Sunday 8 December 2019

ತೃಣಗುಲ್ಮಲತೆ ತೃಣರಾಜ vijaya vittala suladi ತಾರತಮ್ಯ ಸುಳಾದಿ TRUNAGULMALATE TRUNARAAJA TAARATAMYA SULADI



Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ   ತಾರತಮ್ಯ ಸುಳಾದಿ 

 ರಾಗ ಹಂಸಧ್ವನಿ 

 ಧ್ರುವತಾಳ 

ತೃಣಗುಲ್ಮಲತೆ ತೃಣರಾಜ ಮಿಕ್ಕಾದ ತರು | 
ವನಚರ ಖಗ ಮೃಗ ನಾನಾ ಪರಿಯ |
ಮನುಜ ಕ್ಷಿತಿಪ ಮನುಜ ಗಂಧರ್ವ ಪರಿಯಂತ |
ಎಣಿಕೆ ಮಾಡಿದರಾಗೆ ಅವಿ ಭೋಕ್ತರು |
ಗುಣಿಸಿ ನೋಡಲು ಇದರ ಗಣಿತ ಅಪರಿಮಿತ |
ಕೊನೆ ತಿಳಿದವನಿಲ್ಲ ಎಂದೆಂದಿಗೆ |
ಇನಿತು ಚೇತನಗಳು ಲಕ್ಷಯೆಂಭತ್ತು ನಾಲ್ಕು |
ಯೋನಿ ಜನನ ಪ್ರಭೇದದಿಂದ ಪ್ರಾಚುರ್ಯರು |
ಗುಣದಿಂದ ಓರ್ವರೋರ್ವರಧಿಕವಾಗಿಪ್ಪರು |
ಜನುಮ ಜನುಮದಲ್ಲಿ ವೃತ್ತಿ ಜ್ಞಾನಾ |
ತನು ಭಿನ್ನರಾಗಿ ಪುಟ್ಟುವರು ಧರಣಿ ಮೇಲೆ |
ದಿನ ಪ್ರತಿದಿನ ಕರ್ಮವಶದಿಂದಲಿ |
ತನು ಸಮೇತವಲ್ಲದೆ ಏಕಾಂಶದಲ್ಲಿ ಸಲ್ಲಾ |
ಅನುಮಾನ ಇದಕಿಲ್ಲ ಇವರಿಗೆ ಪೆಸರು ಕಾಣೋ |
ಮನದೊಳು ತಿಳಿ ಇವರ ತರುವಾಯದಿ |
ಅನಿಮಿಷ ಗಂಧರ್ವ ಬೊಮ್ಮಾದಿ ಪಿಡಿದು ಯೋ |
ಚನೆ ಮಾಡು ಮೂವತ್ತು ಮೂರು ಕೋಟಿ
ಮಿನಗುತಿಪ್ಪರು ಎಲ್ಲ ಸಾಂಶರು |
ನೆನೆದು ಧನ್ಯನಾಗೊ ನಾನಾ ಪರಿಯಿಂದ |
ಅನುನಯದಲಿ ನಾಲ್ಕು ಬಗೆಯಲಿಪ್ಪಾ |
ಜನರುಂಟು ಮುಖ್ಯಾಮುಖ್ಯ ತಾತ್ವಿಕ ಯೋ |
ಚನೆ ಮಾಡು ಅತಾತ್ವಿಕರಾಜಾನಜರ |
ಗಣಣೆಯಾದುದಕೆ ಒಕ್ಕಣಿಸು ವರ್ತಮಾನ |
ವನಜ ಸಂಭವ ನಿಡಿದು ಋಭುಗಣಾಂತ |
ತನುವು ಧರಿಪ ಸಂಖ್ಯೆ ಮೂವತ್ತು ಮೂರು ನೂರು |
ಇನಿತರೊಳು ಎರಡು ವಿಧ ಪ್ರಾಮುಖ್ಯರು |
ಘನವಂತ ಜನ ವಿಂಶತಿ ಶತ ಉಳಿದಾದವರು |
ಸನುಮತ ಋಭುಗಣ ತ್ರಿಸಹಸ್ರದ ಮೇಲೆ |
ಎಣಿಸು ನೂರೆಂಭತ್ತು ಜನರು ಒಂದೇ |
ವಿನಯದಿಂದಲಿ ಮುಂದೆ ಅಮುಖ್ಯ ತಾತ್ವಿಕ |
ಜನಕಿಂತ ವೆಗ್ಗಳರು ದೇವತ್ವ ಆದಿಯಲ್ಲಿ |
ಮುನಿಜನ ಮಿಕ್ಕಾದವರ ವಿಭಾಗ ಮಾಡಿ ತೆಗೆದು |
ಮಣಿದು ನಮೋಯೆನ್ನು ಶತಸ್ಥರ್ಗೆ |
ಕನಸೀಲಿ ಮನಸೀಲಿ ಇಲ್ಲಿ ತನಕ ಮುಂ - |
ದಣ ವಿಚಾರವ ಕೇಳು ಕಾರ್ಮಿಕ ಲೋಕಾಗ್ನಿ |
ತನುಜ ಪಾವಕ ಪವಮಾನ ವಿಡಿದು |
ಶನಿ ಪರಿಯಂತ ಅಮುಖ್ಯ ತಾತ್ವಿಕ |
ಗಣವೆನ್ನಿ ಇವರು ಕರ್ಮಜ ಸುರರು |
ಎಣಿಕೆ ಮಾಡು ಇಂತು ಮುನ್ನೂರು ಕಡಿಮೆಯಾಗಿ |
ಗುಣ ಸಹಸ್ರರೆನ್ನು ಮಧ್ಯಮರ |
ಗುಣಪೂರ್ಣ ವಿಜಯವಿಠಲರೇಯನ ಪಾದ |
ವನಜ ಧ್ಯಾನವ ಮಾಡು ಇವರಿವರ ಮಧ್ಯದಲ್ಲಿ ॥ 1 ॥

