Thursday 30 December 2021

ನಾರಾಯಣ ಎನ್ನಬಾರದೆ ನಿಮ್ಮ ನಾಲಿಗೆಯೊಳು purandara vittala NARAYANA ENNABAARADE NIMMA NAALIGEYOLU





ABHIRAMA VADIRAJA SONNY 9 years 2018




ನಾರಾಯಣ ಎನ್ನಬಾರದೆ ನಿಮ್ಮ

ನಾಲಿಗೆಯೊಳು ಮುಳ್ಳು ಮುರಿದಿಹುದೆ , ಕಲ್ಲು ಜಡಿದಿಹುದೆ ||ಪ||

ವಾರಣಾಸಿಗೆ ಪೋಗಿ ದೂರ ಬಳಲೆಲೇಕೆ
ನೀರ ಕಾವಡಿ ಪೊತ್ತು ತಿರುಗಲೇಕೆ
ಊರೂರು ತಪ್ಪದೆ ದೇಶಾಂತರವೇಕೆ
ದಾರಿಗೆ ಸಾಧನವಲ್ಲವೆ ಹರಿನಾಮ ||

ನಿತ್ಯುಪವಾಸವಿದ್ದು ಹಸಿದು ಬಳಲಲೇಕೆ
ಮತ್ತೆ ಚಳಿಯೊಳು ಗಂಗೆ ಮುಳುಗಲೇಕೆ
ಹಸ್ತವ ಪಿಡಿದು ಮಾಡುವ ಜಪ ತಪವೇಕೆ
ಮುಕ್ತಿಗೆ ಸಾಧನವಲ್ಲವೆ ಹರಿನಾಮ ||

ಸತಿಸುತರನು ಬಿಟ್ಟು ಯತಿಗಳಾಶ್ರಮವೇಕೆ
ವ್ರತ ಕೃಚ್ಛ್ರ ನೇಮ ನಿಷ್ಠೆಗಳೇತಕೆ
ಪೃಥಿವಿಯೊಳಗೆ ನಮ್ಮ ಪುರಂದರವಿಠಲನ
ಅತಿಶಯದಿಂದೊಮ್ಮೆ ನೆನೆದರೆ ಸಾಲದೆ ||
****


ರಾಗ ಬಿಲಹರಿ ಆದಿತಾಳ (raga, taala may differ in audio)

pallavi

nArAyaNa enna bArade nimma nAligeyoLu muLLu muridihude kallu jaDidihude

caraNam 1

vAraNAsige bhOgi dura baLaleke nIra kAvaDi pottu tirugalEke
UrUru tappade dEshAntaraveke dArige sAdhanavallave harinAma

caraNam 2

nityOpavAsaviddu hasidu baLaleke matte caLiyoLu gange muLugaleke
hastava piDidu mADuva japa tapavEke muktige sAdhanavallave harinAma

caraNam 3

satisutaranu biTTu yatigaLAshramavEke vrata krcchara nEma niSTegaLEtake
pruthiyoLage namma purandara viTTalana atishayadindomme nenedare sAlade
***

ನಾರಾಯಣ ಎನ್ನಬಾರದೆ ನಿಮ್ಮ |
ನಾಲಿಗೆಯೊಳು ಮುಳ್ಳು ಮುರಿದಿಹುದೇ ? ಪ.

ವಾರಣಾಸಿಗೆ ಪೋಗಿ ದೂರ ಬಳಲಲೇಕೆ |ನೀರ ಕಾವಡಿಯನು ಪೊತ್ತು ತಿರುಗಲೇಕೆ ||ಊರುರು ತಪ್ಪದೆ ದೇಶಾಂತರವೇಕೆ |ದಾರಿಗೆ ಸಾಧನವಲ್ಲವೆ ಹರಿನಾಮ ? 1

ನಿತ್ಯ ಉಪವಾಸವಿದ್ದು ಹಸಿದು ಬಳಲಲೇಕೆ |ಮತ್ತೆ ಚಳಿಯೊಳು ಗಂಗೆ ಮುಳಗಲೇಕೆ ||ಹಸ್ತವ ಪಿಡಿದು ಮಾಡುವ ಜಪ - ತಪವೇಕೆಮುಕ್ತಿಗೆ ಸಾಧನವಲ್ಲವೇ ಹರಿನಾಮ ? 2

ಸತಿ - ಸುತರನು ಬಿಟ್ಟು ಯತಿಗಳಾಶ್ರಮವೇಕೆವ್ರತ - ಕೃಚ್ಛ್ರ ನೇಮ - ನಿಷ್ಟೆಗಳೇತಕೆ ||ಪೃಥಿವಿಯೊಳಗೆ ನಮ್ಮ ಪುರಂದರವಿಠಲನ |ಅತಿ ಭಕುತಿಯಿಂದೊಮ್ಮೆ ನೆನೆದರೆ ಸಾಲದೆ 3
*******


1 comment:

  1. ಜಯರಾಮಾಚಾರ್ಯ ಬೆಣಕಲ್ ಹಾಡಿದ್ದು

    ReplyDelete