Wednesday, 16 October 2019

ಮಂಗಲಂ ಜಯ ಮಂಗಲಂ ಮುಂಡಿಗೆ ankita neleyadikeshava MANGALAM JAYA MANGALAM MUNDIGE


RESTART MOBILE IF AUDIO IS NOT PLAYING  CLICK-> HOME

or just scroll down for other devaranama 

ಮಂಗಲಂ ಜಯ ಮಂಗಲಂ 
ಮಂಗಲಂ ಜಯ ಮಂಗಲಂ

ಅಂಧಕನನುಜನ ಕಂದನ ತಂದೆಯ 
ಕೊಂದನ ಶಿರದಲಿ ನಿಂದವನ
ಚೆಂದದಿ ಪಡೆದನ ನಂದನೆಯಳನೊಲ
ವಿಂದದಿ ಧರಿಸಿದ ಮುಕುಂದನಿಗೆ | ೧ |

ರಥನಡರಿ ಸುರಪಥದಲಿ ತಿರುಗುವ 
ಸುತನಿಗೆ ಶಾಪವನಿತ್ತವನ
ಖತಿಯನ್ನು ತಡೆದನ ಸತಿಯ ಜನನಿ ಸುತ 
ಸತಿಯರನಾಳಿದ ಚತುರನಿಗೆ | ೨ |

ಹರಿಯ ಮಗನ ಶಿರ ಹರಿದನ ತಂದೆಯ 
ಹಿರಿಯ ಮಗನ ತಮ್ಮನ ಪಿತನ
ಭರದಿ ಭಕ್ಶಿಸುವನ ಶಿರದಲಿ ನಟಿಸಿದ 
ವರಕಾಗಿನೆಲೆಯಾದಿಕೇಶವರಾಯಗೆ | ೩ |
***

Mangalam Jaya Mangalam - Transliteration
Pallavi (Chorus)
Maṅgalaṁ jaya maṅgalaṁ
Maṅgalaṁ jaya maṅgalaṁ

Stanza 1
Andhakananujana kandana tandeya
Kondana śiradali nindavana
Chendadi padedana nandaneyaḷanola-
Vindadi dharisida Mukundanige | 1 |

Stanza 2
Ratha-naḍari surapathadali tiruguva
Sutanige śāpavanittavana
Khatiyannu taḍedana satiya janani suta
Satiyaranāḷida chaturanige | 2 |

Stanza 3
Hariya magana śira haridana tandeya
Hiriya magana tammana pitana
Bharadi bhakśishuvana śiradali naṭisida
Varakāgineleyādikēśavarāyage | 3 |
***

Quick Pronunciation Tips
ṁ / n / ṅ: Represents the nasal sound (Anusvara), similar to "humming" the end of a syllable.
ś: Pronounced as a soft "sh" (like in shakti).
ḷ: A retroflex "l" where the tongue curls back to touch the roof of the mouth.
ā / ē / ī: These are long vowels—hold the sound for two beats (e.g., śāpa sounds like "shaapa").
ḍ / ṭ: Retroflex consonants—tongue touches the hard palate (roof of the mouth).
***

ಕಾಗಿನೆಲೆಯ ಶ್ರೇಷ್ಠ ಭಕ್ತರಾದ ಶ್ರೀ ಕನಕದಾಸರು ವಿರಚಿಸಿದ ಈ "ಮಂಗಲಂ ಜಯ ಮಂಗಲಂ" ಹಾಡು ಶಬ್ದ ಚಮತ್ಕಾರಕ್ಕೆ ಅತ್ಯಂತ ಹೆಸರುವಾಸಿಯಾದ ರಚನೆ. ನೇರವಾಗಿ ದೇವರ ಹೆಸರನ್ನು ಬಳಸುವ ಬದಲು, ಸಂಬಂಧಗಳ ಸರಪಳಿಯ ಮೂಲಕ ಭಗವಂತನನ್ನು ವರ್ಣಿಸುವ 'ಪ್ರಹೇಲಿಕೆ' (Riddle) ಶೈಲಿ ಇಲ್ಲಿದೆ.
ಸಾರಾಂಶ
ಈ ಕೃತಿಯಲ್ಲಿ ಕನಕದಾಸರು ಭಗವಂತನಾದ ಶ್ರೀ ಕೃಷ್ಣನನ್ನು (ಆದಿಕೇಶವ) ಅತ್ಯಂತ ಚತುರತೆಯಿಂದ ಸ್ತುತಿಸಿದ್ದಾರೆ. ಇಲ್ಲಿ ನೇರವಾಗಿ ದೇವರ ಹೆಸರನ್ನು ಬಳಸುವ ಬದಲು, ಪುರಾಣದ ವಿವಿಧ ಪಾತ್ರಗಳ ಸಂಬಂಧಗಳ ಸರಪಳಿಯ ಮೂಲಕ ವಿಷ್ಣುವಿನ ಮಹಿಮೆಯನ್ನು ವರ್ಣಿಸುವ 'ಪ್ರಹೇಲಿಕೆ' ಅಥವಾ ಒಗಟಿನ ಶೈಲಿಯನ್ನು ಬಳಸಲಾಗಿದೆ.

