Friday 27 December 2019

ಎನ್ನನನ್ಯನಾ ಮಾಡಿ ನೋಡದೆ ಪಾಲಿಸಾ ಬೇಕೋ ankita shreerama

 yogeendra teertha, rayara mutt yati 1688 praying moola rama 

yati's ankita 'shreerama'

" ಶ್ರೀ ಮೂಲರಾಮ ಸ್ತುತಿ "


ರಾಗ : ಭೈರವಿ ತಾಳ : ತ್ರಿವಿಡಿ 


ಯನ್ನನನ್ಯನಾ । ಮಾ ।

ಡಿ ನೋಡದೆ ಪಾಲಿಸಾಬೇಕೋ ।

ನಿನ್ನ ಮನದಲಿಟ್ಟರೆ ಸಾಕೋ ।। ಪಲ್ಲವಿ ।। 


ದುರಂತ ದುರಿತಾ । ರಾ ।

ಶಿ ರೂಪಾ ನಾನಾದಾಡೇನೋ ನಿನ್ನ ಪಾದ ।

ಸರಸೀರುಹ ಸ್ಮರಣೆ ಮಾಡಲು ।

ದುರಿತಾ ಉಂಟೆ ।।

ತರಣಿ ಕಿರಣಾ ಧರಣಿ ವ್ಯಾಪಿಸೆ ।

ಘೋರ ತಿಮರಾ ದೂರಾವಲ್ಲದೆ ।

ಕರುಣದಿಂದಲಿ ಕಾಯದಿದ್ದೊಡೆ ।

ಶರಣರಾರೋ ನೀನೆ ಪೇಳೋ ।। ಚರಣ ।। 


ಕರ್ಮ ಕಾಲ ಕಾಮ ।

ವಿಮತಿ ಪೂರ್ವ ಸರ್ವ ಕಾರಣಂಗಳು ।

ಹರಿಯೇ ನಿನ್ನ ತಂತ್ರವಲ್ಲದೆ ।

ಸ್ವತಂತ್ರ ನೀನೆ ।।

ಪ್ರೇರಕನಾಗಿ ಕರ್ಮಫಲವು ।

ಕ್ಯಲವನುಣಿಸಿ ಕ್ಯಲವನಳಿಸಿ ।

ಹರಿಯೇ ನಿನ್ನ ದರುಶನವಾನಿತ್ತು ।

ದೀನ ಜನರನ ಸಾಕುವಿಯಾಗಿ ।। ಚರಣ ।। 


ಮೀನ ಕೂರ್ಮ ವರಹ ರೂಪಾ ।

ಶ್ರೀ ನಾರಸಿಂಹ ವಾಮನ ।

ವಾನಾನಿ ರಾಮ । ರಾಮ ।

ಕೃಷ್ಣ ಬುದ್ಧ ಕಲ್ಕ್ಯಾದಿ ।।

ಅನೇಕ ರೂಪನಾಗಿ । ಚತು ।

ರಾನನಾದಿ ಭಕುತರಿಗೆ ।

ಜ್ಞಾನವಿತ್ತು ರಕ್ಷಿಸಿ ನೀ ।

ಮಾನಾದಾನೆ ಸಿರಿರಾಮ ।। ಚರಣ ।।

****

by yogeendra teertharu
ಯನ್ನನನ್ಯನಾ ಮಾಡಿ ನೋಡದೆ ಪಾಲಿಸಾ ಬೇಕೋ ।
ನಿನ್ನ ಮನದಲಿಟ್ಟರೆ ಸಾಕೋ ।। ಪ।।

ದುರಂತ ದುರಿತಾ । ರಾ ।
ಶಿ ರೂಪಾ ನಾನಾದಾಡೇನು ನಿನ್ನ ಪಾದ ।
ಸರಸೀರುಹ ಸ್ಮರಣೆ ಮಾಡಲು।
ದುರಿತಾ ಉಂಟೆ ।।
ತರಣಿ ಕಿರಣಾ ಧರಣಿ ವ್ಯಾಪಿಸೆ ।
ಘೋರ ತಿಮಿರಾ ದೂರಾವಲ್ಲದೆ ।
ಕರುಣದಿಂದಲಿ ಕಾಯದಿದ್ದಡೆ ।
ಶರಣರಾರೋ ನೀನೇ ಪೇಳೋ ।। 1 ||

ಕರ್ಮ ಕಾಲಾ ಕಾಮ ।
ವಿಮತಿ ಸರ್ವ ಕಾರಣಂಗಳು ।
ಹರಿಯೇ ನಿನ್ನ ತಂತ್ರವಲ್ಲದೆ ಸ್ವತಂತ್ರ ನೀನೆ ।।
ಪ್ರೇರಕನಾಗಿ ಕರ್ಮಫಲವು ಕ್ಯಲವನುಣಿಸಿ ಕ್ಯಲವನಳಿಸಿ ।
ಹರಿಯೇ ನಿನ್ನ ದರುಶನವಾನಿತ್ತು
ದೀನ ಜನರನ ಸಾಕುವಿಯಾಗಿ ।। 2 ।।

ಮೀನ ಕೂರ್ಮ ವರಾಹ ।
ಶ್ರೀ ನರಾಸಿಂಹ ವಾಮನ ।
ವಾನಾನಿ ರಾಮ ಕೃಷ್ಣ ಬುದ್ಧ ಕಲ್ಕ್ಯಾದಿ ।।
ಅನೇಕ ರೂಪನಾಗಿ । ಚತು ।
ರಾನನಾದಿ ಭಕುತರಿಗೆ ।
ಜ್ಞಾನವಿತ್ತು ರಕ್ಷಿಸಿ ನೀ ।
ಮಾನಾದಾನೆ ಸಿರಿರಾಮ ।।3||
********

No comments:

Post a Comment