 ಮಟ್ಟತಾಳ 

ಮೊದಲಿಗೆ ಪೇಳಿದ ಶತಸ್ಥರೊಳಗಿದ್ದ
ಪದುಮ ಬಾಂಧವನೊಬ್ಬ ಪರ್ಜನ್ಯ ನಾಮಕನು |
ಇದರೊಳಗೆ ಗಣನೆ ಸಿದ್ದವಾಗಿದೆ ಸತ್ಯ |
ಮುದದಿಂದಲಿ ತತ್ವಾಭಿಮಾನಿಗಳ - |
ಲ್ಲದ ದೇವತೆಗಳ ಪೆಸರು ಕೊಂಡಾಡುವುದು |
ಉದಕ ಪೂರಿತವಾದ ತೀರ್ಥಾಭಿಮಾನಿಗಳು |
ಅದರ ತರುವಾಯ ಪುಷ್ಕರ ಕರ್ಮಾಭಿಮಾನಿಗಳು |
ಒದಗಿ ಎಣಿಸಬೇಕು ನವ ಕೋಟಿಗೆ ತ್ರಿಶತ |
ತ್ರಿದಶ ಸಾವಿರ ಕಡಿಮೆ |
ಬುಧರು ಭಕುತಿಯಿಂದ ವಿವರಗಳಿಲ್ಲಿಗೆ ತ್ರಿ-
ವಿಧವಾಯಿತು ಕೇಳಿ ನವ ಕೋಟಿ ಸಂಖ್ಯಾ |
ಭವಸಾಗರ ಹಾರಿ ವಿಜಯವಿಠಲರೇಯ |
ಪವಣೆಯಿಂದಲಿ ಇವರ ಈ ಪರಿ ನಿರ್ಣೈಪ ॥ 2 ॥