ಪದ್ಯವಾರು ಭಾವಾರ್ಥ (ಕನ್ನಡದಲ್ಲಿ)
ಪಲ್ಲವಿ:

ಮಂಗಲಂ ಜಯ ಮಂಗಲಂ ಮಂಗಲಂ ಜಯ ಮಂಗಲಂ

ಭಾವಾರ್ಥ: ವಿಜಯಶಾಲಿಯಾದ ಆ ಪರಮಾತ್ಮನಿಗೆ ಮಂಗಳವಾಗಲಿ, ಜಯವಾಗಲಿ.

ಪದ್ಯ ೧:

ಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನ
ಚೆಂದದಿ ಪಡೆದನ ನಂದನೆಯಳನೊಲವಿಂದದಿ ಧರಿಸಿದ ಮುಕುಂದನಿಗೆ

ಭಾವಾರ್ಥ: ಈ ಪದ್ಯವು ಗಂಗೆಯ ಉಗಮ ಮತ್ತು ಅವಳನ್ನು ಪಾದದಲ್ಲಿ ಧರಿಸಿದ ಮುಕುಂದನನ್ನು ವರ್ಣಿಸುತ್ತದೆ:

ಅಂಧಕಾಸುರನ ತಮ್ಮ ಯಮ. ಯಮನ ಮಗ ವಿದುರ (ಅಥವಾ ಧರ್ಮರಾಜ). ಅವನ ತಂದೆ ಪಾಂಡು. ಪಾಂಡುವನ್ನು ಕೊಂದವನು (ಶಾಪದ ಮೂಲಕ) ದೂರ್ವಾಸ ಮುನಿ ಅಥವಾ ಅವನಿಗೆ ಕಾರಣನಾದ ಶಿವ. ಶಿವನ ತಲೆಯಲ್ಲಿ ನಿಂತವಳು ಗಂಗೆ. ಆ ಗಂಗೆಯನ್ನು ಮಗಳಾಗಿ ಪಡೆದವನು ಜಹ್ನು ಮುನಿ. ಅಂತಹ ಗಂಗೆಯನ್ನು ಪ್ರೀತಿಯಿಂದ ತನ್ನ ಪಾದಗಳಲ್ಲಿ ಧರಿಸಿದ ಮುಕುಂದನಿಗೆ ಮಂಗಳವಾಗಲಿ.

ಪದ್ಯ ೨:

ರಥನಡರಿ ಸುರಪಥದಲಿ ತಿರುಗುವ ಸುತನಿಗೆ ಶಾಪವನಿತ್ತವನ
ಖತಿಯನ್ನು ತಡೆದನ ಸತಿಯ ಜನನಿ ಸುತ ಸತಿಯರನಾಳಿದ ಚತುರನಿಗೆ

ಭಾವಾರ್ಥ: ಇಲ್ಲಿ ಅರ್ಜುನನ ಸಾರಥಿಯಾದ ಕೃಷ್ಣನ ಮಹಿಮೆ ಇದೆ:

