Saturday 4 December 2021

ಪಾಂಡುರಂಗ ತ್ವತ್ಪಾದ ಪಾಲಿಸಯ್ಯ ಕರುಣದಿ ankita tande shreepati vittala PAANDURANGA TATPAADA PAALISAYYA KARUNADI



ಪಾಂಡುರಂಗ ತ್ವತ್ಪಾದ ಪಾಲಿಸಯ್ಯ ಕರುಣದಿ ಪಿಡಿಕೈಯ್ಯ || ಪ ||

ಪುಂಢರೀಕಮುನಿವರದ ನಮಿಪೆ ನಿನಗೇ ನೀ ತ್ವರಿತದಲ್ಲೆನಗೆ || ಅ.ಪ ||

ವನಜಭವಾದಿ ಸಮಸ್ತ ಸುರವ್ರಾತಾ-ವಂದಿತ ಶ್ರೀನಾಥಾ
ಪ್ರಣತಾರ್ಥಾಹರನೆ ಕಾಮಿತಫಲದಾತಾ-ಮುನಿಗಣಸಂಧ್ಯಾ ತಾ
ನೆನೆವ ಜನರ ಮನದೊಳಿಹ ವಿಖ್ಯಾತಾ-ಭುವನಾದಿನಾಥಾ
ಘನಮಹಿಮ ಒಲಿದು ಪಾಲಿಸೆನ್ನ ಮಾತಾ-ದಯಮಾಡಿ ತ್ವರಿತಾ || ೧ ||

ಸುರಚಿರ ಮಹಿಮನೆ ಭಜಕಾಮರಧೇನೂ-ವಸುದೇವರ ಸೂನೂ
ಧರಣಿಯೊಳಗೆ ನಮ್ಮ ಹಿರಿಯರನುದ್ಧಾರಾ-ಮಾಡಿದ ಗಂಭೀರಾ
ದೊರೆಯೇ ನಿನ್ಹೊರತನ್ಯರನಾನರಿಯೇ-ಕೇಳಲೊ ನರಹರಿಯೇ
ಕರೆಕರೆ ಭವದೊಳು ಬಿದ್ದು ಬಾಯ್ಬಿಡುವೇ-ಪೊರೆಯೆಂದು ನುಡಿವೇ || ೨ ||

ಬಂದ ಜನರ ಭವಸಾಗರ ಪರಿಮಿತಿ-ತೋರಿಸುತಿಹ ರೀತೀ
ಚೆಂದದಿಂದ ಕರವಿಟ್ಟು ಕಟಿಗಳಲ್ಲಿ-ಈ ಸುಕ್ಷೇತ್ರದಲೀ
ನಿಂದಿಹ ಭೀಮಾತೀರ ಚಂದ್ರಭಾಗಾದಲ್ಲಿಯ ವೈಭೋಗಾ
ತಂದೆ ಶ್ರೀಪತಿ ವಿಠ್ಠಲ ಸುಖಸಿಂಧೋ-ಅನಾಥ ಬಂಧೋ || ೩ ||
***********

ರಾ ಗ - ಸಂದಡಿ  :  ತಾಳ - ಆದಿತಾಳ

ಪಾಂಡುರಂಗ ತ್ವತ್ಪಾದ ಪಾಲಿಸಯ್ಯ l
ಕರುಣದಿ ಪಿಡಿ ಕೈಯ್ಯಾ l
ಪುಂಡರೀಕ ಮುನಿವರದ ನಮಿಪೆ ನಿನಗೇ l
ನೀ ತ್ವರಿತದಲೆನಗೇ ll ಪ ll

ವನಜಭವಾದಿ ಸಮಸ್ತ ಸುರವ್ರಾತಾ l
ವಂದಿತ ಶ್ರೀನಾಥಾ l
ಪ್ರಣತಾರ್ತಿಹರನೆ ಕಾಮಿತ ಫಲದಾತಾ l
ಮುನಿಗಣ ಸಂಧ್ಯಾತಾ l
ನೆನೆವ ಜನರ ಮನದೊಳಗಿಹ ವಿಖ್ಯಾತಾ l
ಭುವನಾದಿ ನಾಥಾ l
ಘನ ಮಹಿಮಲಿದು ಲಾಲಿಸೆನ್ನ ಮಾತಾ l
ದಯಮಾಡಿ ತ್ವರಿತಾ ll 1 ll

