Thursday 17 October 2019

ಆರಯ್ಯಾ ಕಣ್ಣ ಮುಂದೆ ಬಂದು ನಿಂತಿಯೋ ankita vijaya vittala

ವಿಜಯದಾಸ
ಆರಯ್ಯಾ ಕಣ್ಣ ಮುಂದೆ ಬಂದು ನಿಂತಿಯೋ |
ಸಾರು ನೀನು ಎನಗೆ ಸುಮ್ಮನ್ಯಾತಕೆ ಯಿದ್ದೀ ಪ

ನೀರೊಳು ಮುಣಗೆ ವೇದವ ತಂದಾತನೊ |
ಭಾರವನು ಪೊತ್ತು ಸುರರ ಕಾಯಿದಾತನೊ |
ಧಾರುಣಿ ನೆಗಹಿ ಉದ್ಧಾರ ಮಾಡಿದಾತನೊ |
ಕೂರ್ರ ದೈತ್ಯನ ಕೊಂದ ಕುಜನ ಗಿರಿಗೆ ವಜ್ರನೊ1

ಗಗನಕೆ ಬೆಳದು ಸುರ ನದಿಯ ಪಡೆದಾತನೊ |
ಹಗೆಗಳ ಕೊಂದು ಹರುಷಿತನಾದನೊ |
ಜಗವರಿಯೆ ಶಿಲಿಯ ನಾರಿಯ ಮಾಡಿದಾತನೊ |
ಮಗನಮಗನ ತಂದ ಮಹಿಮನೊ 2

ಹರಗೆ ಸಾಯಕವಾಗಿ ಪುರ ಉರಹಿದಾತನೊ |
ದುರುಳರನ ಕೊಂದ ದುರ್ಲಭದೇವನೊ |
ಕರಿರಾಜ ವರದ ಶ್ರೀ ವಿಜಯವಿಠ್ಠಲರೇಯ -
ಶರಣರಿಗೊಲಿದು ಬಂದ ಸರ್ವೋತ್ತಮನೊ 3
*********

No comments:

Post a Comment