Wednesday 3 November 2021

ಅಂದಾದ ರಂಗವಲಿಯನ್ಹಾಕಿ ದೇವನ ಮುಂದೆ ankita madhwesha krishna ANDAADA RANGAVALIYANHAAKI DEVANA MUNDE

 



🌹🌹ಪದ್ಮದ ರಂಗೋಲೆ🌹🌹 ( sampradayada hadu)

ಅಂದಾದ ರಂಗವಾಲಿಯನ್ಹಾಕಿದೇವನ  ಮುಂದೆ

ಅನಂತ ಪುಣ್ಯವ ಗಳಿಸಿಕೊಳ್ಳಿ||ಪಲ್ಲ||

 ಗೌರಿ  ಪುತ್ರನ ಚರಣಕ್ಕೆ ಎರಗಿ

 ವರವ ಬೇಡುತ ಸರಸ್ವತಿ ದೇವಿಗೆ 

 ಹರುಷದಿ ಹಾಕುವ  ರಂಗವಾಲಿಯ

 ಅರುಹುವೆ ನಿಮಗೆ ಅತಿ ಭಕ್ತಿಯಿಂದ||೧||


 #ಹುಣ್ಣಿಮೆ  #ಮುಂದಿನ #ಏಕಾದಶಿ #ದಿನದಿ 

   #ಬೃಹಸ್ಪತಿ #ವಾರವು #ಬಂದಿರಲಾಗ

 #ಒಂಬತ್ತು #ಪದ್ಮವ #ಹಾಕಬೇಕೆಂದು

#ಹಿರಿಯರು #ಪೇಳಿದ #ರೀ #ಮಾತ||೨||


 ಶುಧ್ಧ ಸ್ನಾನವ ಮಾಡಿ ಮಡಿಯುಟ್ಟು

 ದೇವನಮುಂದೆ ರಂಗವಾಲಿಯನ್ಹಾಕಿ 

ಅರಿಷಿಣ ಕುಂಕುಮ ದೀಪ ಧೂಪದಿ

 ಹುಣ್ಣಿಮೆ ವರಿಗೆ ಹಾಕಬೇಕೆನುತ||೩||


#ಒಂಬತ್ತು #ಶಂಖು #ಚಕ್ರ #ಪದ್ಮವ #ಹಾಕುತ್ತ

 #ಒಂಬತ್ತು #ವರುಷವು #ನಿಷ್ಟೆಯಿಂದಲಿ

 #ಸುವರ್ಣದ #ಪದ್ಮವ ಮಾಡಿಸುತ್ತಲಿ

ಬ್ರಾಹ್ಮಣರಿಗೆ ದಾನ ಕೊಡಬೇಕೆನ್ನುತಲಿ||೪||


 ಪವಿತ್ರವಾದ ವ್ರತ ದಾವುದೆನ್ನುತ

 ರುಕ್ಮಿಣಿ  ಹರಿಯ ಕೇಳುತಲಿರಲು

 ಶ್ರೀ ಕೃಷ್ಣನು ನುಡಿದನು ನಸುನಗುತಲಿ

ಈ ಪದ್ಮದ ರಂಗೋಲೆ ಹಾಕಬೇಕೆನುತ||೫||


 ಕಷ್ಟ ದಾರಿದ್ರ್ಯ ವು ದೂರ ಸರಿಯುವವು

ಶ್ರೇಷ್ಟ ಜೀವನ ಸಾಗಿ ಹೋಗುವುದು

 ಲೋಲನ ದಯವು ದೊರಿಯುವದೆಂದು

 ಹಯವದನನು ತಾ ನುಡಿದಿಹನಂದು||೬||


 ನಾರಿಯರಿಗೆ ಬಂದ ರಜಸ್ವಲ ದೋಷವು

 ದೂರವಾಗುವುದೆಂದು ಕೃಷ್ಣನು ನುಡಿಯೆ

 ಸಾರಸಮುಖಿಯರು ಸರಸದಿಂದಲಿ ಹಾಕಿ

 ಮಧ್ವೇಶಕೃಷ್ಣನ  ದಯ ಪೊಂದಲೆಂದು||೭||

***


No comments:

Post a Comment