Saturday 11 December 2021

ಲಾಲಿ ಆಡಿದ ರಂಗ ಲಾಲಿ ಆಡಿದ ಬಾಲೆ ರುಕ್ಮಿಣಿ ankita hayavadana LAALI AADIDA RANGA LAALI AADIDA BAALE RUKMINI



ಲಾಲಿ ಆಡಿದ ರಂಗ ಲಾಲಿ ಆಡಿದ || ಪ. ||

ಬಾಲೆ ರುಕ್ಮಿಣಿ ದೇವೇರೊಡನೆ 
ಮೂರು ಲೋಕನಾಳ್ವ ದೊರೆಯು || ಅ. ಪ. ||

ಸಾಧು ಮಚ್ಚಕಚ್ಚಪ ರೂಪನಾಗಿ ಭೇದಿಸಿ ತಮನ 
ಕೊಂದುವೇದವನ್ನು ಮಗನಿಗಿತ್ತು ಭೂದೇವಿಯರೊಡನೆ ಕೃಷ್ಣ || 1 ||

ಬೆಟ್ಟವನ್ನು ಬೆನ್ನಲಿಟ್ಟು ಮಿತ್ರೆ ಮೋಹಿನಿ ರೂಪತಾಳಿ 
ಭಕ್ತರಿಗೆ ಅಮೃತ ಬಡಿಸಿ ಸತ್ಯಭಾಮೆಯರೊಡನೆ ಕೃಷ್ಣ || ೨ ||

ಕ್ರೋಡ ವರಾಹ ರೂಪನಾಗಿ ಆದಿ ಹಿರಣ್ಯಕನ ಕೊಂದು 
ಮೇದಿನಿಯ ಮೇಲಕೆ ತಂದು ರಾಧೆಯೊಡನೆ ನಗುತ ಕೃಷ್ಣ || ೩ ||

ಪುಟ್ಟ ಬಾಲನ ನುಡಿಯ ಕೇಳಿ ಕೆಟ್ಟ ಕಶ್ಯಪನುದರ ಸೀಳಿ 
ಅಷ್ಟ ಮಂಗಳ ವಾದ್ಯವಾಗಲು ಅಷ್ಟ ಸ್ತ್ರೀಯರೊಡನೆ ಕೃಷ್ಣ || ೪ ||

ಯುಕುತಿಯಿಂದ ಭೂಮಿ ಅಳೆದು ಭಕುತ ಬಲಿಯ ತಲೆಯ ತುಳಿದು 
ಶಕುತನೆಂದು ಪೊಗಳೆ ಸುರರು ಲಕುಮಿಯೊಡನೆ ನಗುತ ಕೃಷ್ಣ || ೫ ||

ಯುದ್ಧದಲಿ ಕೊಡಲಿ ಪಿಡಿದು ಗುದ್ದಿ ಕ್ಷತ್ರೇರ ಶಿರವ 
ತರಿದುಗೆದ್ದ ಸಿಂಹನೆನಿಸಿಕೊಂಡು ಪದ್ಮಾವತಿಯ ಕೂಡೆ ಕೃಷ್ಣ || ೬ ||

ಸೇತು ಬಂಧನವನ್ನೆ ಮಾಡಿ ಧೂರ್ತ ರಾವಣನ್ನ ಕೊಂದು 
ಖ್ಯಾತಿ ಪಡೆದು ಪುರಕೆ ಬಂದು ಸೀತೆಯೊಡನೆ ರಾಮಚಂದ್ರ || ೭ ||

ಒಂದು ಏಳು ಎಂಟು ಸಾವಿರ ಇಂದುಮುಖಿಯರನ್ನು ಕೂಡಿ 
ಮಂದ ಮಾರುತ ಚಂದ್ರ ಬರಲು ನಂದ ಗೋಕುಲದ ದೊರೆಯ ||  ೮ ||

ಅಂಬರವ ತೊರೆದು ದಿಗಂಬರ ವೇಷವನ್ನೆ ಧರಿಸಿ ಮಂಗಳಾಂಗ 
ಮಾರ ಜನಕ ರಂಗನಾಯಕಿಯೊಡನೆ ಕೃಷ್|| ೯ ||

ಅಚ್ಚಮುತ್ತಿನಾಭರಣವಿಟ್ಟು ಲಕ್ಷವಿಲ್ಲದೆ ಹಯವನೇರಿ 
ಭಕುತರಿಗೆ ಅಭಯ ಕೊಡುತ ಭಕ್ತ ವತ್ಸಲ ಹಯವದನ || ೧೦ ||
***********

