Monday 2 August 2021

ವೃಂದಾವನಗಳಿಗೆ ಆನಮಿಪೆ ನಿತ್ಯಾನಂದ ankita jagannatha vittala ನವ ವೃಂದಾವನ ಯತಿ ಸ್ತುತಿ nava vrundavana yati stutih

100% doubt exists- 

*Anyway those who believe in Rayara Mutt please sing the first one, others sing the second one. ಆದರೆ, ಕೇಳಲು ಇಂಪಾಗಿರಲಿ ಅಷ್ಟೇ. ಶ್ರುತಿಬದ್ಧವಾಗಿ ಹಾಡಿರಿ. 😀😀


FIRST ONE 

 ರಾಗ : ಕಾಂಬೋಧಿ  ತಾಳ : ಝಂಪೆ

ವೃಂದಾವನಗಳಿಗೆ -

ಆನಮಿಪೆ ನಿತ್ಯಾ ।

ನಂದತೀರ್ಥರ ಮಧ್ವ-

ಮತೋದ್ಧಾರರೆನಿಪರ । ನವ ।। ಪಲ್ಲವಿ ।।


ವರ ಮಧ್ವಮುನಿ ವಿಮಲ -

ಕರಪದ್ಮ ಸಂಜಾತ ।

ಗುರು ಪದ್ಮನಾಭ ಜಯ-

ಮುನಿ* ಕವೀಂದ್ರ । ತತ್ಕ ।

ರೋರುಹ ಜಾತ 

ವಾಗೀಶತೀರ್ಥ ಮುನಿ ।

ವಾರಿಯ ಗೋವಿಂದಾಖ್ಯ-

ರೊಡೆಯರ ಪವಿತ್ರ ತಮ  ।। ಚರಣ ।।


ವ್ಯಾಸರಾಯರ ಶ್ರೀನಿವಾಸ-

ಮುನಿ ರಾಮಮುನಿ ।

ಶ್ರೀ ಸುರೇಂದ್ರ ಪೌತ್ರರ-

ಸುಧೀಂದ್ರರ ।

ಭೂಸುರರು ಇವರ -

ಸಂತೋಷದಲಿ ಸ್ಮರಿಸಿ । ನಿ ।

ರ್ದೋಷರನು ಮಾಡಿ -

ಅಭಿಲಾಷೆ ಪೂರೈಸುವರ ।। ಚರಣ ।।


ದೇವತೆಗಳು ಇವರು -

ಸಂದೇಹ ಬಡಸಲ್ಲ । ಮಿ ।

ಥ್ಯಾವಾದಿಗಳ ಪರಾಭವ ಮಾಡಿ ।

ಈ ವಸುಂಧರೆಯೊಳಗೆ -

ಕೀರ್ತಿಯುತರಾಗಿ । ಲ ।

ಕ್ಷ್ಮೀವರ ಜಗನ್ನಾಥ-

ವಿಠ್ಠಲನ ಐದಿಹರು ।। ಚರಣ ।।

***


SECOND ONE

೧೯೯೨ರ ಮೈಸೂರು ವಿಶ್ವವಿದ್ಯಾಲಯದ ಪಾಠ


ವೃಂದಾವನಗಳಿಗೆ ಆನಮಿಪೆ ನಿತ್ಯಾ- 

ನಂದತೀರ್ಥರ ಮತೋದ್ಧಾರಕರೆನಿಪ ನವ |

ವರ ಮಧ್ವಮುನಿ ವಿಮಲಕರ ಪದ್ಮ ಸಂಜಾತ

ಗುರು ಪದ್ಮನಾಭ ರಾಮರ ಕವೀಂದ್ರ ತತ್

ಕರ ಸರೋರುಹ ಜಾತ ವಾಗೀಶಮುನಿ ರಘು-

