Friday 27 December 2019

ಆರುತಿ ಬೆಳಗಿರೆ ಕೇಶವ ಮೂರ್ತಿಗೆ ಪಾರಾಯಣ ಮಾಡಿ ankita madhwesha krishna

ಕೇಶವಾದಿ ನಾರಾಯಣಗೆ ಆರುತಿ
ಆರುತಿ ಬೆಳಗಿರೆ ಕೇಶವ ಮೂರ್ತಿಗೆ ಪಾರಾಯಣ ಮಾಡಿ ನಾರಾಯಣಗೆ
ಕೀರುತಿ ಪೊಗಳುತ  ಮಾಧವಗೆ ಆನಂದದಿ ಮಾಡೆ ಗೋವಿಂದಗೆ||ಪಲ್ಲ||

ಕಷ್ಟಗಳ ಕಳೆಯೆಂದು ವಿಷ್ಣುವಿಗೆ ಮೋದದಿಂದ ಮಧುಸೂದನಗೆ
ಚಕ್ರಧರನು ತ್ರಿವಿಕ್ರಮಗೆ ಪಾವನ ಮೂರುತಿ ವಾಮನಗೆ||೧||

ಆದರದಲಿ ಮಾಡೆ ಶ್ರೀಧರಗೆ ದೋಷ ಕಳೆವ ಹೃಷಿಕೇಶನಿಗೆ
ಹೃತ್ಪದ್ಮದಲ್ಲಿರುವ ಪದ್ಮನಾಭನಿಗೆಆಮೋದದಿ ಮಾಡೆ ದಾಮೋದರಗೆ||೨||

ಶಂಕರರಿಂದೊಂದಿತ ಸಂಕರುಷಣಗೆ ಲೇಸುಮಾಡುವ ವಾಸುದೇವನಿಗೆ
ವಿದ್ಯ ಬುಧ್ಧಿ ನೀಡೊ ಪ್ರದ್ಯುಮ್ನನಿಗೆ ಧೇನುಪಾಲಕ ಅನಿರುಧ್ಧನಿಗೆ||೩|||

ಹರುಷದಿಂದ ಪುರುಷೋತ್ತಮಗೆ ಪಾದಕೊಂದಿಸಿ ಅದೋಕ್ಷಜಗೆ
ಪಾರುಗಾಣಿಪ ನಾರಸಿಂಹಗೆ ಚ್ಯುತಿಯಿಲ್ಲದೆ ನಮ್ಮ ಅಚ್ಯತಗೆ||೪||

ಧನದಾಸೆಯಿಲ್ಲದೆ ಜನಾರ್ಧನಗೆ ಸಂಪ್ರೀತಿಯಿಂದ ಉಪೇಂದ್ರನಿಗೆ
ಲೀಲೆಯಿಂದಲಿ ಶ್ರೀ ಹರಿಗೆಉಧ್ಧರಿಪ ಕೃಷ್ಣ ಮಧ್ವೇಶಕೃಷ್ಣಗೆ||೫||
*********

No comments:

Post a Comment