Saturday 1 May 2021

ದಾಸರಾಯ ಪೋಷಿನೆನ್ನನ್ನು ಪ್ರಾರ್ಥಿಸುವೆ ಶೇಷ ankita karpara narahari sheshadasa stutih

 ಶ್ರೀ ಕಾರ್ಪರ ನರಹರಿ ಆಚಾರ್ಯರ ಕೃತಿ

" ಶ್ರೀ ಶೇಷದಾಸರ ಸ್ತುತಿ "

ರಾಗ : ಶಂಕರಾಭರಣ   ತಾಳ : ರೂಪಕ

ದಾಸರಾಯ ಪೋಷಿನೆನ್ನನ್ನು । 

ಪ್ರಾರ್ಥಿಸುವೆ ।

ಶೇಷದಾಸವರ್ಯ 

ಪೋಷಿಸೆನ್ನನು  ।। ಪಲ್ಲವಿ ।।


ಪೋಷಿಸೆನ್ನ ಮನದಿ ಬಹ ।

ದೋಷಗಳನು ತರಿದು । ಇಂದಿ ।

ರೇಶನಂಘ್ರಿ ಧ್ಯಾನವ ಪ್ರತಿ ।

ವಾಸರದಲಿ ಒದಗುವಂತೆ ।। ಅ. ಪ ।।


ದೇಶ ದೇಶಗಳಲಿ ಭಜಿಪ ।

ದಾಸ ಜನರ ಮನದ । ಅಭಿ ।

ಲಾಷೆಗಳನು ಸಲಿಸುತಲಿ । ಸು ।

ರೇಶನಂತೆ ಮೆರೆದ ಶೇಷ  ।। ಚರಣ ।।


ಮಂದನಾದರೂ ನಿಮ್ಮಯ ಪದ ।

ದ್ವಂದ್ವ ಭಜಿಸೆ ಜಗದಿ । ಪ್ರಾಜ್ಞ ।

ನೆಂದು ಕರೆಸುವೆನು ಯೆನುತ ನಾ ।

ವಂದಿಸುವೆ ಸುಜ್ಞಾನವಿತ್ತು  ।। ಚರಣ ।।


ಕರುಣ ಶರಧೆ ನಿಮ್ಮ ನಾನು ।

ಸ್ಮರಣೆ ಮಾತ್ರದಿ ಭೂತ ಪ್ರೇತ। ಗ ।

ಳಿರದೆ ಪೋಪವು ಶರಣು ಜನರ ।

ದುರಿತ ಘನಕೆ ಮರುತರೆನಿಪ  ।। ಚರಣ ।।


ಈ ಮಹಿಯೊಳಗಾದಿ ಶಿಲೆಯ ।

ಸ್ವಾಮಿಯ ಪದದಿನೆ ತ್ರಿಪಥ ।

ಗಾಮಿನಿಯಳ ತೋರಿ ಸ್ವಜನ ।

ಕಾಮಿತವ ಪೂರೈಸಿದಂತೆ  ।। ಚರಣ ।।


ಶೇರಿದ ಪರಿವಾರಕ್ಕೆ ಸುರ ।

ಭೂರುಹವೆಂದೆನಿಸುವಂಥಾ ।

ಪಾರ ಮಹಿಮ ಕಾರ್ಪರ ಸಿರಿ ।

ನರಸಿಂಹನ ನೊಲಿಸಿದಂಥಾ  ।। ಚರಣ ।।

***

ದಾಸವರ್ಯ ಪೋಷಿಸೆನ್ನನು ಪ್ರಾರ್ಥಿಸುವೆ ಶೇಷ

ದಾಸವರ್ಯ ಪೋಷಿಸೆನ್ನನು ಪ


ಪೋಷಿಸೆನ್ನ ಮನದಿ ಬಹದೋಷಗಳನು

ತರಿದು ಇಂದಿ-

ರೇಶನಂಘ್ರಿಧ್ಯಾನವ ಪ್ರತಿವಾಸರದಲಿ ಒದಗುವಂತೆಅ.ಪ

ದೇಶ ದೇಶಗಳಲಿ ಭಜಿಪ ದಾಸ ಜನರ ಮನದ ಅಭಿ-

ಲಾಷೆಗಳನು ಸಲಿಸುತಲಿ ಸುರೇಶನಂತೆ ಮೆರೆದ ಶೇಷ 1


ಮಂದನಾದರು ನಿಮ್ಮಯ ಪದದ್ವಂದ್ವ

ಭಜಿಸೆ ಜಗದಿ ಪ್ರಾಜ್ಞ-

ನೆಂದು ಕರೆಸುವನು ಯೆನುತ ನಾವಂದಿಸುವೆ

ಸುe್ಞÁನವಿತ್ತು 2


ಕರುಣಶರಥೇ ನಿಮ್ಮ ನಾಮ ಸ್ಮರಣೆ

ಮಾತ್ರದಿ ಭೂತ ಪ್ರೇತಗ-

ಳಿರದೆ ಪೋಪವು ಶರಣು ಜನರ ದುರಿತ

ಘನಕೆ ಮರುತರೆನಿಪ 3


ಈ ಮಹಿಯೊಳಗಾದಿ ಶಿಲೆಯ ಸ್ವಾಮಿಯ

ಪದದಿಂದೆ ತ್ರಿಪಥ

ಗಾಮಿನಿಯಳ ತೋರಿ ಸ್ವಜನ ಕಾಮಿತವ ಪೂರೈಸಿದಂಥ4


ಶೇರಿದ ಪರಿವಾರಕೆ ಸುರ ಭೂರುಹವೆಂದೆನಿಸುವಂಥಾ

ಪಾರ ಮಹಿಮ ' ಕಾರ್ಪರ ಸಿರಿನಾರಸಿಂಹ'ನ

ನೊಲಿಸಿದಂಥ 5

****

No comments:

Post a Comment