ರಥವನ್ನೇರಿ ಆಕಾಶದಲ್ಲಿ (ಸುರಪಥ) ತಿರುಗುವ ಸೂರ್ಯನ ಮಗ ಕರ್ಣ. ಕರ್ಣನಿಗೆ ಶಾಪವಿತ್ತವನು ಪರಶುರಾಮ. ಆ ಪರಶುರಾಮನ ಕೋಪವನ್ನು (ಖತಿ) ತಡೆದವನು ಶ್ರೀರಾಮ. ಶ್ರೀರಾಮನ ಪತ್ನಿ ಸೀತೆಯ ತಾಯಿ ಭೂದೇವಿ. ಭೂದೇವಿಯ ಪುತ್ರ ನರಕಾಸುರ. ನರಕಾಸುರನ ಸೆರೆಯಲ್ಲಿದ್ದ ಸಾವಿರಾರು ಸ್ತ್ರೀಯರನ್ನು (ಸತಿಯರನ್ನು) ಮದುವೆಯಾಗಿ ಕಾಪಾಡಿದ ಚತುರನಾದ ಕೃಷ್ಣನಿಗೆ ಮಂಗಳವಾಗಲಿ.

ಪದ್ಯ ೩:

ಹರಿಯ ಮಗನ ಶಿರ ಹರಿದನ ತಂದೆಯ ಹಿರಿಯ ಮಗನ ತಮ್ಮನ ಪಿತನ
ಭರದಿ ಭಕ್ಷಿಸುವನ ಶಿರದಲಿ ನಟಿಸಿದ ವರಕಾಗಿನೆಲೆಯಾದಿಕೇಶವರಾಯಗೆ

ಭಾವಾರ್ಥ: ಇದು ಕಾಳಿಂಗ ಮರ್ದನದ ಸನ್ನಿವೇಶವನ್ನು ವಿವರಿಸುತ್ತದೆ:

ಹರಿ (ಇಂದ್ರ)ನ ಮಗ ಅರ್ಜುನ. ಅರ್ಜುನನ ತಲೆ ಹರಿಯಲು (ಸಂಹರಿಸಲು) ಬಂದವನು ಶಿವ. ಶಿವನ ತಂದೆ ಬ್ರಹ್ಮ. ಬ್ರಹ್ಮನ ಹಿರಿಯ ಮಗ ಸನಕಾದಿಗಳು. ಅವರ ತಮ್ಮ (ಅಥವಾ ಅದೇ ಪರಂಪರೆಯವನು) ವಾಯುದೇವ/ಹನುಮಂತ. ವಾಯುದೇವನ ವಾಹನ ಅಥವಾ ಸಂಬಂಧಿ ಗರುಡ. ಗರುಡನು ಭರದಿಂದ ಭಕ್ಷಿಸುವುದು ಹಾವುಗಳನ್ನು. ಅಂತಹ ಹಾವಿನ (ಕಾಳಿಂಗ ಸರ್ಪ) ಶಿರದ ಮೇಲೆ ನರ್ತಿಸಿದ ಕಾಗಿನೆಲೆಯ ಆದಿಕೇಶವನಿಗೆ ಮಂಗಳವಾಗಲಿ.
***

This song, "Mangalam Jaya Mangalam," composed by the great devotee of Kaginele, Sri Kanakadasa, is a structure renowned for its linguistic brilliance. Instead of using the Lord's names directly, it employs a "Prahelike" (Riddle) style, describing the Divine through a chain of mythological relationships.

Summary
In this work, Kanakadasa praises Lord Sri Krishna (Adikeshava) with great ingenuity. Rather than addressing Him directly, the poet uses a riddle-like format, weaving together a chain of relationships between various mythological characters to illustrate the glory of Lord Vishnu.

Stanza-wise Meaning
Chorus (Pallavi):
Mangalam Jaya Mangalam, Mangalam Jaya Mangalam

Meaning: May there be victory and eternal auspiciousness to the Supreme Soul, the ever-victorious one.

Stanza 1:
Andhakananujana kandana tandeya kondana shiradali nindavana
Chendadi padedana nandaneyalanolavindadi dharisida Mukundanige

Meaning: This verse describes the origin of the River Ganga and Lord Mukunda, who holds her at His feet:

The brother of the demon Andhakasura is Yama.

Yama's son is Vidura (or Dharmaraja).

His father is Pandu.

The one who caused Pandu's death (via a curse/incident) is associated with Shiva.

The one who stands upon Shiva's head is Ganga.

The one who obtained Ganga as a daughter (by drinking and releasing her) is Sage Jahnu.

To that Mukunda, who holds such a holy Ganga (born from His own feet) with immense love, let there be auspiciousness.

Stanza 2:
Rathanadari surapathadali tiruguva sutanige shapavanittavana
Khatiyannu tadedana satiya janani suta satiyaranalida chaturanige

Meaning: This describes the glory of Krishna, the charioteer of Arjuna:

The son of the Sun (who travels the celestial path in a chariot) is Karna.

