Friday 27 December 2019

ಶರಣರ ಶರಣ್ಯ ನಾರಾಯಣ ವರ್ಮಾ ankita uragadrivasa vittala SHARANARA SHARANYA NARAYANA VARMA

Audio by Mrs. Nandini Sripad

ಶ್ರೀ ಉರಗಾದ್ರಿವಾಸವಿಠಲದಾಸಾರ್ಯ ವಿರಚಿತ

ಶ್ರೀನಾರಾಯಣವರ್ಮ

 ರಾಗ ಸಾವೇರಿ             ರೂಪಕತಾಳ 

ಶರಣರ ಶರಣ್ಯ ನಾರಾಯಣ ॥ ಪ ॥
ಭಕುತರ ಸಂರಕ್ಷಣ ನಾರಾಯಣ ॥ ಅ ಪ ॥

ಖಗಪನ ಸ್ಕಂದರೋಹ ಅಘದೂರ ಅಭಯಹಸ್ತ ।
ಸ್ವಗತ ಭೇದ ಶೂನ್ಯ ಸರ್ವಾವಸ್ಥೆಯೊಳೆನ್ನ ॥
ವಿಗತ ಕ್ಲೇಶನ ಮಾಡಿ ಸತತ ಕಾಪಾಡಲಿ ।
ನಿಗಮವಿನುತ ಜಗದಾದಿ ವಂದ್ಯನೆ ದೇವಾ ॥ 1 ॥

ವರುಣಪಾಶಂಗಳಂ ಜಲಚರ ಜಂತುಗಳು ಮತ್ಸ್ಯ।
ಮೂರುತಿ ತಾ ರಕ್ಷಕನಾಗಿರಲಿ ॥
ಧಾರುಣಿ ನೆಲದೊಳು ಶ್ರೀವಾಮನ ಕಾಯಲಿ ।
ಸರ್ವಾಕಾಶದೊಳು ತ್ರಿವಿಕ್ರಮ ಕಾಯಲಿ ॥ 2 ॥

ದುರ್ಗರಣಾಗ್ರವನ ಅರಿವರ್ಗಗಳಲಿ ।
ನರಹರಿದೇವ ಸಂರಕ್ಷಕನಾಗಿರಲಿ ॥
ಮಾರ್ಗಗಳಲ್ಲಿ ಹಿರಣ್ಯಾಕ್ಷ ವೈರಿಯು ಕಾಯಲಿ ।
ದುರ್ಗಮ ಶೈಲದೊಳು ಶ್ರೀಭಾರ್ಗವ ರಕ್ಷಿಸಲಿ ॥ 3 ॥

ದಾಶರಥಿ ಪ್ರವಾಸದಲಿ ನಿತ್ಯ ।
ದೇಶಾಂತರಗಳಲ್ಲಿದ್ದರು ಕಾಯಲಿ ।
ಈಶ ಶ್ರೀಮನ್ನಾರಾಯಣ ಎನ್ನ ॥
ಕ್ರೂರ ಕರ್ಮಗಳಿಂದ ರಕ್ಷಿಸಲನುದಿನ ।
ನರಾವತಾರ ಎನ್ನ ಗುರುವಿನಿಂ ರಕ್ಷಿಸಲಿ ॥ 4 ॥

ವಿರೋಧಿ ವರ್ಗದಿ ದತ್ತಾತ್ರೇಯ ಕಾಯಲಿ ।
ಸರ್ವ ಕರ್ಮ ಬಂಧ ಜ್ಞಾನದಿಂದ ಕಪಿಲಾ ॥
ಮೂರ್ತಿ ರಕ್ಷಿಸಲಿ ಅನುದಿನದಲಿ ಎನ್ನ ಸನತ್ಕು- ।
ಮಾರನು ಎನ್ನ ಕಾಯಲಿ ಕಾಮದಲ್ಲಿ ॥ 5 ॥

ದಾನವ ಮಧುಕೈಟಭ ಹರಿ ಹಯವದನ ।
ಘನ್ನಪರಾಧದಿ ರಕ್ಷಕನಾಗಿರಲಿ ॥
ಮನ್ನಿಸಿ ದೇವತೆಗಳು ಸಾಧನವೀಯಲಿ ।
ಸನ್ನುತಾಂಗ ಧನ್ವಂತ್ರಿಮೂರುತಿ ಹರಿ ।
ಎನ್ನ ರಕ್ಷಕನಾಗಿರಲಿ ರುಜೆಯೊಳು ॥ 6 ॥

