Friday 6 August 2021

ಶರಣೆಂಬೆ ನಾ ಶರ್ವಾಣಿ ವರನ ಸಿರಿಪತಿ ಶಾಙ್ರ್ಗಧರನ ವರಸಿಂಧು ankita bheemashankara

 ..

 kruti by ಭೀಮಾಶಂಕರರು ದಾಸರು bheemashankara


ಶರಣೆಂಬೆ ನಾ ಶರ್ವಾಣಿ ವರನ | ಸಿರಿಪತಿ ಶಾಙ್ರ್ಗಧರನ ವರಸಿಂಧು ನಗರದೊಳು |ಸ್ಥಿರ ಭೋಗಗೊಂಬ ಸಂಗಮನ ಪ


ಬಾಲೇಂದು ಮುಡಿದ ಭಸಿತಾಂಗ | ಕಾಳಿಗರ್ಧಾಂಗಾ |ಪಾಲಿಸಿ ಕೊಡುವರೆ ದೊರೆಯ ಪೇಳಲಿಕಿನ್ನಾರನೈದಾರೆ |ಭಾಲಾಕ್ಷನ ಲೀಲಾ ವಿಲಾಸ ಭೋಳಾ ದೇವೇಶ | ಕಾಲಿ ಗೆರಗಿ ಬ್ರಹ್ಮಾದಿಕರು ಕಾಲಾಂತಕನ ವರ ಪಡೆವರು |ನೀಲಕಂಧರನ ನಿಗಮೋದ್ಧಾರನ ಸ್ಥೂಲ ಶರೀರನ ಸುಖಸಂಚಾರನ ಶೀಲಕ ದೂರನ | ಶಾಂತಾಕಾರನ |ಮಾಲಾಧರನ ಮಹಾ ಗುರುಹರನ1


ಸುರನದೀ ಶಿರಧರನ ಶುಭಕರನ ಪರತರಪುರ ಹರನ | ತರುಣೇಂದು ಕೋಟಿಗಳೊಮ್ಮೆ ನೆರೆದಂತೆ ಕಳೇವರ ಕಳೆಪೊಳೆಯೆ | ನಿರವಧಿ ಸ್ವರೂಪ ನಿಜರೂಪ ಅರಿತವನ ತಾಪ |ಉರಿಯಪ್ಪಿದಾ ಕರ್ಪುರದಂತೆ ಕರಗದುಳಿವುದೇ ಅದರಂತೆ ಪರಮ ಪವಿತ್ರನ ಪಾವಕ ನೇತ್ರನ ಸುರಮುನಿ ಸ್ತೋತ್ರನ ಸುಂದರ ಗಾತ್ರನ ನರಹರಿ ಮಿತ್ರನಹಿಗಳ ಸೂತ್ರನ ಶಿರಕರ ಪಾತ್ರನ ಶಿವಸ್ವತಂತ್ರನ 2


ಕಮಲಾಕ್ಷನ ಕಡುಭಕ್ತಿ ಕಂಡು ಕಮನೀಯ ಚಕ್ರ | ಸುಮನಾ ಸಾದು ಕೊಡಲು ನೋಡೆ ತಮ್ಮ ತಮಗೆಲ್ಲ ಕೊಂಡಾಡೆ ಶಮನಾಘ ಶಾಸನವ ಮಾಡಿದನು ಸುಮ್ಮನಿದ್ದೀಯಲ್ಲೋ ನೀನು | ಅಮಿತ ಭಕ್ತರು ಇಳೆಯೋಳ್ ಇಹರು ನಮಿಸಲು ಸಲಹಿಕಾವನು |ಅಮರರ ಹೊರೆವನ ಅಧಿಕ ಪ್ರಭಾವನ ತಿಮಿರವ ಕಳೆವನ ತೀರದಲಿವನ ಹಿಮಸುತೆ ಜೀವನ ಹಿಡಿದಿಹ ತ್ರಿಭುವನನ | ಶ್ರಮಗಳನಳಿವನ ಶಂಕರ ಭೀಮಾ ಶಂಕರನ 3

***


No comments:

Post a Comment