Wednesday 4 December 2019

ಕೈಮೀರಿ ಹೋದ ಮಾತಿಗೆ ಮರುಗಬಾರದು purandara vittala

ರಾಗ ಸೌರಾಷ್ಟ್ರ ಅಟತಾಳ

ಕೈಮೀರಿ ಹೋದ ಮಾತಿಗೆ ಹುಡುಕಾಡಬಾರದು ||ಪ||

ಮಾತು ಕೇಳದ ಮಕ್ಕಳ ಹೆಸರು ತೆಗೆಯಬಾರದು , ತನ್ನ
ಪ್ರೀತಿ ಇಲ್ಲದ ಪತಿಯ ಕಂಡು ಹಿಗ್ಗಬಾರದು ||

ಜಾರತ್ವ ಮಾಡೊ ಪತ್ನಿಯ ಕೂಡಿ ಅಳಬಾರದು
ವೈರತ್ವ ಮಾಳ್ಪವರ ಸೊಲ್ಲು ಕೇಳಬಾರದು ||

ದುಷ್ಟೆ ಕರ್ಕಶಿ ಸ್ತ್ರೀಯಳ ಹೆಸರು ತೆಗೆಯಬಾರದು
ಹತ್ತು ಮಂದಿಗಂಜದವನ ಸ್ನೇಹಿಸಬಾರದು ||

ಪಂಕ್ತ್ಯಾಗೆ ಪರಪಂಕ್ತಿಯನ್ನು ಮಾಡಬಾರದು
ಮಂಕುಜೀವನಾಗಿ ಮುಕ್ತಿ ಬೇಡಬಾರದು ||

ಆಚಾರಹೀನ ಮನೆಯೊಳೂಟ ಮಾಡಬಾರದು
ವಿಚಾರ ಇಲ್ಲದ ಸಭೆಯೊಳು ಕೂಡ್ರಬಾರದು ||

ಪರಪುರುಷರಿದ್ದೆಡೆಯೊಳು ಒಬ್ಬಳಿರಬರದು , ಸ್ವಾಮಿ
ಪುರಂದರವಿಠಲನ ಧ್ಯಾನ ಮರೆಯಬಾರದು ||
***

pallavi

kai mIri hOda mAtige huDugADa bAradu

caraNam 1

mAtu kELada makkaLa hesara tegeya bAradu tanna prItiyillada patiya kaNDu higga bAradu

caraNam 2

jAratva mADo patniya kUDi Ala bAradu vairatva mALpavara sollu kELa bAradu

caraNam 3

duSTa karkashi strIyaLa hesaru tegeya bAradu hattu mandiganjadavana snEhisa bAradu

caraNam 4

bankyAge parabanktiyannu mADa bAradu manku jIvanAgi mukti bEDa bAradu

caraNam 5

AcAra hInana maneyoL Uta mADa bAradu vicAra illada sabheyoLu kUDara bAradu

caraNam 6

para puruSariddeDeyoLobbaLiralu bAradu svAmi purandara viTTalana dhyAna mareya bAradu
***

ಕೈಮೀರಿ ಹೋದ ಮಾತಿಗೆ ಮರುಗಬಾರದು | ಪ |

ಮಾತು ಕೇಳದ ಮಕ್ಕಳ ಹೆಸರು ತೆಗೆಯಬಾರದು |
ಪ್ರೀತಿಯಿಲ್ಲದ ಪತಿಯ ಕಂಡು ಹಿಗ್ಗಬಾರದು | ೧ |

ಜಾರತ್ವ ಮಾಡೊ ಪತ್ನಿಯ ಕೂಡಿ ಆಳಬಾರದು
ವೈರತ್ವ ಮಾಳ್ಪವರ ಸೊಲ್ಲು ಕೇಳಬಾರದು | ೨ |

ದುಷ್ಟೆ ಕರ್ಕಶಿ ಸ್ತ್ರೀಯಳ ಹೆಸರು ತೆಗೆಯಬಾರದು |
ಹತ್ತು ಮಂದಿಗಂಜದವನ ಸ್ನೇಹ ಮಾಡಬಾರದು |೩|

ಪಂಕ್ತ್ಯಾಗೆ ಪರಪಂಕ್ತಿಯನ್ನು ಮಾಡಬಾರದು |
ಮಂಕು ಜೀವನಾಗಿ ಮುಕ್ತಿ ಬೇಡಬಾರದು | ೪ |

ಆಚಾರಹೀನನ ಮನೆಯೊಳೂಟ ಮಾಡಬಾರದು |
ವಿಚಾರವಿಲ್ಲದ ಸಭೆಯೊಳು ಕೂಡ್ರಬಾರದು | ೫ |

ಪರಪುರುಷರಿದ್ದೆಡೆಯೊಳೊಬ್ಬಳಿರಲು ಬಾರದು |
ಪುರಂದರ ವಿಠಲನ ಧ್ಯಾನ ಮರೆಯಬಾರದು | ೬ |

another version

ಕೈ ಮೀರಿ ಹೋದ ಮಾತಿಗೆ ಮರುಗಬಾರದು
ಮೈ ಮೇಲೆ ಎಚ್ಚರಿಲ್ಲದೆಲೆ ತಿರುಗಬಾರದು
                  ||ಕೈ ಮೀರಿ||
ತಂದೆ ತಾಯಿ ಮಾತು ಕೇಳದ ,ಮಕ್ಕಳಿರಲೆ ಬಾರದು
ಬಂಧು ಬಳಗದಲ್ಲಿ ಜಗಳವಾಡಬಾರದು
                ||ತಂದೆ ತಾಯಿ||
ನಡತೆ ಹೀನಳಾಗಿ ಹೆಣ್ಣು ಬಾಳಬಾರದು||2||
ಕಡು ವೈರತ್ವ ಮಾಡುವವನ ಮಾತು ಕೇಳಬಾರದು
ಮಾತು ಕೇಳಬಾರದು||2||
                  ||ಕೈ ಮೀರಿ||
ಸತಿ ಸುತರಿಗೆ ಪುರುಷ ವಂಚನೆ ಮಾಡಬಾರದು
ಅತಿ ಉನ್ಮತ್ತನಾಗಿ ಧರ್ಮ ಹಳಿಯಬಾರದು
                      ||ಸತಿ ಸುತರಿಗೆ||
ಆಚಾರವಿಲ್ಲದವರ ಮನೆಯ ಊಟಮಾಡಬಾರದು
                     ||ಆಚಾರ||
ವಿಚಾರವಿಲ್ಲದ ಸಭೆಯಲಿ ಕೂಡಬಾರದು||2||
                         ||ಕೈ ಮೀರಿ||
ಪಂಕ್ತಿಯೊಳಗೆ ಭೇಧಮಾಡಿ ಬಡಿಸಬಾರದು
ಬಿಂಕದಿಂದ ಪರರ ಮನಸ್ಸು ನೋಯಿಸಬಾರದು
ಸಾವುನೋವುಗಳು ಇಲ್ಲವೆಂದು ತಿಳಿಯಬಾರದು
ದೇವನೊಬ್ಬ ಇರುವನೆಂದು ಮರೆಯಬಾರದು
ಪರರ ಸಂಪತ್ತು ನೋಡಿ ಮನದಿ ಕೊರಗಬಾರದು||2||
ಗುರು ಪುರಂದರವಿಠ್ಠಲರಾಯನ 
ಕೊಂಡಾಡದೇ ಇರಲೆಬಾರದು...ಇರಲೆಬಾರದು
                     ||ಕೈ ಮೀರಿ||
***********

No comments:

Post a Comment