ಜ್ಞಾನರೂಪಿ ಋಷಭ ಸೀತಾತಪದಿಂದ ಎ - ।
ನ್ನನುದಿನ ಈ ದ್ವಂದ್ವದಿ ಕಾಯಲಿ ॥
ಯಜ್ಞಮೂರುತಿ ಲೋಕಾಪವಾದದಿ ಕಾಯಲಿ ।
ಸುಜ್ಞ ಬಲರಾಮನು ದುರ್ಜನರ ಭಯದಿಂ ।
ಅಜ್ಞಾನಿ ಎಂದೆನ್ನ ಅನುದಿನ ರಕ್ಷಿಸಲಿ ॥ 7 ॥

ಘನ್ನಮಹಿಮ ಶೇಷ ಸರ್ಪಬಾಧೆಗಳಿಂದ ।
ಜ್ಞಾನಧಾತೃ ಹರಿ ಸೇವೆಗೆ ಬರುತಿಹ ॥
ನಾನಾ ವಿಘ್ನಗಳಿಂದ ರಕ್ಷಿಸುತಿರಲಿ ।
ಘನ್ನ ಮಹಾನರಕ ಬಾಧೆಯಿಂ ತಪ್ಪಿಸಲಿ ।
ಕೂರ್ಮ ಮೂರುತಿ ಕಾಪಾಡಲಿ ನಿತ್ಯ ॥ 8 ॥

ವೇದವ್ಯಾಸರು ಶುಧ್ಧ ಜ್ಞಾನವನೀಯಲಿ ।
ಬುದ್ಧಿಮೋಹದಿಂದ ಬುದ್ಧನುದ್ಧರಿಸಲಿ ॥
ಹೃದಯದ ಕಲಬಾಧೆ ಕಲ್ಕಿ ತಾ ಹರಿಸಲಿ ॥ 9 ॥

ಉದಯಕಾಲದಿ ಶ್ರೀಕೇಶವ ರಕ್ಷಿಸಲಿ ವೇಣು ।
ಹಸ್ತ ಗೋವಿಂದ ಸಂಗಮದಲ್ಲಿ ॥
ಪೂರ್ಣಕರುಣೆಯಿಂದ ಎನ್ನ ಕಾಪಾಡಲಿ ।
ಪೂರ್ವಾಹ್ನದಲಿ ನಾರಾಯಣ ರಕ್ಷಿಸಲಿ ॥ 10 ॥

ವಿಷ್ಣುಮೂರುತಿ ಮಧ್ಯಾಹ್ನದಿ ಕಾಯಲಿ ।
ಮಾಧವ ಅಪರಾಹ್ನದಲೆನ್ನ ರಕ್ಷಿಸಲಿ ॥
ಮಧುಸೂದನ ಸಾಯಂಕಾಲದಿ ರಕ್ಷಿಸಲಿ ॥ 11 ॥

ಪ್ರದೋಷದಲಿ ಹೃಷೀಕೇಶ ರಕ್ಷಿಸಲೆನ್ನ ।
ಪದುಮನಾಭಿ ಅರ್ಧರಾತ್ರಿಯೊಳು ಸಲಹಲಿ ॥
ಶ್ರೀಧರನೆನ್ನ ಅಪರಾತ್ರಿಯೊಳು ಸಲಹಲಿ ॥ 12 ॥

ಜನಾರ್ದನನು ಎನ್ನನು ಉಷಃಕಾಲದಲಿ ।
ಸಂಧ್ಯಾಕಾಲದಿ ದಾಮೋದರ ರಕ್ಷಿಸಲಿ ॥
ಕಾಲನಾಮಕ ಬೆಳಗಿನ ಝಾವದಿ ಕಾಯಲಿ ॥ 13 ॥

ನಕ್ರನ ಹರಿಸಿದ ಚಕ್ರಾಯುಧವು ಎನ್ನ ।
ಶತ್ರುಬಾಧೆಗಳಿಂದ ರಕ್ಷಿಸುತಲಿರಲಿ ॥
ವಿಕ್ರಮ ಗದೆಯು ಆಶ್ರಿತರುಪದ್ರ - ।
ದುರಾಗ್ರಹ ನಿಗ್ರಹ ಮಾಡಲಿ ಅನುದಿನ ॥ 14 ॥