The one who gave a curse to Karna is Parashurama.

The one who checked/subdued the anger (khati) of Parashurama is Sri Rama.

Sri Rama's wife is Sita, and her mother is Mother Earth (Bhudevi).

The son of Mother Earth is Narakasura.

To the clever Krishna, who married and protected the thousands of women (satiyaru) held captive by Narakasura, let there be auspiciousness.

Stanza 3:
Hariya magana shira haridana tandeya hiriya magana tammana pitana
Bharadi bhakshishuvana shiradali natisida varakagineleyadikeshavarayage

Meaning: This explains the context of the subduing of the serpent Kaliya (Kalinga Mardana):

The son of Hari (Indra) is Arjuna.

The one who came to "cut the head" (slay/fight) of Arjuna (in the form of Kirata) is Shiva.

Shiva's father (creator) is Brahma.

Brahma's eldest sons are the Sanakadi sages.

Their brother (in the divine hierarchy/lineage) is Vayu/Hanuman.

The relative/vehicle associated with Vayu (in the context of bird vs. wind) is Garuda.

What Garuda preys upon with great speed are the Serpents.

To the Great Adikeshava of Kaginele, who danced upon the head of such a serpent (Kaliya), let there be auspiciousness.
***



Mangalam jayamamgalam||pa||

Andhakananujana kandana tandeya kondana Siradali nindavana |
Chendadi padedana nandaneyalanolavindadi dharisida mukundanige | 1 |

Rathavanadari surapathadali tiruguva sutanige sapavanittavana |
Katiyannu tadedana satiya janini suta satiyaranalida caturanige | 2 |

Hariya magana Sira haridana tandeya hiriya magana tammana pitana |
Baradi bakshisuvana Siradali natisida varakagineleyadikesavarayage | 3 |
***

ಕನಕದಾಸರ ಮಂಗಲ
🍀🍀🍀🍀🍀🍀

ಕನಕದಾಸರ ವಿಶಿಷ್ಟ ಶೈಲಿಯೆಂದರೆ ಅವರು ಬಳಸುವ ಪದ ಸಾಹಿತ್ಯದಿಂದ ಹಲವಾರು ಕಥೆ ನೆನಪಿಸುವುದು.

ಮಂಗಲಂ ಜಯ ಮಂಗಲಂ ಮಂಗಲಂ ಜಯ ಮಂಗಲಂ

ಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನ
ಚೆಂದದಿ ಪಡೆದನ ನಂದನೆಯಳನೊಲವಿಂದದಿ ಧರಿಸಿದ ಮುಕುಂದನಿಗೆ | ೧ |

ರಥವನಡರಿ ಸುರಪಥದಲಿ ತಿರುಗುವ ಸುತನಿಗೆ ಶಾಪವನಿತ್ತವನ
ಖತಿಯನ್ನು ತಡೆದನ ಸತಿಯ ಜನನಿ ಸುತ ಸತಿಯರನಾಳಿದ ಚತುರನಿಗೆ | ೨ |

ಹರಿಯ ಮಗನ ಶಿರ ಹರಿದನ ತಂದೆಯ ಹಿರಿಯ ಮಗನ ತಮ್ಮನ ಪಿತನ
ಭರದಿ ಭಕ್ಶಿಸುವನ ಶಿರದಲಿ ನಟಿಸಿದ ವರಕಾಗಿನೆಲೆಯಾದಿಕೇಶವರಾಯಗೆ |೩ |

ಮಂಗಲಂ ಜಯ ಮಂಗಲಂ ಮಂಗಲಂ ಜಯ ಮಂಗಲಂ !!
***

explanation by narahari sumadhwa

ಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನ
ಚೆಂದದಿ ಪಡೆದನ ನಂದನೆಯಳನೊಲವಿಂದದಿ ಧರಿಸಿದ ಮುಕುಂದನಿಗೆ | ೧ |