ಲಾಲಿ ಆಡಿದ ರಂಗ ಲಾಲಿ ಆಡಿದ ||ಪ||
ಬಾಲೆ ರುಕ್ಮಿಣಿ ದೇವೇರೊಡನೆ |
ಮೂರು ಲೋಕನಾಳ್ವ ದೊರೆಯು ||ಅ.ಪ||
ಸಾಧು ಮಚ್ಚಕಚ್ಚಪರೂಪನಾಗಿ |
ಭೇದಿಸಿ ತಮನ ಕೊಂದು ||
ವೇದವನ್ನು ಮಗನಿಗಿತ್ತು |
ಭೂದೇವಿಯರೊಡನೆ ಕೃಷ್ಣ ||೧||
ಬೆಟ್ಟವನ್ನು ಬೆನ್ನಲಿಟ್ಟು |
ಮಿತ್ರೆಮೋಹಿನಿ ರೂಪತಾಳಿ ||
ಭಕ್ತರಿಗೆ ಅಮೃತ ಬಡಿಸಿ |
ಸತ್ಯಭಾಮೆಯರೊಡನೆ ಕೃಷ್ಣ ||೨||
ಕ್ರೋಢ ವರಾಹ ರೂಪನಾಗಿ |
ಆದಿ ಹಿರಣ್ಯಕನ ಕೊಂದು ||
ಮೇದಿನಿಯ ಮೇಲಕೆ ತಂದು |
ರಾಧೆಯೊಡನೆ ನಗುತ ಕೃಷ್ಣ ||೩||
ಪುಟ್ಟಬಾಲನ ನುಡಿಯ ಕೇಳಿ |
ಕೆಟ್ಟ ಕಶ್ಯಪನುದರ ಸೀಳಿ ||
ಅಷ್ಟಮಂಗಳವಾದ್ಯವಾಗಲು |
ಅಷ್ಟ ಸ್ತ್ರೀಯರೊಡನೆ ಕೃಷ್ಣ ||೪||
ಯುಕುತಿಯಿಂದ ಭೂಮಿ ಅಳೆದು |
ಭಕುತ ಬಲಿಯ ತಲೆಯ ತುಳಿದು ||
ಶಕುತನೆಂದು ಪೊಗಳೆ ಸುರರು |
ಲಕುಮಿಯೊಡನೆ ನಗುತ ಕೃಷ್ಣ ||೫||
ಯುದ್ಧದಲಿ ಕೊಡಲಿ ಪಿಡಿದು |
ಗುದ್ದಿ ಕ್ಷತ್ರೇರ ಶಿರವ ತರಿದು ||
ಗೆದ್ದ ಸಿಂಹನೆನಿಸಿಕೊಂಡು |
ಪದ್ಮಾವತಿಯ ಕೂಡೆ ಕೃಷ್ಣ ||೬||
ಸೇತುಬಂಧನವನ್ನೆ ಮಾಡಿ |
ಧೂರ್ತರಾವಣನ್ನ ಕೊಂದು ||
ಖ್ಯಾತಿಪಡೆದು ಪುರಕೆ ಬಂದು |
ಸೀತೆಯೊಡನೆ ರಾಮಚಂದ್ರ ||೭||
ಒಂದು ಏಳು ಎಂಟುಸಾವಿರ |
ಇಂದುಮುಖಿಯರನ್ನು ಕೂಡಿ ||
ಮಂದಮಾರುತ ಚಂದ್ರ ಬರಲು |
ನಂದಗೋಕುಲದ ದೊರೆಯು ||೮||
ಅಂಬರವ ತೊರೆದು ದಿ|
ಗಂಬರ ವೇಷವನ್ನೆ ಧರಿಸಿ ||
ಮಂಗಳಾಂಗ ಮಾರಜನಕ |
ರಂಗನಾಯಕಿಯೊಡನೆ ಕೃಷ್ಣ ||೯||
ಅಚ್ಚಮುತ್ತಿನಾಭರಣವಿಟ್ಟು |
ಲಕ್ಷವಿಲ್ಲದೆ ಹಯವನೇರಿ ||
ಭಕುತರಿಗೆ ಅಭಯಕೊಡುತ |
ಭಕ್ತವತ್ಸಲ ಹಯವದನ ||೧೦||
ಕೃತಿಕಾರರು
ಶ್ರೀ ವಾದಿರಾಜರು
******

No comments:

Post a Comment