 ತ್ರಿವಿಡಿತಾಳ 

ಅಮರರ ಕುಲದಿಂದ ಪುಟ್ಟಿದನಾಖ್ಯರು |
ಕ್ರಮದಿಂದ ತಿಳಿವುದು ಚತುರ ವಿಂಶತಿ ಕೋಟಿ |
ದ್ರುಮ ಲತೆ ಫಲ ಪುಷ್ಪ ಮಿಕ್ಕಾದವಕೇ ಉ - |
ತ್ತಮರಾಗಿ ಇಪ್ಪರು ಅಂಶದಿಂದ |
ಅಮರ ಮೊಗ ಪುತ್ರರು ಹದಿನಾರು ಸಾವಿರ |
ರಮಣೀಯರಾದ ಅಪ್ಸರ ಸ್ತ್ರೀಯರು ನೂರು |
ವಿಮಲ ತುಂಬುರಾದಿ ಶತ ಗಂಧರ್ವ ಸಹ |
ಸಮವಾಗಿ ಇಪ್ಪರು ಇವರೆ ಅಜಾನಜರಯ್ಯಾ |
ನಮಿಸಿ ಕೊಂಡಾಡುವರು ಶತ ಕವ್ಯ ಭೋಕ್ತರ |
ಶಮ ದಮೆ ಗುಣವುಳ್ಳ ಸಿದ್ದ ಸಾಧ್ಯರು ಸರ್ವ |
ಸಮುದಾಯ ಭೃತ್ಯಾದಿ ಕರ್ಮಕಾರರು ಮತ್ತೆ |
ಅಮಿತ ಪಿತೃ ಗಂಧರ್ವ ಅಪ್ಸರ ಜನರೊಡನೆ |
ಕಮಲ ಕರ್ಣಿಕೆ ವಿಜಯವಿಠ್ಠಲ ಸರ್ವೋ- |
ತ್ತಮ ಚತುರವಿಂಶತಿ ಕೋಟಿ ಜನರ ಪಡೆದ ॥ 3 ॥

 ಅಟ್ಟತಾಳ 

ಇಪ್ಪತ್ತು ನಾಲ್ಕು ಕೋಟಿ ದೇವ ಕುಲೋದ್ಭವ |
ಒಪ್ಪದಿಂದಲೆ ಉಂಟು ಪ್ರಸಿದ್ಧಾಪ್ರಸಿದ್ದಾ |
ತಪ್ಪದೆ ತಮ ತಮ ಕಾರ್ಯವ ಮಾಡುತ್ತ |
ಮುಪ್ಪು ಇಲ್ಲದೆ ಚರಮ ಭವಿಗಳಯ್ಯಾ |
ಇಪ್ಪರು ಇವರಿಗಿಂದಧಿಕ ನವಕೋಟಿ |
ಸುಪ್ಪವರ್ಣರು ತ್ರಿವಿಧ ಅಧಿಕಾರರು |
ಒಪ್ಪುತಾ ಪ್ರತಿದಿನ ಹರಿಗೆ ಸರ್ವಸ್ವ ಸ -|
ಮರ್ಪಣೆ ಮಾಡೋರು ಸಕಲ ವಿಷಯದಲ್ಲಿ |
ಸರ್ಪಶಯನ ನಮ್ಮ ವಿಜಯವಿಠ್ಠಲ ಜಗ -
ದಪ್ಪನಾಗಿ ಅವರವರ ಪಾಲಿಸುವ ॥ 4 ॥