ವಿವರಣೆ:. 
ಅಂಧಕನ - ಧೃತರಾಷ್ಟ್ರನ
ಅನುಜನ -  ಅನುಜ ಪಾಂಡುವಿನ 
ಕಂದನ -  ಕಂದನಾದ ಯುಧಿಷ್ಠಿರನ
ತಂದೆಯ - ಪಿತ ಯಮಧರ್ಮನ
ಕೊಂದನ - ಕಾರ್ಯವನ್ನು ತಡೆದ ಶಿವನ  (ಮಾರ್ಕಂಡೇಯನ ಎಳೆದೊಯ್ಯಲು ಬಂದ ಯಮನ ವಾಪಸ್ಸು ಕಳುಹಿದ ಶಿವ)
ಶಿರದಲಿ ನಿಂದವನ -  ತಲೆಯಲ್ಲಿ ಆಶ್ರಿತ ಚಂದ್ರನ 
ಚಂದದಿ ಪಡೆದನ - ಸಮುದ್ರಮಥನದಿ ಪಡೆದ ಸಮುದ್ರರಾಜನ (ವರುಣನ) 
ನಂದನೆಯಳನು - ಪುತ್ರಿ ಲಕ್ಷ್ಮೀ ದೇವಿಯ 
ಒಲವಿಂದದಿ - ಒಲವಿನಿಂದ
ಧರಿಸಿದ ಮುಕುಂದನಿಗೆ - ವಿವಾಹವಾದ ಮುಕುಂದ ಶ್ರೀಹರಿಗೆ ಮಂಗಲಂ|

ಇಲ್ಲಿ ನೇರವಾಗಿ ಮುಕುಂದನಿಗೆ ಮಂಗಳವೆನ್ನಬಹುದಿತ್ತು.   ಆದರೆ ಇಲ್ಲಿ ಮಾರ್ಕಂಡೇಯನ ಚಿರಂಜೀವಿತ್ವ ನೀಡಲು ಶಿವನ ಕಾರ್ಯ, ಸಮುದ್ರಮಥನದಿ ಜನಿಸಿದ ಲಕ್ಷ್ಮೀದೇವಿಯ ಸ್ತುತಿ, ವಿವರಿಸಿ ಮುಕುಂದನಿಗೆ ಮಂಗಳವೆಂದಿದ್ದಾರೆ.

ರಥವನಡರಿ ಸುರಪಥದಲಿ ತಿರುಗುವ ಸುತನಿಗೆ ಶಾಪವನಿತ್ತವನ
ಖತಿಯನ್ನು ತಡೆದನ ಸತಿಯ ಜನನಿ ಸುತ ಸತಿಯರನಾಳಿದ ಚತುರನಿಗೆ | ೨ |

ರಥವನಡರಿ ಸುರಪಥದಿ ತಿರುಗುವ - ಸುರಮಾರ್ಗದಿ ಮೇರುಪರ್ವತವ ಸುತ್ತುವ ಸೂರ್ಯನ 
ಸುತನಿಗೆ - ಕರ್ಣನಿಗೆ 
ಶಾಪವನಿತ್ತವನ - ಪರಶುರಾಮನ 
ಖತಿಯನು ತಡೆದನ - ದರ್ಪವನ್ನು ತಡೆದ (ಲೋಕದೃಷ್ಟಿಯಿಂದ ದರ್ಪ ತೋರಿದ ಪರಶುರಾಮ) ರಾಮನ 
ಸತಿಯ - ಸೀತಾದೇವಿಯ 
ಜನನಿ - ಭೂಮಾತೆಯ 
ಸುತ - ನರಕಾಸುರನ 
ಸತಿಯರನಾಳಿದ ಚತುರನಿಗೆ - ಬಳಿಯಿರಿಸಿಕೊಂಡಿದ್ದ  ೧೬೧೦೦ ನಾರಿಯರ ವಿವಾಹವಾದ ಶ್ರೀಕೃಷ್ಣನಿಗೆ |
ಮಂಗಲಂ

ಇಲ್ಲಿ ಪರಶುರಾಮಾವತಾರ, ಕರ್ಣನಿಗೆ ಶಾಪ, ರಾಮಾವತಾರ, ಸೀತಾವತಾರ, ಕೃಷ್ಣನ ೧೬೧೦೦ ಕಲ್ಯಾಣ ಇಷ್ಟೂ ಕಥೆಯನ್ನು ಕೆಲವೇ ಪದಗಳ ಜೋಡಣೆಯಿಂದ ತಿಳಿಸಿದ್ದಾರೆ.

