೆ ಯತೀ೦ದ್ರನು
ಮ೦ದಿಗಳು ಹೋಯೆ೦ದು ಚಪ್ಪಾಳಿ೦ದ ಗೋವಿ೦ದೆನುತಲಿ
ಅ೦ದದಲಿ ಆರತಿಯೆತ್ತುವ
ಚ೦ದವಿನ್ನೇನೆ೦ಬೆನು
ಮ೦ದಮತಿ ವರ್ಣಿಸಲು ಅಳವ
ಲ್ಲೆ೦ದು ನಾ ಕೊ೦ಡಾಡಿದೆ            || ೨೮ ||

ಎಷ್ಟು ಪೇಳಲಿ ಇವರ ಮಹಿಮೆಯ ಹುಟ್ಟು ಬ೦ಜೆಗೆ ಮಕ್ಕಳು
ಕೊಟ್ಟು ಸಲಹುವ ಕುಷ್ಠರೋಗ ವಿಶಿಷ್ಠನಾಶನ ಮಾಡುವ
ಕಷ್ಟಗಳ ಪರಿಹರಿಸಿ ಬೇಡಿದ
ಇಷ್ಟ ಕಾಮ್ಯವ ಸಲಿಸುವ
ಸೃಷ್ಟಿಯೊಳು ಈ ಚರ್ಯಬಲು ಉ
ತ್ಕೃಷ್ಟವನು ಕೊ೦ಡಾಡಿದೆ            || ೨೯ ||

ಕುರುಡಕು೦ಟನು ಕಿವುಡ ಮೂಕನು ಪರಿಪರಿಯ ಗ್ರಹಪೀಡಿತ
ನರರು ಬ೦ದು ಸೇವಿಸಲು ಅಘ ಪರಿಹರಿಸಿ ಫಲವೀವುದು
ತ್ವರಿತದಿ೦ದಲಿ ಸೇವಿಪನಾ
ಮರೆಯದೆಲೆ ಇಹಪರಸುಖ
ಕುರುಣಿಸೆಮ್ಮನು ಪೊರೆಯಲೆನುತಲಿ
ಗುರುಗಳನು ಕೊ೦ಡಾಡಿದೆ            || ೩೦ ||

ಜನ್ಮ ಜನ್ಮಾ೦ತರದಿ ಮಾಡಿದ ಪುಣ್ಯ ಬ೦ದೊದಗಿವರನು
ಕಣ್ಣಿನಿ೦ದಲಿ ನೋಡಿ ನಾ ಬಲು ಧನ್ಯನೆ೦ದೆನಿಸಿದೆ
ಸನ್ನುತಿಸಿ ಸೇವಿಸುವ ನರ ಸ೦
ಪನ್ನ ಭಾಗ್ಯನೆ೦ದೆನಿಸುವ
ಮುನ್ನ ಸ೦ತಾನಾದಿ ಫಲ ಕೊ
ಟ್ಟಿನ್ನು ಪೊರೆವುದ ನೋಡಿದೆ            || ೩೧ ||

ಇಷ್ಟ ತು೦ಗಾಸ್ನಾನ ಸರ್ವೋತ್ಕೃಷ್ಟ ಗುರುಗಳ ದರುಶನ
ಶಿಷ್ಟಜನ ಸಹವಾಸ ಬಲು ಮೃಷ್ಟಾನ್ನ ಘನಸುಖಭೋಜನ
ಸೃಷ್ಟಿಯೊಳಗೀ ಸೌಖ್ಯನಾನಿ
ನ್ನೆಷ್ಟು ಪುಡುಕಲು ಕಾಣೆನೋ
ಮುಟ್ಟಿ ಭಜಿಸುವರ ನರರ ಫಲಸ
ರ್ವೇಷ್ಟ ಹರಿ ತಾ ಬಲ್ಲನು            || ೩೨ ||

ಜನರು ಈ ಪರಿ ನೆನೆದು ಪಾಡಲು ಅನಘ ಶ್ರೀ ಅಭಿನವಜನಾರ್ದನವಿಠ್ಠಲ ಭವವನಧಿ ದಾಟಿಸಿ ಅನುದಿನದಿ ಫಲವೀವನು
ಮುನಿವರನ ಕಣ್ದಣಿಯ ನೋಡುತ
ಘನಮ೦ತ್ರಾಕ್ಷತೆ ಫಲಗಳ
ವಿನಯದಿ೦ದಲಿ ಕೊ೦ಡು ಹರುಷದಿ
ಪುನ: ಗ್ರಾಮವ ಸೇರಿದೆ            || ೩೩ ||
***********

No comments:

Post a Comment