Wednesday, 16 October 2019

ಇಷ್ಟವಿಲ್ಲದ ಕಾರ್ಯ ಕಟ್ಟುಣಿಸುವುದು ankita vijaya ramachandra vittala appavara stutih

 ಶ್ರೀ ವಿಜಯರಾಮಚಂದ್ರವಿಠಲ ಕೃತಿ

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


 ರಾಗ ಕಾಂಬೋಧಿ ಖಂಡಛಾಪುತಾಳ


ಇಷ್ಟವಿಲ್ಲದ ಕಾರ್ಯ ಕಟ್ಟುಣಿಸುವುದು ।

ಕಟ್ಟಳೆ ಎನ್ನದೆಂತೋ ॥ ಪ ॥

ನಷ್ಟಗೈಸುವುದಿನ್ನು ಕಷ್ಟಪಡಿಸಲಿ ಬ್ಯಾಡ ।

ಇಷ್ಟ ಕೃಷ್ಣಾರ್ಯನೇ ॥ ಅ ಪ ॥


ಪುಟ್ಟಿದ ಮೊದಲಾಗಿ ಭ್ರಷ್ಟತನವೇ ಪೊಂದಿ ।

ದುಷ್ಟರೊಳು ಶ್ರೇಷ್ಠನಾದೆ ॥

ಎಷ್ಟು ದಿನ ಇದರಂತೆ ಇಟ್ಟಿರುವೆಯೊ ಗುರುವೇ ।

ಇಷ್ಟೇನೆ ಎನ್ನ ಯೋಗ್ಯತೆಯು ॥ 1 ॥


ಪಾಪಿ ವಿಷಯ ಜ್ವಾಲೆಯು ಕುಪಿತನೆಂದೆನ್ನ ।

ತಪಿಸಿ ಬೇಯಿಸುವುದೋ ॥

ಕೃಪೆಯೆಂಬ ಮಳೆಗರೆದು ಉಪಶಮನ ಮಾಡೋ ।

ಆಪದ್ಭಾಂಧವನಲ್ಲವೇ ಗುರುವೇ ॥ 2 ॥


ಪಾಪಕಾರ್ಯರತನ ಪಾಪ ಎಣಿಸದೇ ಜನರಿಂದ ।

ತಾಪಸಿ ಎನಿಸುವುದ್ಯಾಕೋ ॥

ಭೂಪ ವಿಜಯರಾಮಚಂದ್ರವಿಠ್ಠಲನ।

ಆ ಪಾದಪದುಮವ ನಂಬಿಹ ಗುರುವೇ ॥ 3 ॥

***


ಇಷ್ಟವಿಲ್ಲದ ಕಾರ್ಯ ಕಟ್ಟುಣಿಸುವುದು

ಕಟ್ಟಳೆ ನಿನ್ನದೆಂತೊ ಪ.


ನಷ್ಟಗೈಸುವುದಿನ್ನು ಕಷ್ಟಪಡಿಸಲಿಬ್ಯಾಡ

ಇಷ್ಟ ಕೃಷ್ಣಾರ್ಯನೆ ಅ.ಪ


ಪುಟ್ಟಿದಾ ಮೊದಲಾಗಿ ನಷ್ಟತನವನೆ ಹೊಂದಿ

ದುಷ್ಟರೊಳು ಶ್ರೇಷ್ಠನಾದೆ

ಎಷ್ಟುದಿನ ಇದರಂತೆ ಇಟ್ಟಿರುವೆಯೊ ಗುರುವೆ

ಇಷ್ಟೇವೆ ಎನ್ನ ಯೋಗ್ಯತೆಯು 1


ಪಾಪಿ ವಿಷಯ ಜ್ವಾಲೆಯು ಕುಪಿತದಿಂದೆನ್ನ

ತಪಿಸಿ ಬೇಯಿಸುತಿದೆ

ಕೃಪೆಯೆಂಬ ಮಳೆಗರೆದು ಉಪಶಮನವನೆ ಮಾಡು

ಆಪದ್ಭಾಂಧವನಲ್ಲವೇ ಗುರುವೆ2


ಪಾಪಕಾರ್ಯರತನ ಪಾಪಿ ಎಂದೆನಿಸದೆ | ಜನರಿಂದ

ತಪಸಿ ಎಂದೆನಿಸುವುದ್ಯಾತಕೆ

ಭೂಪ ವಿಜಯ ರಾಮಚಂದ್ರವಿಠಲನ

ಆ ಪಾದ ಪದುಮವ ನಂಬಿಹ ಗುರುವೆ 3

***


No comments:

Post a Comment