Friday 27 December 2019

ರಾಯರ ನೋಡಿರೈ ಶ್ರೀ ಗುರು ರಾಯರ ಪಾಡಿರೈ others

ರಾಯರ ನೋಡಿರೈ ಶ್ರೀ ಗುರು ರಾಯರ ಪಾಡಿರೈ        || ಪ ||
ಶ್ರೀಯರಸನಪ್ರೀಯಾ-ಕಂಜಾಪ್ತಾಭಸು
ಕಾಯಾ – ಕವಿಜನಗೇಯಾ                               || ಅ ||
ಶ್ರೀಸುಧೀ೦ದ್ರಕರಕಮಲಸಂಭೂತಾ- ಬಹುವಿಖ್ಯಾತಾ
ಶ್ರೀಶನ ಗುಣಗಳ ತುತಿಸುವ ಯತಿಶಿರೋಮಣಿಯೋ- ಚಿಂತಾಮಣಿಯೋ
ಈ ಸುಜನರ ಮನಸಿಗೆ ತೋರುವಿದಹ್ಲಾದ- ಸಿರಿಪ್ರಹ್ಲಾದ                                                   || ೧ ||
ದಂಡಕಮಂಡಲ ಕಾಷಾಯವು ಸುವಸನ-ವೇದವ್ಯಾಸನಾ
ಪುಂಡರೀಕಪದಭಂಗಾ-ಮುನಿಕುಲೋತ್ತುಂಗ
ಮಂಡಲದೊಳು ಬಹು ತೋಂಡರ ಪರಿಪಾಲಕ-ವರಬಾಲ್ಹೀಕ                                               || ೨ ||
ತುಂಗಾತೀರದಿ ಮಂತ್ರಾಲಯದೊಳಗಿರುವೋ-ಕಲ್ಪತರುವೋ
ಗಂಗಾಜನಕ ವಿಹಂಗವಾಹನ ಇಲ್ಲಿಹನು-ನತಸುರಧೇನು
ಮಂಗಳಮಹಿಮರ ದರುಶನ ಮಾತ್ರ ಅಘನಾಶ-ಶ್ರೀಗುರುವ್ಯಾಸ                                                   || ೩ ||
ಪರಿಮಳ ವಿರಚಿಸಿ ಬುಧರಿಗೆ ಬೀರಿದ ಧೀರ-ಗುಣಗಂಭೀರ
ಪರಿಪರಿ ಚರಿತೆಯ ತೋರ್ದ ಭೂದೇವರ ದೇವ-ದೇವಸ್ವಭಾವ
ನರ ಇವರನು ಕ್ಷಣ ಬಿಡದಲೆ ಭಜಿಸಲು ಸುಖವು-ಅಘಪರಿಹರವು                                               || ೪ ||
ದುಷ್ಟಮತವ ಖಂಡಿಸಿ ಹರಿಪರನೆಂದೊರೆದಾ-ಅಭೀಷ್ಟೆಯ ಗರೆದಾ
ಸೃಷ್ಟಿಯೊಳಗೆ ಶ್ರೀಪ್ರಾಣೇಶವಿಠ್ಠಲನ ದಾಸ-ಮುನಿಕುಲೋತ್ತಂಸ
ಎಷ್ಟುಪೊಗಳಲಶಕ್ಯವು ಸದ್ಗುಣಸಾಂದ್ರ-ಶ್ರೀ ರಾಘವೇಂದ್ರ                                                || ೫ ||
************


ರಾಯರ ನೋಡಿರೈ – ಶ್ರೀ ಗುರು ರಾಯರ ಪಾಡಿರೈ        || ಪ ||
ಶ್ರೀಯರಸನಪ್ರೀಯಾ-ಕಂಜಾಪ್ತಾಭಸು
ಕಾಯಾ – ಕವಿಜನಗೇಯಾ                               || ಅ ||

ಶ್ರೀಸುಧೀ೦ದ್ರಕರಕಮಲಸಂಭೂತಾ- ಬಹುವಿಖ್ಯಾತಾ
ಶ್ರೀಶನ ಗುಣಗಳ ತುತಿಸುವ ಯತಿಶಿರೋಮಣಿಯೋ- ಚಿಂತಾಮಣಿಯೋ
ಈ ಸುಜನರ ಮನಸಿಗೆ ತೋರುವಿದಹ್ಲಾದ- ಸಿರಿಪ್ರಹ್ಲಾದ     || ೧ ||

ದಂಡಕಮಂಡಲ ಕಾಷಾಯವು ಸುವಸನ-ವೇದವ್ಯಾಸನಾ
ಪುಂಡರೀಕಪದಭಂಗಾ-ಮುನಿಕುಲೋತ್ತುಂಗ
ಮಂಡಲದೊಳು ಬಹು ತೋಂಡರ ಪರಿಪಾಲಕ-ವರಬಾಲ್ಹೀಕ     || ೨ ||

ತುಂಗಾತೀರದಿ ಮಂತ್ರಾಲಯದೊಳಗಿರುವೋ-ಕಲ್ಪತರುವೋ
ಗಂಗಾಜನಕ ವಿಹಂಗವಾಹನ ಇಲ್ಲಿಹನು-ನತಸುರಧೇನು
ಮಂಗಳಮಹಿಮರ ದರುಶನ ಮಾತ್ರ ಅಘನಾಶ-ಶ್ರೀಗುರುವ್ಯಾಸ   || ೩ ||
********

No comments:

Post a Comment