Monday 2 August 2021

ನಾನೇ ಭ್ರಮಿಸಿದೆನೋ ವಿಷಯ ಸಂಗ ನೀನೇ ನಲಿದಿತ್ತೆಯೋ ankita gopalakrishna vittala

ನಾನೇ ಭ್ರಮಿಸಿದೆನೋ ವಿಷಯ ಸಂಗ

ನೀನೇ ನಲಿದಿತ್ತೆಯೋ ಪ.


ಗಾನಲೋಲನೆ ಕೃಷ್ಣ ಏನೆಂಬುದರಿಯೆನೊ

ಮೌನಿ ಜನಪ್ರಿಯ ಧ್ಯಾನಗಮ್ಯನೆ ರಂಗ ಅ.ಪ.

ಲೋಕ ದೃಷ್ಟಿಯ ಸುಖ ಹೀನತೆಯಿಂದೆ

ನೂಕುತ ದಿನ ಕಳೆದೆ

ಕಾಕು ಯುಕುತಿಯಲ್ಲಿ ವ್ಯಾಕುಲ ಮನಕಿಲ್ಲ

ಶ್ರೀಕಾಂತ ನಿನ್ನಿಚ್ಛೆ ಸುಖದುಃಖ ನಿಕರವ 1

ಆಟ ಪಾಟ ನೋಟವೂ ಊಟ ಕೂಟ

ಕಾಟ ಕರ್ಮಗಳೆಲ್ಲವೂ

ಹಾಟಕಾಂಬರ ನಿನ್ನಾಟವÉನ್ನಲುಭವ

ದಾಟಿಸುವವೊ ತೆರೆ ಏಟಿಗೆ ಕೊಡುವುವೋ 2

ನರಕಕೆ ಕಾರಣವೋ ಹೇ ಶ್ರೀನರ

ಹರಿ ನಿನ್ನ ಪ್ರೀತಿ ಕರವೋ

ಪರಿಪರಿ ಜನ್ಮ ಸಂಚಿತ ಕರ್ಮ ಹರಿಸುತ

ವರ ಸುಖ ಪಾಲಿಪ ಗುರುತಿನ ಪರಿಯೋ 3

ದೇಹಕ್ಕೆ ಹಿತಕರವೋ ಇಲ್ಲವೆ ಮನ

ದಾಹಕ್ಕೆ ಮೃತ ಕರವೋ

ದೇಹ ಮೋಹಾದಿಗಳಳಿದು ನಿಶ್ಚಲ ತತ್ವ

ಶ್ರೀಹರಿ ತೋರುವ ತೆರವೊ ಒಂದರಿಯೆ 4

ಪಾಪಕ್ಕೆ ಹಿತಕರವೋ ಇಲ್ಲವೆ ಮನ

ದಾಹಕ್ಕೆ ಮೃತ ಕರವೋ

ದೇಹ ಮೋಹಾದಿಗಳಳಿದು ನಿಶ್ಚಲ ತತ್ವ

ಶ್ರೀಹರಿ ತೋರುವ ತೆರವೊ ಒಂದರಿಯೆ 5

ಪಾಪಕ್ಕೆ ಕಾರಣವೋ ಈ ಕರ್ಮಗಳ

ಳಾಪದುದ್ಧಾರಕವೋ

ಗೋಪಾಲಕೃಷ್ಣವಿಠ್ಠಲನೆ ಮದ್ಗುರು ಬಿಂಬ

ವ್ಯಾಪಾರದ್ವಯ ನಿಂದು ನೀ ಪ್ರೀತನಾಗಲೊ 6

****


No comments:

Post a Comment