 ಆದಿತಾಳ 

ಋಷಿಗಳ ಸಹಿತವಾಗಿ ಗಣನೆ ಮಾಡಿ ಎ -|
ಣಿಸು ನೂರಾಮೂವತ್ತು ಮೂರು ಕೋಟಿಗಳನ್ನು |
ಹಸನಾಗಿ ಇವರಿವರ ಭಕ್ತಿ ಜ್ಞಾನ ಕರ್ಮ |
ಬೆಸನೆ ತಿಳಿದು ಪ್ರಸನ್ನೀಕರಿಸಿಕೊಂಡು ಬಾಳು |
ಎಸೆವ ಸಪ್ತ ಭುವನ ಮೇರು ಧ್ರುವ ಲೋಕ ರಂ-|
ಜಿಸುವ ಸ್ವರ್ಗಾದಿ ಸರ್ವ ಬೊಮ್ಮಂಡಾವರಣತನಕ |
ಎಸಳು ಮತಿಯಿಂದ ತಮ ತಮ್ಮ ಯೋಗ್ಯ ಸ್ಥಾನ |
ವಸತಿಯಾಗಿಪ್ಪರು ಅನೇಕ ಬಗೆಯಿಂದ |
ಮಿಸುಕದೆ ನೋಡುವದು ಪ್ರಧಾನ ಸ್ಥಳವೆರಡು |
ಬಿಸಜಾಪ್ತ ಮಂಡಲ ಶರೀರಸ್ಥರೆಂದು |
ಕುಶಲಮತಿಯಿಂದ ಭಜನೆ ಮಾಡೆಲೋ ಮನುಜಾ |
ಪುಸಿಯಲ್ಲ ಇದೆ ಇದೆ ಸಾಧನ ಸಾಧ್ಯ ಸಿದ್ದ |
ವಶವಾಗುವದು ಸುಲಭ ವಿದ್ಯಪ್ರಾಪ್ತಿಯೆನ್ನು |
ಪಶುಪಾಲಕ ನಮ್ಮ ವಿಜಯವಿಠಲರೇಯ |
ಶಿಶುಗಳಂತೆ ಇಂತು ನೆನೆದವರ ಸಲಹುವಾ ॥ 5 ॥

