Wednesday 1 September 2021

ಹರಿದಾಸರ ಸಂಗಕೆ ಸರಿಯುಂಟೆ ಗುರು ಕರುಣಕೆ ಇನ್ನು ಪಡಿಯುಂಟೆ ದೇವ ankita shree krishna

..

ಹರಿದಾಸರ ಸಂಗಕೆ ಸರಿಯುಂಟೆ

ಗುರು ಕರುಣಕೆ ಇನ್ನು ಪಡಿಯುಂಟೆ ದೇವ ಪ


ದಾವಾನಲವ ತÀಪ್ಪಿಸಿ ಕಾಡಾನೆಯದÉೀವಗಂಗೆಗೆ ತಂದು ಹೊಗಿಸಿದಂತೆಆವರಿಸಿರುವ ಷಡ್ವರ್ಗ ತಪ್ಪಿಸಿ ಎನ್ನಶ್ರೀವರನ ಕರುಣಾರಸದಿ ತೋಯಿಸುವ 1


ಕಂದಿ ಬೇಸಗೆಯಲ್ಲಿ ನೊಂದ ಚಕೋರಕ್ಕೆಇಂದುಬಿಂಬದ ಮುಂದೆ ಹೊಗಿಸಿದಂತೆನೊಂದ ಹಮ್ಮಮತೆಯ ನೊಂದಿಸಿ ಎನ್ನ ಗೋ-ವಿಂದನ ಪಾದ ಸನ್ನಿಧಿಯ ಸೇರಿಸುವ 2


ಬಲೆಯ ಹಾರಿದ ಎಳೆ ಹುಲ್ಲೆಯ ಮರಿಗಳಿಗೆಒಲಮೆಯಿಂದಲಿ ತಾಯ ತೋರಿಸಿದಂತೆಬಲು ಇಂದ್ರಿಯಗಳ ಸೆರೆಯ ಬಿಡಿಸಿ ಎನ್ನನಳಿನನಾಭನ ಸನ್ನಿಧಿಯ ತೋರಿಸುವ 3


ಕರುಡರಿಗೆ ದಿವ್ಯಾಂಜನ ಹಚ್ಚಿ ಕಣ್ಣಿತ್ತುತೆರ ತೆರದಲಿ ಉಂಬ ನಿಧಿಯನಿತ್ತಂತೆಪರಮ ಮೂಢನಾದ ಎನಗೆ ಜ್ಞಾನವನಿತ್ತುನರಹರಿ ಪಾದ ಸಂದರುಶನವನ್ನೀವ 4


ತಡೆಯಿಲ್ಲದ ಪೂರಾ ತೊರೆಯಲ್ಲಿ ಪೋಪನಪಿಡಿದೆತ್ತಿ ತಡಿಯನು ಸೇರಿಸಿದಂತೆಕಡೆಗೆಟ್ಟು ಭವಾಬ್ಧಿ ನಡುವೆ ಸಿಕ್ಕಿದ ಎನ್ನಪಿಡಿದು ಶ್ರೀಕೃಷ್ಣನಂಘ್ರಿಗಳ ಸೇರಿಸುವ 5

***


No comments:

Post a Comment