ಹರಿಯ ಮಗನ ಶಿರ ಹರಿದನ ತಂದೆಯ
ಹಿರಿಯ ಮಗನ ತಮ್ಮನ ಪಿತನ
ಭರದಿ ಭಕ್ಷಿಸುವನ ಶಿರದಲಿ ನಟಿಸಿದ
ವರಕಾಗಿನೆಲೆಯಾದಿ ಕೇಶವರಾಯಗೆ
ಮಂಗಲಂ ಜಯ ಮಂಗಲಂ

ವಿವರಣೆ 
ಹರಿಯ ಮಗನ -  ಹರಿಯ - ಸೂರ್ಯನ  ಮಗನ - ಕರ್ಣನ
ಶಿರ ತರಿದವನ -  ಶಿರವನ್ನು ಬೀಳಿಸಿದ  ಅರ್ಜುನನ
ತಂದೆಯ - ಪಾಂಡುವಿನ
ಹಿರಿಯ ಮಗನ - ಧರ್ಮರಾಜನ
ತಮ್ಮನ - ಭೀಮಸೇನದೇವರ
*ಪಿತನ * - ಪಿತ ವಾಯುದೇವರು ನಿಯಾಮಕರಾಗಿರುವ ಗಾಳಿಯನ್ನು 
ಭರದಿ ಭುಂಜಿಸುವನ -  ವಾಯು ಭಕ್ಷಕನಾದ ಸರ್ಪದ ಅರ್ಥಾತ್ ಕಾಲೀಯನ
ಶಿರದಲ್ಲಿ ನಟಿಸಿದ - ಶಿರದಲ್ಲಿ ಅದ್ಭುತ ನಾಟ್ಯವನ್ನು  (ಕಾಳಿಂಗಮರ್ದನ) ಮಾಡಿದ
ವರಕಾಗಿನೆಲೆಯಾದಿ ಕೇಶವರಾಯಗೆ
- ಕನಕದಾಸರ ಆರಾಧ್ಯದೇವ  ಆದಿದೇವನಿಗೆ 
ಮಂಗಲಂ ಜಯ ಮಂಗಲಂ
ಲೇಖನ - ನರಹರಿ ಸುಮಧ್ವ
ಆಧಾರ - ಶ್ರೀ ಚತುರ್ದಶಿ ವೇದವ್ಯಾಸಾಚಾರ್ಯರ ಅರ್ಥ ಚಿಂತನೆ
-narahari sumadhwa
***


ಶ್ರೀ ಕನಕದಾಸಾರ್ಯರ ಜಯಂತಿ ನಿಮಿತ್ತ ಮುಂಡಿಗೆಯನ್ನು ತಿಳಿಯುವ
ಅತ್ಯಲ್ಪ ಪ್ರಯತ್ನ ಸೇವಾರೂಪದಲ್ಲಿ 

ಮಂಗಲಂ ಜಯ ಮಂಗಲಂ

ಅಂಧಕನನುಜನ ಕಂದನ ತಂದೆಯ
ಕೊಂದನ ಶಿರದಲಿ ನಿಂದವನ
ಚೆಂದದಿ ಪಡೆದನ ನಂದನೆಯಳನೊಲವಿಂದದಿ
ಧರಿಸಿದ ಮುಕುಂದನಿಗೆ

ವಿವರಣೆ 
ಅಂಧಕನ / ಧ್ರುತರಾಷ್ಟ್ರನ
ಅನುಜನ / ಪಾಂಡುರಾಜನ
ಕಂದನ / ಯುಧಿಷ್ಠಿರನ
ತಂದೆಯ / ಯಮಧರ್ಮರಾಯನನ್ನು
ಕೊಂದನ / ಮಾರ್ಕಾಂಡೇಯನಿಗಾಗಿ ಎಳೆಯಲು ಬಂದ ಯಮನನ್ನು ತ್ರಿಶೂಲದಿಂದ ತಿವಿಯಲು ಹೋದ ರುದ್ರದೇವರ
ಶಿರದಲಿ ನಿಂದವನ / ಶಿರದಲ್ಲಿರುವ ಚಂದ್ರನ
ಚೆಂದದಿ ಪಡೆದನ / ಸಮುದ್ರಮಥನ ಕಾಲದಲ್ಲಿ ಪಡೆದ ಸಮುದ್ರನ( ವರುಣ)
ನಂದನೆಯಳ / ಪುತ್ರಿಯಾದ ಶ್ರೀ ಮಹಾಲಕ್ಷ್ಮೀದೇವಿಯನ್ನು
ಧರಿಸಿದ / ವಕ್ಷಸ್ಥಳದಲ್ಲಿ ಧರಿಸಿರುವ ಶ್ರೀಮುಕುಂದಗೆ ಮಂಗಲಂ|

