Friday 27 December 2019

ವಿಜಯೀಂದ್ರ ಮುನೀಂದ್ರ guruprandara vittala vijayeendra teertha stutih

ಪುರಂದರ ದಾಸರ ಮಕ್ಕಳ ಅಂಕಿತಗಳು – ವರದ ಪುರಂದರ ವಿಠಲ (ವರದಪ್ಪ), ಗುರುಪುರಂದರ (ಗುರುರಾಯ), ಅಭಿನವಪುರಂದರ (ಅಭಿನವಪ್ಪ), ಗುರುಮಧ್ವಪತಿವಿಠಲ (ಮಧ್ವಪತಿ). 

ವಿಜಯೀ೦ದ್ರ ಮುನೀಂದ್ರರೆಂಬಾಶ್ಚರ್ಯದ ।
ಗಜೇಂದ್ರ ಬಂದಿದೆ ಸುಜನರು ನೋಡ ಬನ್ನಿ ।। ಪ ।।

ಕಲುಷವೆಂಬ ಪಂಕವ ನೀಡಾಡಿ । ವಿ ।
ಮಲ ಹರಿ ಪದ ತೀರ್ಥದ ಜಲಪಾನ ಮಾಡಿ ।
ಸಲೆ ಮಧ್ವಮತಾಂಬುಧಿಯೊಳು ।
ನಲಿ ನಲಿದು ಕುಣಿದಾಡುತಲಿ ।। 1 ।।

ರಮೇಶನ ಧ್ಯಾನವೆಂಬ ಮದವೇರಿ ।
ಮಮತೆಯೆಂಬ ಕದಳಿ ಕಿತ್ತೀಡಾಡಿ ।
ವಿಮಲ ಶ್ರೀಹರಿ ಪದ ರಜ ಶಿರದಿ ಧರಿಸಿ ।
ಕುಮತಗಳೆಂಬ ತರುಗಳ ಮುರಿಯುತಲಿ ।। 2 ।।

ಗುರು ಸುರೇಂದ್ರತೀರ್ಥರೆಂಬ ।
ವರ ಮಾವಟಿಗನ ಆಜ್ಞೆಯೊಳಿದ್ದು ।
ಗುರು ಪುರಂದರವಿಠಲ ಭಕ್ತಿಯೆಂಬ ।
ಸರಪಣಿಯೊಳು ನಲಿ ನಲಿದಾಡುತಲಿ ।। 3 ।।
********

No comments:

Post a Comment