Friday 27 December 2019

ಬನ್ನ ಬಡಿಸದಿರು ಹರಿಯೆ ankita rukmini krishna nandana BANNA BADISADIRU HARIYE



Audio by Sri. Gururaj Chitaguppi Dharwad +91 79756 94546

ರಾಗ :  ಬಿಹಾಗ್ (ಹಿಂದೂಸ್ತಾನಿ )
ತಾಳ : ಕೆಹೆರವ (ನಾಲ್ಕು ಮಾತ್ರಾ )

ಬನ್ನ  ಬಡಿಸದಿರು  ಹರಿಯೆ  ಅನ್ಯರವನಿವನೆಂದು |
ಎನ್ನ ಅಪರಾಧಗಳ  ಮನ್ನಿಸಿ  ಕಾಯೊ ಹರಿಯೆ ||ಪ ||

ಸಂಸ್ಕೃತ  ಸಾಹಿತ್ಯದಲಿದ್ದ  ಪಾಂಡಿತ್ಯದ ಮದದಲಿ |
ಪ್ರಾಕೃತ ಕನ್ನಡವ  ನಿಂದಿಸುತ  ಜನರಲ್ಲಿ ||
ವಿಕೃತ  ಮನದಿಂದ  ವಿಜಯ ದಾಸರಾಹ್ವಾನ |
ಅಸಂಸ್ಕೃತ  ನಡೆಯಿಂದ ತಿರಸ್ಕರಿ ಸಿ  ಅಪಮಾನ  ಗೈದಿರಲು ||1||

ಮನನೊಂದು  ವಿಜಯದಾಸರು  ಇರುತಿರಲು |
ಪಂಡಿತನ  ಉದರ ಶೂಲೆಯ ಬಾಧೆ  ಕಾಡಲು ||
ಅನೇಕ ಔಷಧ  ಉಪಚಾರ  ಮಾಡಿದರು ಗುಣಕಾಣದೆ |
ಅನ್ನ  ಪಾನ  ಮಾಡದಲೆ  ಖಿನ್ನನಾಗಿರಲು ||2||

ವಿಜಯ ದಾಸರ ಶಿಷ್ಯನ ಕೈಯಲ್ಲಿ ಪಂಡಿತನ |
ನಿಜ ಉದರ  ಶೂಲೆಯನು ನಿವಾರಿಸಿ ಆಯುರ್ದಾನವ  ಮಾಡಿಸಿ ||
ಸಜ್ಜನನ ಮಾಡಿ ಹರಸಿ  ಜಗನ್ನಾಥ ದಾಸನಾಗಿಸಿದೆ |
ಅಜರಾಮರ ಮೇರು ಕನ್ನಡ ಕಾವ್ಯ   "ಹರಿಕಥಾಮೃತಸಾರ " ಪ್ರಸಾದಿಸಿದೆ ||3||

ನಿನ್ನವರೆಂದು ದಾಸರೆಲ್ಲರ ಉದ್ಧರಿಸಿದ  ದೇವಾ |
ನನ್ನನ್ನೂ ಹರಸೆಂದು ಬೇಡುತಿರುವೆ  ನಾನಿಂದು ||
ಹೀನಗುಣಸಂಪನ್ನ  ಇವನೆಂದು ನನ್ನನ್ನು |ಉದಾ-
ಸೀನ ಮಾಡದಲೆ ಕರುಣೆಯ ಸುರಿಸೊ ದೇವಕಿತನಯ ||4||

ನಾನು ನಾನೆಂಬ ಅಹಂಕಾರದಲಿ ನಿನ್ನ ಮರೆತೇನೋ ದೇವಾ |
ನಿನ್ನ ನನ್ನವನೆಂಬೆ  ನನ್ನ ನಿನ್ನವನಾಗಿಸೊ ||
ಹಣ್ಣಿನ ಸವಿಯು  ಜೇನಿನ  ಸಿಹಿಯು ಭಾವದಲ್ಲಿ ಬರಲಿ |
ಕಣ್ಣ ರೆಪ್ಪೆ ಕಾಯುವಂತೆ  ರುಕ್ಮಿಣಿ -ಕೃಷ್ಣ  ನಂದನನ ಕಾಯೊ ವಿಠಲ ||5||
*********

ರಚನೆ :  ಗುರುರಾಜ ಚಿಟಗುಪ್ಪಿ 
ಗಾಯನ : ಗುರುರಾಜ  ಚಿಟಗುಪ್ಪಿ 
ಸ್ವರ ಸಂಯೋಜನೆ : ಗುರುರಾಜ ಚಿಟಗುಪ್ಪಿ
*******

No comments:

Post a Comment