ರಥವನಡರಿ ಸುರಪಥದಲಿ ತಿರುಗುವ
ಸುತನಿಗೆ ಶಾಪವನಿತ್ತವನ
ಖತಿಯನು ತಡೆದನ ಸತಿಯ ಜನನಿ ಸುತ
ಸತಿಯರನಾಳಿದ ಚತುರನಿಗೆ

ವಿವರಣೆ -
ರಥವನಡರಿ ಸುರಪಥದಿ‌ ತಿರುಗುವ/ ಮೇರುಪರ್ವತವನ್ನು  ಸುತ್ತುವ ಸೂರ್ಯನ
ಸುತನಿಗೆ / ಕರ್ಣನಿಗೆ
ಶಾಪವಿತ್ತವನ / ಪರಶುರಾಮದೇವರ
ಖತಿಯನು ತಡೆದವನ/ ಮಂದದೃಷ್ಟಿಯಿಂದ ದರ್ಪವನ್ನು ಹೋಗಲಾಡಿಸಿದ ಶ್ರೀ ರಾಮಚಂದ್ರದೇವರ
ಸತಿಯ / ಸೀತಾದೇವಿಯ 
ಜನನಿ/ ಭೂಮಿಯ
ಸುತ / ನರಕಾಸುರನ
ಸತಿಯರನಾಳಿದ / ನರಕಾಸುರನು ಬಂಧಿಸಿಟ್ಟಿದ್ದ
೧೬,೧೦೦ ಜನ ರಾಜಕುಮಾರಿಯರನ್ನು ವಿವಾಹವಾದ
ಶ್ರೀ ಕೃಷ್ಣನಿಗೆ ಮಂಗಲಂ

ಹರಿಯ ಮಗನ ಶಿರ ತರಿದವನ ತಂದೆಯ
ಹಿರಿಯ ಮಗನ ತಮ್ಮನ ಪಿತನ
ಭರದಿ ಭಕ್ಷಿಸುವನ ಶಿರದಲಿ ನಟಿಸಿದ
ವರಕಾಗಿ ನೆಲೆಯಾದಿ ಕೇಶವರಾಯಗೆ
ಮಂಗಲಂ ಜಯ ಮಂಗಲಂ

ವಿವರಣೆ... 
ಹರಿಯ ಮಗನ /  ಇಲ್ಲಿ ಹರಿ ಅಂದ್ರೆ  ಸೂರ್ಯ ಎಂಬರ್ಥದಲ್ಲಿ ಸೂರ್ಯನ ಮಗನಾದ ಕರ್ಣನ
ಶಿರ ತರಿದವನ / ಶಿರವನ್ನು ಅಂಜಲೀಕಾಸ್ತ್ರದಿಂದ ತರಿದಂಥ ಅರ್ಜುನನ
ತಂದೆಯ / ಪಾಂಡುರಾಜನ
ಹಿರಿಯ ಮಗನ/ ಧರ್ಮರಾಜನ
ತಮ್ಮನ / ಭೀಮಸೇನದೇವರ
ಪಿತನ / ತಂದೆಯಾದ ವಾಯುದೇವರು ಅರ್ಥಾತ್ ವಾಯುವನ್ನು
ಭರದಿ ಭುಂಜಿಸುವನ/ ವಾಯು ಭಕ್ಷಕನಾದ ಕಾಲಿಯ ಸರ್ಪದ
ಶಿರದಲ್ಲಿ ನಟಿಸಿದ /  ಶಿರದಲ್ಲಿ ಅದ್ಭುತ ನಾಟ್ಯವನ್ನು ಮಾಡಿದ 
ವರಕಾಗಿನೆಲೆಯಾದಿ ಕೇಶವಾಭಿನ್ನ ಶ್ರೀಕೃಷ್ಣನಿಗೆ
ಮಂಗಲಂ ಜಯ ಮಂಗಲಂ

🙏🙇‍♀️ ಜೈ ಜೈ ಕೃಷ್ಣ ಹರೇ-

 ‌(received in WhatsApp)

*****

No comments:

Post a Comment