Wednesday 1 September 2021

ದಾಸರಾಯ ವಿಜಯದಾಸರಾಯ ದೋಷವೆಣಿಸದೆ ಸದಾ ಪೋಷಿಸು ಕರುಣದಿ ankita shyamasundara vijaya dasa stutih

 ..

ದಾಸರಾಯ ವಿಜಯದಾಸರಾಯ |

ದೋಷವೆಣಿಸದೆ ಸದಾ ಪೋಷಿಸು ಕರುಣದಿ ಪ


ಸಕಲಜಗತ್ತಿಗೆ ಲಕುಮೀಶಪರೆನೆಂದು

ಮಖವಾಚರಿಪ ಮುನಿ ನಿಕರಕೆÉ ಸಾರಿದ 1


ಜ್ಞಾನಿ ಶಿರೋಮಣಿ ಧೇನುಪಾಲಾರ್ಯರ |

ಮಾನಸ ಕುಮುದಕೆÉ ಏಣಾಂಕನೆನಿಸಿದ 2


ಮುದ ತೀರ್ಥಾಗಮ ಮರ್ಮ ಮಧುರ ಕನ್ನಡದಲಿ

ವಿಧ ವಿಧ ರಚಿಸಿದ ಸದಮಲ ಸುಚರಿತ್ರ 3


ಬೇಸಿಗೆ ಬಿಸಲೊಳು ರಾಸಭ ತೃಷೆಯಿಂದ |

ಷಾಸಿಯಾಗಿರೆ ಜಲಪ್ರಾಶನಗೈಸಿದ ದಾಸರಾಯ 4


ನಿಷ್ಟೆಯಿಂದಲಿ ಮನ ಮುಟ್ಟಿ ಭಜಿಪರಿಗೆ

ಇಷ್ಟಾರ್ಥಗರೆಯುವ ಪುಟ್ಟ ಬದರಿವಾಸ 5


ತಪ್ಪದೆ ಭಕ್ತಿಲಿ ಬರುವ ಭಕ್ತರಿಗೆಲ್ಲ

ತಪ್ಪು ಮನ್ನಿಸಿ ಭಜಿಪಭಕ್ತರಿಗೊಲಿದು

ಪೊರೆವ ಚಿಪ್ಪಶಿಖರನಿಲಯ 6


ಪಾಮರನಾದೆನಗೆ ಶಾಮಸುಂಧದರ ಸ್ವಾಮಿ

ನಾಮಾಮೃತಪಾನ ಪ್ರೇಮದಿ ನೀಡಯ್ಯ ದಾಸರಾಯಾ 7

***


No comments:

Post a Comment