 ಜತೆ 

ತೃಣಾಂತವಿಡಿದು ಬೊಮ್ಮಾದಿ ಪರಿಯಂತ ।
ನೆನೆದು ಧನ್ಯನಾಗೋ ವಿಜಯವಿಠ್ಠಲ ನಿಂದ ॥
*******


ಶ್ರೀ ವಿಜಯದಾಸಾರ್ಯ ವಿರಚಿತ 

ತಾರತಮ್ಯ ಸುಳಾದಿ

ರಾಗ ಹಂಸಧ್ವನಿ

ಧ್ರುವತಾಳ

ತೃಣಗುಲ್ಮಲತೆ ತೃಣರಾಜ ಮಿಕ್ಕಾದ ತರು | 
ವನಚರ ಖಗ ಮೃಗ ನಾನಾ ಪರಿಯ |
ಮನುಜ ಕ್ಷಿತಿಪ ಮನುಜ ಗಂಧರ್ವ ಪರಿಯಂತ |
ಎಣಿಕೆ ಮಾಡಿದರಾಗೆ ಅವಿ ಭೋಕ್ತರು |
ಗುಣಿಸಿ ನೋಡಲು ಇದರ ಗಣಿತ ಅಪರಿಮಿತ |
ಕೊನೆ ತಿಳಿದವನಿಲ್ಲ ಎಂದೆಂದಿಗೆ |
ಇನಿತು ಚೇತನಗಳು ಲಕ್ಷಯೆಂಭತ್ತು ನಾಲ್ಕು |
ಯೋನಿ ಜನನ ಪ್ರಭೇದದಿಂದ ಪ್ರಾಚುರ್ಯರು |
ಗುಣದಿಂದ ಓರ್ವರೋರ್ವರಧಿಕವಾಗಿಪ್ಪರು |
ಜನುಮ ಜನುಮದಲ್ಲಿ ವೃತ್ತಿ ಜ್ಞಾನಾ |
ತನು ಭಿನ್ನರಾಗಿ ಪುಟ್ಟುವರು ಧರಣಿ ಮೇಲೆ |
ದಿನ ಪ್ರತಿದಿನ ಕರ್ಮವಶದಿಂದಲಿ |
ತನು ಸಮೇತವಲ್ಲದೆ ಏಕಾಂಶದಲ್ಲಿ ಸಲ್ಲಾ |
ಅನುಮಾನ ಇದಕಿಲ್ಲ ಇವರಿಗೆ ಪೆಸರು ಕಾಣೋ |
ಮನದೊಳು ತಿಳಿ ಇವರ ತರುವಾಯದಿ |
ಅನಿಮಿಷ ಗಂಧರ್ವ ಬೊಮ್ಮಾದಿ ಪಿಡಿದು ಯೋ |
ಚನೆ ಮಾಡು ಮೂವತ್ತು ಮೂರು ಕೋಟಿ
ಮಿನಗುತಿಪ್ಪರು ಎಲ್ಲ ಸಾಂಶರು |
ನೆನೆದು ಧನ್ಯನಾಗೊ ನಾನಾ ಪರಿಯಿಂದ |
ಅನುನಯದಲಿ ನಾಲ್ಕು ಬಗೆಯಲಿಪ್ಪಾ |
ಜನರುಂಟು ಮುಖ್ಯಾಮುಖ್ಯ ತಾತ್ವಿಕ ಯೋ |
ಚನೆ ಮಾಡು ಅತಾತ್ವಿಕರಾಜಾನಜರ |
ಗಣಣೆಯಾದುದಕೆ ಒಕ್ಕಣಿಸು ವರ್ತಮಾನ |
ವನಜ ಸಂಭವ ನಿಡಿದು ಋಭುಗಣಾಂತ |
ತನುವು ಧರಿಪ ಸಂಖ್ಯೆ ಮೂವತ್ತು ಮೂರು ನೂರು |
ಇನಿತರೊಳು ಎರಡು ವಿಧ ಪ್ರಾಮುಖ್ಯರು |
ಘನವಂತ ಜನ ವಿಂಶತಿ ಶತ ಉಳಿದಾದವರು |
ಸನುಮತ ಋಭುಗಣ ತ್ರಿಸಹಸ್ರದ ಮೇಲೆ |
ಎಣಿಸು ನೂರೆಂಭತ್ತು ಜನರು ಒಂದೇ |
ವಿನಯದಿಂದಲಿ ಮುಂದೆ ಅಮುಖ್ಯ ತಾತ್ವಿಕ |
ಜನಕಿಂತ ವೆಗ್ಗಳರು ದೇವತ್ವ ಆದಿಯಲ್ಲಿ |
ಮುನಿಜನ ಮಿಕ್ಕಾದವರ ವಿಭಾಗ ಮಾಡಿ ತೆಗೆದು |
ಮಣಿದು ನಮೋಯೆನ್ನು ಶತಸ್ಥರ್ಗೆ |
ಕನಸೀಲಿ ಮನಸೀಲಿ ಇಲ್ಲಿ ತನಕ ಮುಂ - |
ದಣ ವಿಚಾರವ ಕೇಳು ಕಾರ್ಮಿಕ ಲೋಕಾಗ್ನಿ |
ತನುಜ ಪಾವಕ ಪವಮಾನ ವಿಡಿದು |
ಶನಿ ಪರಿಯಂತ ಅಮುಖ್ಯ ತಾತ್ವಿಕ |
ಗಣವೆನ್ನಿ ಇವರು ಕರ್ಮಜ ಸುರರು |
ಎಣಿಕೆ ಮಾಡು ಇಂತು ಮುನ್ನೂರು ಕಡಿಮೆಯಾಗಿ |
ಗುಣ ಸಹಸ್ರರೆನ್ನು ಮಧ್ಯಮರ |
ಗುಣಪೂರ್ಣ ವಿಜಯವಿಠಲರೇಯನ ಪಾದ |
ವನಜ ಧ್ಯಾನವ ಮಾಡು ಇವರಿವರ ಮಧ್ಯದಲ್ಲಿ ॥ 1 ॥

