Friday 27 December 2019

ಇಂದು ಎನ್ನನು ಬಂದು ರಕ್ಷಿಸೋ ankita janardhana vittala

ಇಂದು ಎನ್ನನು ಬಂದು ರಕ್ಷಿಸೋ
ತಂದೆ ಗುರುರಾಘವೇಂದ್ರನೇ
ಮಂದಮತಿ ನಾ ಮನದಿ ಮಾಡುವ
ಕುಂದುಗಳ ನೀನೆಣಿಸದೆ                || ಪ ||

ಭಕ್ತಿ ಕರ್ಮ ವಿರಕ್ತಿಯನು ಮಾಡಿ
ಭಕ್ತಜನ ನಿನ್ನ ಸಂಗದೊಳು ನಲಿದು
ಉಕ್ತಿವಂದನ ನುಡಿದು ಪರಮಾಸಕ್ತಿಯಿಂದ ಪಾಡುತ
ತ್ಯಕ್ತಿಸಿ ವಿಷಯಾಂಬುಧಿಯನು
ಮುಕ್ತಿದಾತನ ನಾಮ ಮುಂಕೊಂಡು
ಯುಕ್ತಿಯಿಂದಾಚರಿಸದಲೆ ಸಲಹೊ ಶಕ್ತ ನೀನೆಂದು ನಂಬಿದೆ    || ೧ ||

ವಾರ್ತೆ ನುಡಿ ಸರಿ ಕೀರ್ತಿ ಪುರುಷನೆ
ಆರ್ತನಾಗಿ ಆಚರಿಪ ಜಗ
ಪಾರ್ಥಸಖನಾಪಾರ ತಂತ್ರಬಲ್ಲ ಭ್ರಾತೃಮಾತೃ
ಪಿತೃಬಒಧುವೆ ಪೂರ್ತಿಸದೊ ಮನ
ಸ್ತೋತ್ರ ಮಾಡಲು ತೀರ್ಥತುಂಗತೀರವಾಸನೆ
ಮೂರ್ತಿಮಂತದಿ ನಿಂತು ಮುಖದಾ ಮೂರ್ತಾಮೂರ್ತದಿ ಮುನಿರಾಯ        || ೨ ||

ಕರವಪಿಡಿ ಜ್ಞಾನಕಾಮಧೇನುವೆ
ಚರಣ ಪೊಂದಿದೆ ಚಿಂತಾಮಣಿಯೆಂದು
ನರಮಾತ್ರದವ ಮರೆತ ಕಾಲಕು ಪರಿಗ್ರಹವ ಮಾಡಿ ಪರಸುಖ
ಪರಿಪಾಲಿಪ ರಾಮನಾದ ಜನಾರ್ಧನವಿಠ್ಠಲನ್ನ ಪಾದವ
ನಿರುತ ಹೃದಯ ನಿಮ್ಮದಲಿ ತೋರುವ
ಶರಣಜನ ಮನೋಹರನೆ            || ೩ ||
********

No comments:

Post a Comment