ವರ್ಯ ಗೋವಿಂದಾಖ್ಯ ಒಡೆಯರ ಪವಿತ್ರತಮ |


ಶ್ರೀ ಸುಧೀಂದ್ರಾರ್ಯರ ಪ್ರಪುತ್ರರೆನಿಪ ಸುಧೀಂದ್ರ

ವ್ಯಾಸರಾಯ ಶ್ರೀನಿವಾಸ ಮುನಿಯಾ

ಭೂಸುರರು ಪರಮ ಸಂತೋಷದಲಿ ಸ್ಮರಿಸೆ ನಿ-

ರ್ದೋಷರನೆ ಮಾಡಿ ಅಭಿಲಾಷೆ ಪೂರೈಸುತಿಹ |


ದೇವತೆಗು ಇವರು  ಸಂದೇಹ ಬಡೆ ಸಲ್ಲ, ಮಿ-

ಥ್ಯಾವಾದಿಗಳ ಪರಾಭವ ಮಾಡಿ

ಈ ವಸುಂಧರೆಯೊಳಗೆ ಕೀರ್ತಿಯುತರಾಗಿ, ಲ-

ಕ್ಷ್ಮೀವರ ಜಗನ್ನಾಥವಿಠಲನ ಐದಿಹರ |

****



ನವ ವೃಂದಾವನದ ಯತಿಗಳು  

ಶ್ರೀ ಪದ್ಮನಾಭತೀರ್ಥರು (1324); ಶ್ರೀ ಜಯತೀರ್ಥರು (1388) as per Rayara Mutt / ರಘುವರ್ಯ  ತೀರ್ಥರು (1557) as per Uttaradi Mutt and other mutts; ಶ್ರೀ ಕವೀಂದ್ರತೀರ್ಥರು (1398); ಶ್ರೀ ವಾಗೀಶತೀರ್ಥರು (1406); ಶ್ರೀ ಗೋವಿಂದ ಒಡೆಯರು (1534); ಶ್ರೀ ವ್ಯಾಸರಾಜ ಗುರುಸಾರ್ವಭೌಮರು  (1539); ಶ್ರೀ ಶ್ರೀನಿವಾಸತೀರ್ಥರು (1564); ಶ್ರೀ ರಾಮತೀರ್ಥರು (1584); and ಶ್ರೀ ಸುಧೀಂದ್ರತೀರ್ಥರು (1623);

ಶ್ರೀ ಸುರೇಂದ್ರ ಪೌತ್ರರ ಸುಧೀಂದ್ರರ - ಅಂದರೆ.....ಶ್ರೀ ಸುರೇಂದ್ರತೀರ್ಥರ ಪುತ್ರ  ಶ್ರೀ ವಿಜಯೀಂದ್ರತೀರ್ಥರು - ಶ್ರೀ ವಿಜಯೀಂದ್ರತೀರ್ಥರ ಪುತ್ರ ಶ್ರೀ ಸುಧೀಂದ್ರತೀರ್ಥರು! 

ಆದುದರಿಂದ ಶ್ರೀ ಸುಧೀಂದ್ರತೀರ್ಥರು ಶ್ರೀ ಸುರೇಂದ್ರತೀರ್ಥರಿಗೆ ಪೌತ್ರರು!

ಇಲ್ಲಿ ನೆಲೆಸಿದ ನವ ಯತಿಗಳು ದೇವತೆಗಳು. 

ಪರವಾದಿಗಳನ್ನು ಜಯಿಸಿ ದ್ವೈತ ಮತದ ವಿಜಯ ಪತಾಕೆಯನ್ನು ಹಾರಿಸಿ - ಆಚಂದ್ರಾರ್ಕವಾದ ಕೀರ್ತಿಯನ್ನು ಗಳಿಸಿ - ಲಕ್ಷ್ಮೀಪತಿಯೂ - ಜಗನ್ನಾಥನೂ ಆದ ಶ್ರೀ ಹರಿಯನ್ನು ಹೊಂದಿದರು ( ಐದಿಹರು) ಎಂದು ಪರಿಶುದ್ಧವಾದ ಅರ್ಥ.

****


No comments:

Post a Comment