ಮಟ್ಟತಾಳ

ಮೊದಲಿಗೆ ಪೇಳಿದ  ಶತಸ್ಥರೊಳಗಿದ್ದ
ಪದುಮ ಬಾಂಧವನೊಬ್ಬ ಪರ್ಜನ್ಯ ನಾಮಕನು |
ಇದರೊಳಗೆ ಗಣನೆ ಸಿದ್ದವಾಗಿದೆ ಸತ್ಯ |
ಮುದದಿಂದಲಿ ತತ್ವಾಭಿಮಾನಿಗಳ - |
ಲ್ಲದ ದೇವತೆಗಳ ಪೆಸರು ಕೊಂಡಾಡುವುದು |
ಉದಕ ಪೂರಿತವಾದ ತೀರ್ಥಾಭಿಮಾನಿಗಳು |
ಅದರ ತರುವಾಯ ಪುಷ್ಕರ ಕರ್ಮಾಭಿಮಾನಿಗಳು |
ಒದಗಿ ಎಣಿಸಬೇಕು ನವ ಕೋಟಿಗೆ ತ್ರಿಶತ |
ತ್ರಿದಶ ಸಾವಿರ ಕಡಿಮೆ |
ಬುಧರು ಭಕುತಿಯಿಂದ ವಿವರಗಳಿಲ್ಲಿಗೆ ತ್ರಿ-
ವಿಧವಾಯಿತು ಕೇಳಿ ನವ ಕೋಟಿ ಸಂಖ್ಯಾ |
ಭವಸಾಗರ ಹಾರಿ ವಿಜಯವಿಠಲರೇಯ |
ಪವಣೆಯಿಂದಲಿ ಇವರ ಈ ಪರಿ ನಿರ್ಣೈಪ ॥ 2 ॥

ತ್ರಿವಿಡಿತಾಳ

ಅಮರರ ಕುಲದಿಂದ ಪುಟ್ಟಿದನಾಖ್ಯರು |
ಕ್ರಮದಿಂದ ತಿಳಿವುದು ಚತುರ ವಿಂಶತಿ ಕೋಟಿ |
ದ್ರುಮ ಲತೆ ಫಲ ಪುಷ್ಪ ಮಿಕ್ಕಾದವಕೇ ಉ - |
ತ್ತಮರಾಗಿ ಇಪ್ಪರು ಅಂಶದಿಂದ |
ಅಮರ ಮೊಗ ಪುತ್ರರು ಹದಿನಾರು ಸಾವಿರ |
ರಮಣೀಯರಾದ ಅಪ್ಸರ ಸ್ತ್ರೀಯರು ನೂರು |
ವಿಮಲ ತುಂಬುರಾದಿ ಶತ ಗಂಧರ್ವ ಸಹ |
ಸಮವಾಗಿ ಇಪ್ಪರು ಇವರೆ ಅಜಾನಜರಯ್ಯಾ |
ನಮಿಸಿ ಕೊಂಡಾಡುವರು ಶತ ಕವ್ಯ ಭೋಕ್ತರ |
ಶಮ ದಮೆ ಗುಣವುಳ್ಳ ಸಿದ್ದ ಸಾಧ್ಯರು ಸರ್ವ |
ಸಮುದಾಯ ಭೃತ್ಯಾದಿ ಕರ್ಮಕಾರರು ಮತ್ತೆ |
ಅಮಿತ ಪಿತೃ ಗಂಧರ್ವ ಅಪ್ಸರ ಜನರೊಡನೆ |
ಕಮಲ ಕರ್ಣಿಕೆ ವಿಜಯವಿಠ್ಠಲ ಸರ್ವೋ- |
ತ್ತಮ ಚತುರವಿಂಶತಿ ಕೋಟಿ ಜನರ ಪಡೆದ ॥ 3 ॥

