Wednesday 1 September 2021

ವರವ ಕೊಡೆ ತಾಯೇ ವರಲಕ್ಷ್ಮೀ ವರಗಿರಿ ತಿಮ್ಮಪ್ಪನ ರಾಣಿ ದಯವ ತೋರೇ ankita venkatanatha

 ..

ಶ್ರೀ ವರ ಮಹಾಲಕ್ಷ್ಮೀ ಸ್ತುತಿ

ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ ....


ವರವ ಕೊಡೆ ತಾಯೇ ವರಲಕ್ಷ್ಮೀ ।

ವರಗಿರಿ ತಿಮ್ಮಪ್ಪನ ರಾಣಿ -

ದಯವ ತೋರೇ ।। ಪಲ್ಲವಿ ।।

ಪಂಚಾಕ್ಷರಿ ಪಂಚ-

ಪ್ರಾಣಧಾರನ ವಲ್ಲಭೇ ।

ಪಂಚಭೇದ ಮತ -

ಜ್ಞಾನವ ಕೊಡಮ್ಮಾ ।। ಚರಣ ।।

ಪದ್ಮಮುಖಿ ಪದುಮೆ -

ಪದ್ಮನಾಭನ ಪ್ರಿಯೇ ।

ಪದ್ಮಭವ ನುತ -

ಪದ್ಮೇಶನ ತೋರಮ್ಮಾ ।। ಚರಣ ।।

ಸಿಂಧು ಸುತೆಯ ಬಾರಮ್ಮಾ ।

ಚಂದ್ರ ಸಹೋದರಿ -

ಪೊರೆಯಮ್ಮಾ ।। ಚರಣ ।।

ಇಂದು ಮುಖಿಯಳೇ ನೋಡಮ್ಮಾ ।

ಸಿಂಧುಶಯನನ ಪಾದ -

ಸೇವೆಯ ನೀಡಮ್ಮಾ ।। ಚರಣ ।।

ಮಧ್ವರಾಯರ ಮುದ್ದಿನ ತಾಯೇ ।

ಮೋದದಿ ನೀ ಯೆನ್ನ ಕಾಯೇ ।। ಚರಣ ।।

ಶುದ್ಧ ಮನದಲಿ ನಿನ್ನ ಪತಿ -

ವೇಂಕಟನಾಥನ  ಭಜಿಸುವ ।

ವೈಧಾತೃ ಜ್ಞಾನವ ಕರುಣಿಸಮ್ಮಾ ।। ಚರಣ ।।

" ವಿವರಣೆ "

ವರಗಿರಿ = ತಿರುಪತಿ

ಪಂಚಾಕ್ಷರೀ = ಕೃಷ್ಣಾಯ ನಮಃ

" ಪಂಚಪ್ರಾಣಾಧಾರ "

ಪ್ರಾಣ - ಅಪಾನ - ಸಮಾನ - ಉದಾನ - ವ್ಯಾನ ಎಂಬ 5 ಪ್ರಾಣಗಳಲ್ಲಿ ವ್ಯಾಪ್ತನಾದ ಶ್ರೀಮಹಾವಿಷ್ಣು

ಪದ್ಮಮುಖಿ = ಕಮಲದಂತಾ ಕಣ್ಣುಗಳುಳ್ಳವಳು

ಪದ್ಮಭವ = ಶ್ರೀ ಚತುರ್ಮುಖ ಬ್ರಹ್ಮದೇವರು

ಸಿಂಧು ಸುತೆ = ಸಮುದ್ರರಾಜನ ಮಗಳು

ವೈಧಾತೃ ಜ್ಞಾನ = ಬ್ರಹ್ಮ ಜ್ಞಾನ

ನಾಡಿನ ಸಕಲ ಸಾಧು ಸಜ್ಜನರಿಗೆ ಶ್ರೀ ವರಮಹಾಲಕ್ಷ್ಮೀದೇವಿಯರು ಸಕಲ ಸಂಪತ್ತು - ಆಯುರಾರೋಗ್ಯ ಕೊಟ್ಟು ರಕ್ಷಿಸಲೆಂದು "ಪ್ರಾರ್ಥಿಸುತ್ತಾ"- acharya nagaraju haveri

***


No comments:

Post a Comment