ಸುರಚಿರ ಮಹಿಮನೇ ಭಾಜಕಾಮರಧೇನೂ l
ವಸುದೇವಸೂನೂ l
ಧರಣಿಯೊಳಗೆ ನಮ್ಮ ಹಿರಿಯರ ಉದ್ಧಾರಾ l
ಮಾಡಿದ ಗಂಭೀರಾ l
ಧೊರೆ ನಿಮ್ಹೊರತು ಅನ್ಯರನ ನಾನರಿಯೇ l
ಕೇಳಲೋ ನರಹರಿಯೇ l
ಕರಕರಿ ಭವದೊಳು ಬಿದ್ದು ಬಾಯಿ ಬಿಡುವೇ l
ಪೊರಿ ಎಂದು ನುಡಿವೇ ll 2 ll

ಬಂದ ಜನರ ಭವಸಾಗರ ಪರಿಮಿತೀ l
ತೋರಿಸುತಿಹ ರೀತೀ l
ಛಂದದಿಂದ ಕರವಿಟ್ಟು ಕಟಿಗಳಲ್ಲೀ l 
ಈ ಸುಕ್ಷೇತ್ರದಲೀ l
ನಿಂದಿಹ ಭೀಮಾತೀರಾ ಚಂದ್ರಭಾಗಾ l
ದಲ್ಲಿಹ ವೈಭೋಗಾ l
ತಂದೆಶ್ರೀಪತಿವಿಠಲ ಸುಖಸಿಂಧೋ l
ಅನಾಥ ಬಂಧೋ ll 3 ll
******

ರಾಗ : ಸಂದಡಿ    ತಾಳ : ಆದಿ

ಪಾಂಡುರಂಗ ತ್ವತ್ಪಾದ

ತೋರಿಸಯ್ಯಾ ।

ಕರುಣದಿ ಪಿಡಿಯಯ್ಯಾ ।

ಪುಂಡರೀಕ ಮುನಿ

ವರದ ನಮಿಪೆ ನಿನಗೇ ।

ನೀ ತ್ವರಿತದಿಲೆನಗೇ ।। ಪಲ್ಲವಿ ।।

ವನಜ ಭವಾದಿ

ಸಮಸ್ತ ಸುರವ್ರಾತಾ ।

ವಂದಿತ ಶ್ರೀನಾಥಾ ।

ಪ್ರಣತಾರ್ತಿಹರನೆ

ಕಾಮಿತ ಫಲದಾತಾ ।

ಮುನಿಗಣ ಸಂಧ್ಯಾತಾ ।।

ನೆನೆವ ಜನರ ಮನ-

ದೊಳಗಿಹ್ಯ ವಿಖ್ಯಾತ ।

ಭುವನಾಧಿ ನಾಥಾ ।

ಘನ ಮಹಿಮ ಒಲಿದು

ಲಾಲಿಸೆನ್ನ ಮಾತಾ ।

ದಯಮಾಡಿ ತ್ವರಿತಾ ।। ಚರಣ ।।

ಸುರಚಿರ ಮಹಿಮನೆ

ಭಜ ಕಾಮಧೇನೂ ।

ವಸುದೇವ ಸೂನೂ ।

ಧರಣಿಯೊಳಗೆ ನಮ್ಮ

ಹಿರಿಯರ ಉದ್ಧಾರ ।

ಮಾಡಿದ ಘಂಭೀರಾ ।।

ಧೊರೆ ನಿಮ್ಹೊರತು

ಅನ್ಯರನ ನಾನರಿಯೆ ।

ಕೇಳೆಲೊ ನರಹರಿಯೇ ।

ಕರಕರಿ ಭವದೊಳು

ಬಿದ್ದು ಬಾಯಿ ಬಿಡುವೆ ।

ಪೊರಿಯೆಂದು

ನುಡಿವವೇ ।। ಚರಣ ।।

ಬಂದ ಜನರ

ಭವಸಾಗರ ಪರಿಮಿತೀ ।

ತೋರಿಸುತಿಹ್ಯ ರೀತೀ ।

ಛಂದದಿಂದ

ಕರವಿಟ್ಟು ಕಟಿಗಳಲ್ಲಿ ।

ಈ ಸುಕ್ಷೇತ್ರದಲ್ಲಿ ।।

ನಿಂದಿಹ್ಯ ಭೀಮಾ

ತೀರ ಚಂದ್ರಭಾಗಾ ।

ದಲ್ಲಿಹ್ಯ ವೈಭೋಗಾ ।

ತಂದೆ ಶ್ರೀಪತಿ -

ವಿಠ್ಠಲಸುಖ ಸಿಂಧೋ ।

ಅನಾಥ ಬಂಧೋ ।। ಚರಣ ।।

***

No comments:

Post a Comment