Wednesday 1 September 2021

ಶರಣ ಜನರ ಕಲ್ಪತರುವೆ ನಿನ್ನ ಕರುಣಾದಿ ಪೊರಿ ಎನ್ನ ಗುರುವೇ ankita gurujagannatha vittala

..

ಶರಣಜನರ ಕಲ್ಪತರುವೆ ನಿನ್ನ

ಕರುಣಾದಿ ಪೊರಿ ಎನ್ನ ಗುರುವೇ ಪ


ಶರಣರಿಲ್ಲದೆ ಕರುಣಿಸೆಂದು

ಶರಣು ಪೊಕ್ಕೆನೊ ಚರಣ ಕಮಲಕೆ

ಶರಣೆಂದೂ ಕರುಣದಿಂದಲಿ

ಕರುಣಿಸೆನ್ನನು ಕರುಣಸಾಗರ ಅ.ಪ


ತಾಪತ್ರಯದಿ ಬಹುಬೆಂದೇ ಭವ -

ಕೂಪಾರದೊಳಗತಿ ನೊಂದೇ

ಪಾಪಮೋಚಕ ನಿಷ್ಪಾಪಿ - ಜನರ ಪಾಲ

ಕಾಪಾಡೊ ನೀ ಎನ್ನ ಅಪಾರ ಮಹಿಮನೆ

ದ್ವಾಪರದಿ ಯದುವರನು ಸಾಂ -

ದೀಪಪುತ್ರನ ತೋರಿ ಕಾಯ್ದನು

ಭೂಪ ಬಕನಳಿದು ಸಲಹಿದ -

ನಾಪರಿಯಲಿ ಎನ್ನಸಲಹೋ 1


ಕಾಮಿತ - ಫಲದ ನೀನೆಂದೂ ಬಲು -

ಪ್ರೇಮಾದಿ ಬಳಿಗೆ ನಾ ಬಂದೂ

ಸ್ವಾಮಿ ನೀ ಗುರುಸಾರ್ವಭೌಮ ನಿನ್ನಂಘ್ರಿಯುಗ -

ತಾಮರಸವ ಮನೋ - ಧಾಮಾದಿ ನಿಲಿಸೆಂದೆ

ರಾಮ ಕೌಶಿಕÀ ಮಖವ ಕಾಯ್ದನು

ಭೀಮ ವಿಪ್ರರ ಭೀತಿ ಬಿಡಿಸಿದ

ಧೂಮಕೇತನನುಂಡು ಕೃಷ್ಣನು

ಆಮಹದ್ಭಯ ಕಳದ ತೆರದಿ 2


ತಾತ ನಿನ್ನನು ಬಾಧೆ ಬಡಿಸೇ ಶಿರಿ -

ನಾಥ ತಾ ಬಂದಾಗ ಬಿಡಿಸೆ

ದಾತ ಗುರುಜಗನ್ನಾಥ ವಿಠಲನತಿ

ಪ್ರೀತಿಯಿಂದಲಿ ನಿನ್ನ ಮಾತು ಕೇಳಿದತೆರ

ಮಾತು ಲಾಲಿಸಿ ಕಾಯೋ ಯತಿಕುಲ -

ನಾಥ ಎನ್ನಪರಾಧ ನೋಡದೆ

ಭೀತಿಯನು ಸದೆದು ಪಾಲಿಸ -

ನಾಥರಕ್ಷಕನಲ್ಲೆ ಗುರುವರ 3

***


 

No comments:

Post a Comment