ಪ್ರಮಥ ಭೂತ ಪಿಶಾಚ ಪ್ರೇತ ಭಯದಿ ।
ಪಾಂಚಜನ್ಯ ಶಂಖರಾಜ ರಕ್ಷಿಸಲಿ ॥
ದುಮ್ಮನ ಶತ್ರುಬಾಧೆಗಳಿಂದ ಖಡ್ಗವು ।
ಖೇಟವು ಸರ್ವ ಅನಿಷ್ಟದಿಂ ರಕ್ಷಿಸಲಿ ॥ 15 ॥

ಅವನ ನಾಮರೂಪ ದಿವ್ಯಾಯುಧದ ಸ್ಮರಣೆ ।
ಸರ್ವ ಬಂಧಗಳೆಲ್ಲ ತಕ್ಷಣದಲ್ಲಿ ॥
ನಿವಾರಣೆಯಾಗಿ ನಿವೃತ್ತಿ ಮಾರ್ಗಕ್ಕೆ ಶುಧ್ಧ ।
ಭಾವ ಭಕುತಿಗೆ ಕಾರಣವು ಸತ್ಯ ।
ಗರುಡ ವಿಷ್ವಕ್ಸೇನ ಕಷ್ಟದಿಂದ ರಕ್ಷಿಸಲಿ ॥ 16 ॥

ಹರಿಯ ವಾಹನಾದಿಗಳು ವಿಪತ್ತುಗಳ ಹರಿಸಲಿ ।
ಸರ್ವರಂತರ್ಯಾಮಿ ನಿನ್ನ ನಂಬಿರಲು ॥
ಸರ್ವಬಾಧೆಗಳಲ್ಲಿ ಪರಿಹಾರವಾಗಲಿ ॥ 17 ॥

ಸರ್ವದೇಶ ಕಾಲ ಸರ್ವಾವಸ್ಥೆಯೊಳೆನ್ನ ।
ಸರ್ವೋತ್ತಮ ದೇವ ಸರ್ವದಾ ರಕ್ಷಿಸಲಿ ॥
ಸರ್ವರೊಡೆಯ ಶ್ರೀಮನ್ನಾರಾಯಣ ನಿನ್ನ ।
ಕರುಣ ಕವಚವೂ ಎನಗಿರಲನುದಿನ ॥ 18 ॥

ಬಹಿರಾಂತರದಿ ಮೇಲೆ ಕೆಳಗು ।
ಮಧ್ಯದಲ್ಲಿ ದಿಕ್ಕುವಿದಿಕ್ಕಿನೊಳು ॥
ನಿರುತ ರಕ್ಷಕ ನರಹರಿಯೆ ।
ನೀ ಪೊರೆ ಶ್ರೀವೇಂಕಟೇಶಾಭಿನ್ನ ।
ಉರಗಾದ್ರಿವಾಸವಿಠ್ಠಲ ಸ್ವಾಮಿ ॥ 19 ॥
************


ಶ್ರೀ ಉರಗಾದ್ರಿವಿಠಲ ದಾಸರ ವಿರಚಿತ
{ಶ್ರೀ. ಎಂ. ಶ್ರೀನಿವಾಸ ರಾವ್}
ಶ್ರೀ ನಾರಾಯಣವರ್ಮ  ರಾಗ ಸಾವೇರಿ 

ಶರಣರ ಶರಣ್ಯ ನಾರಾಯಣ| 
ಭಕುತರ ಸಂರಕ್ಷಣಾ ನಾರಾಯಣ || ಪ. ||

ಖಗಪನ ಸ್ಕಂದರೋಹ ಅಘದೂರ ಅಭಯಹಸ್ತ
ಸ್ವಗತ ಭೇದ ಶೂನ್ಯ ಸರ್ವಾವಸ್ಥೆಯೊಳೆನ್ನ
ವಿಗತ ಕ್ಲೇಶನ ಮಾಡಿ ಸತತ ಕಾಪಾಡಲಿ
ನಿಗಮವಿನುತ ಜಗದಾದಿ ವಂದ್ಯನೆ ದೇವಾ || 1 ||

ವರುಣಪಾಶಂಗಳಂ ಜಲಚರ ಜಂತುಗಳು | ಮತ್ಸ್ಯ
ಮೂರುತಿ ತಾ ರಕ್ಷಕನಾಗಿರಲಿ
ಧಾರುಣಿ ನೆಲದೊಳು ಶ್ರೀ ವಾಮನ ಕಾಯಲಿ
ಸರ್ವಾಕಾಶದೊಳು ತ್ರಿವಿಕ್ರಮ ಕಾಯಲಿ || 2 ||