ಅಟ್ಟತಾಳ

ಇಪ್ಪತ್ತು ನಾಲ್ಕು ಕೋಟಿ ದೇವ ಕುಲೋದ್ಭವ |
ಒಪ್ಪದಿಂದಲೆ ಉಂಟು ಪ್ರಸಿದ್ಧಾಪ್ರಸಿದ್ದಾ |
ತಪ್ಪದೆ ತಮ ತಮ ಕಾರ್ಯವ ಮಾಡುತ್ತ |
ಮುಪ್ಪು ಇಲ್ಲದೆ ಚರಮ ಭವಿಗಳಯ್ಯಾ |
ಇಪ್ಪರು ಇವರಿಗಿಂದಧಿಕ ನವಕೋಟಿ |
ಸುಪ್ಪವರ್ಣರು ತ್ರಿವಿಧ ಅಧಿಕಾರರು |
ಒಪ್ಪುತಾ ಪ್ರತಿದಿನ ಹರಿಗೆ ಸರ್ವಸ್ವ ಸ -|
ಮರ್ಪಣೆ ಮಾಡೋರು ಸಕಲ ವಿಷಯದಲ್ಲಿ |
ಸರ್ಪಶಯನ ನಮ್ಮ ವಿಜಯವಿಠ್ಠಲ ಜಗ -
ದಪ್ಪನಾಗಿ ಅವರವರ ಪಾಲಿಸುವ ॥ 4 ॥

ಆದಿತಾಳ

ಋಷಿಗಳ ಸಹಿತವಾಗಿ ಗಣನೆ ಮಾಡಿ ಎ -|
ಣಿಸು ನೂರಾಮೂವತ್ತು ಮೂರು ಕೋಟಿಗಳನ್ನು |
ಹಸನಾಗಿ ಇವರಿವರ ಭಕ್ತಿ ಜ್ಞಾನ ಕರ್ಮ |
ಬೆಸನೆ ತಿಳಿದು ಪ್ರಸನ್ನೀಕರಿಸಿಕೊಂಡು ಬಾಳು |
ಎಸೆವ ಸಪ್ತ ಭುವನ ಮೇರು ಧ್ರುವ ಲೋಕ ರಂ-|
ಜಿಸುವ ಸ್ವರ್ಗಾದಿ ಸರ್ವ ಬೊಮ್ಮಂಡಾವರಣತನಕ |
ಎಸಳು ಮತಿಯಿಂದ ತಮ ತಮ್ಮ ಯೋಗ್ಯ ಸ್ಥಾನ |
ವಸತಿಯಾಗಿಪ್ಪರು ಅನೇಕ ಬಗೆಯಿಂದ |
ಮಿಸುಕದೆ ನೋಡುವದು ಪ್ರಧಾನ ಸ್ಥಳವೆರಡು |
ಬಿಸಜಾಪ್ತ ಮಂಡಲ ಶರೀರಸ್ಥರೆಂದು |
ಕುಶಲಮತಿಯಿಂದ ಭಜನೆ ಮಾಡೆಲೋ ಮನುಜಾ |
ಪುಸಿಯಲ್ಲ ಇದೆ ಇದೆ ಸಾಧನ ಸಾಧ್ಯ ಸಿದ್ದ |
ವಶವಾಗುವದು ಸುಲಭ ವಿದ್ಯಪ್ರಾಪ್ತಿಯೆನ್ನು |
ಪಶುಪಾಲಕ ನಮ್ಮ ವಿಜಯವಿಠಲರೇಯ |
ಶಿಶುಗಳಂತೆ ಇಂತು ನೆನೆದವರ ಸಲಹುವಾ ॥ 5 ॥

ಜತೆ

ತೃಣಾಂತವಿಡಿದು ಬೊಮ್ಮಾದಿ ಪರಿಯಂತ ।
ನೆನೆದು ಧನ್ಯನಾಗೋ ವಿಜಯವಿಠ್ಠಲನಿಂದ ॥
******

No comments:

Post a Comment