Friday 27 December 2019

ಮುನಿಗಳ ನೋಡಿರೊ ಭಕುತಿ ಜ್ಞಾನ ankita gurugopala vittala

ಮುನಿಗಳ ನೋಡಿರೊ – ಭಕುತಿ
ಜ್ಞಾನ ಧನವ ಬೇಡಿರೊ
ಅನಿಲ ದೇವನ ಮತ ವನರಾಶಿಗೆ ಶುಭಚ೦ದ್ರಾ
ಗುರು ರಾಘವೇ೦ದ್ರ        || ಪ ||

ಮನದಲನವರತ ನೆನೆವ ಸುಜನರಿಗೆ ಒಲಿದು – ಮುದದಲಿ ನಲಿದು
ಘನಮಣಿ ಕನಕಭೂಷಣ ಆಯುರಾರೋಗ್ಯ –   ಸಕಲ ಸೌಭಾಗ್ಯಾ
ವನಿತೆ ತನುಜ ಧನ ಮನೆ ಅ೦ದಣ ಸುಜ್ಞಾನ – ಹರಿ ಭಕುತಿ ನಾನಾ
ಮನೋರಥ ನೆನೆದಾಕ್ಷಣವಿತ್ತು ಪಾಲಿಪ ಯೋಗಿ – ಪರಮ ವೈರಾಗಿ                || ೧ ||

ಜನಕ ಜಾಮೂತನ ಗುಣಕ್ರಿಯರೂಪಗಳೆಲ್ಲಾ – ಧೇನಿಸಬಲ್ಲ
ಜನಕಾದಿಗಳ೦ದದಿ ನಿಸ್ಸ೦ಗದಿ ಮೌನಿ – ಅಪರೋಕ್ಷ ಜ್ಞಾನಿ
ಜನಕ ಸುತರ ಪೊರೆವ೦ದದಿ ಭಕ್ತರ ಪೊರೆವ – ಜಗದೊಳು ಮೆರೆವ
ಜನನ ರಹಿತ ಜಗಜ್ಜನನಾದಿ ಕಾರಣ ಹರಿಯಾ – ಒಲಿಸಿದ ಪಿರಿಯಾ   ||೨||

ಭೂತಪ್ರೇತ ದ್ವಿಜಗ್ರಹ ಪೈಶಾಚ ಭೇತಾಳ – ಉಗ್ರಗ್ರಹಗಳ
ಭೀತಿಯಿ೦ದಲಿ ಅನ್ಯತ್ರತರ ಕಾಣದೆ ಬ೦ದಾ – ಜನರ ದಯದಿ೦ದ
ತಾ ತವಕದಿ ಪಾದತೋಯದಿ೦ದೋಡಿಸಿ – ಭಯವನು ಬಿಡಿಸಿ
ಶ್ವೇತ ಕುಷ್ಠ ಪಿತ್ತ ಸೀತ ವಾತರೋಗಗಳ ಕಳೆವಾ – ಕೀರ್ತಿಲಿ ಪೊಳೆವಾ                || ೩ ||

ಗುರು ಸುಧೀ೦ದ್ರರ ಕರಸರಸೀರುಹ ಜಾತಾ – ಕೇವಲ ಪ್ರಖ್ಯಾತಾ
ಧರೆಯೊಳು ಜಯಮುನಿ ಒರೆದ ಶಾಸ್ತ್ರದ ಭಾವವ ಮ೦ಥಿಸಿ – ಗ್ರ೦ಥವ ರಚಿಸಿ
ಪರಮಶಿಷ್ಯರಿಗುಪದೇಶವನು ಮಾಡಿ – ಸ೦ಶಯ ಈಡ್ಯಾಡಿ
ನರಹರಿ ಸರ್ವೋತ್ತಮನೆ೦ದು ಮೆರೆವಾ – ಭಕುತರ ಪೊರೆವಾ                || ೪ ||

ಸಿರಿವರ ಗುರುಗೋಪಾಲವಿಠ್ಠಲನ ಶರಣಾ-ಮುನಿ ಶಿರೊಭರಣಾ
ಮೊರೆಹೊಕ್ಕ ಜನರ ದುರಿತಗಜಕೆ ಭೇರು೦ಡಾ – ವರಯತಿ ಶೌ೦ಡಾ
ಪರಮತ ದುರುಳ ಕುವಾದಿ ಸ೦ಘ ಜೀಮೂತಾ- ಝ೦ಝಾವಾತಾ
ನೆರೆನ೦ಬಿದವರಿಗೆ ಸುರತರು ಚಿ೦ತಾಮಣಿಯೋ- ಶುಭೋದಯ ಖಣಿಯೋ            || ೫ ||
******

No comments:

Post a Comment