ದುರ್ಗರಣಾಗ್ರವನ ಅರಿವರ್ಗಗಳಲಿ
ನರಹರಿದೇವ ಸಂರಕ್ಷಕನಾಗಿರಲಿ
ಮಾರ್ಗಗಳಲ್ಲಿ ಹಿರಣ್ಯಾಕ್ಷ ವೈರಿಯು ಕಾಯಲಿ
ದುರ್ಗಮ ಶೈಲದೊಳು ಶ್ರೀ ಭಾರ್ಗವ ರಕ್ಷಿಸಲಿ || 3 ||

ದಾಶರಥಿ ಪ್ರವಾಸದಲಿ ನಿತ್ಯ
ದೇಶಾಂತರಗಳಲ್ಲಿದ್ದರು ಕಾಯಲಿ
ಈಶ ಶ್ರೀಮನ್ನಾರಾಯಣ ಎನ್ನ
ಕ್ರೂರ ಕರ್ಮಗಳಿಂದ ರಕ್ಷಿಸಲನುದಿನ
ನರಾವತಾರ ಎನ್ನ ಗರುವಿನಿಂ ರಕ್ಷಿಸಲಿ || 4 ||

ವಿರೋಧಿ ವರ್ಗದಿ ದತ್ತಾತ್ರೇಯ ಕಾಯಲಿ
ಸರ್ವ ಕರ್ಮ ಬಂಧ ಜ್ಞಾನದಿಂದ ಕಪಿಲಾ
ಮೂರ್ತಿ ರಕ್ಷಿಸಲಿ ಅನುದಿನದಲಿ ಎನ್ನ ಸನತ್ಕು-
ಮಾರನು ಎನ್ನ ಕಾಯಲಿ ಕಾಮದಲ್ಲಿ || 5 ||

ದಾನವ ಮಧುಕೈಟಭ ಹರಿ ಹಯವದನ
ಘನ್ನಪರಾಧದಿ ರಕ್ಷಕನಾಗಿರಲಿ
ಮನ್ನಿಸಿ ದೇವತೆಗಳು ಸಾಧನವೀಯಲಿ
ಸನ್ನುತಾಂಗ ಧನ್ವಂತ್ರಿಮೂರುತಿ ಹರಿ
ಎನ್ನ ರಕ್ಷಕನಾಗಿರಲಿ ರುಜೆಯೊಳು || 6 ||

ಜ್ಞಾನರೂಪಿ ಋಷಭ ಸೀತಾತಪದಿಂದ ಎ-
ನ್ನನುದಿನ ಈ ದ್ವಂದ್ವದಿ ಕಾಯಲಿ
ಯಜ್ಞಮೂರುತಿ ಲೋಕಾಪವಾದದಿ ಕಾಯಲಿ
ಸುಜ್ಞ ಬಲರಾಮನು ದುರ್ಜನರ ಭಯದಿಂ
ಅಜ್ಞಾನಿಯೆಂದೆನ್ನ ಅನುದಿನ ರಕ್ಷಿಸಲಿ || 7 ||

ಘನ್ನಮಹಿಮ ಶೇಷ ಸರ್ಪಬಾಧೆಗಳಿಂದ
ಜ್ಞಾನದಾತೃ ಹರಿಸೇವೆಗೆ ಬರುತಿಹ 
ನಾನಾ ವಿಘ್ನಗಳಿಂದ ರಕ್ಷಿಸುತಿರಲಿ 
ಘನ್ನ ಮಹಾ ನರಕ ಬಾಧೆಯಿಂ ತಪ್ಪಿಸಲಿ 
ಕೂರ್ಮ ಮೂರುತಿ ಕಾಪಾಡಲಿ ನಿತ್ಯ || 8 ||

ವೇದವ್ಯಾಸರು ಶುಧ್ಧ ಜ್ಞಾನವನೀಯಲಿ
ಬುದ್ಧಿಮೋಹದಿಂದ ಬುದ್ಧನುದ್ಧರಿಸಲಿ
ಹೃದಯದ ಕಲಬಾಧೆ ಕಲ್ಕಿ ತಾ ಹರಿಸಲಿ || 9 ||

ಉದಯಕಾಲದಿ ಶ್ರೀಕೇಶವ ರಕ್ಷಿಸಲಿ | ವೇಣು
ಹಸ್ತ ಗೋವಿಂದ ಸಂಗಮದಲ್ಲಿ | 
ಪೂರ್ಣ ಕರುಣೆಯಿಂದ ಎನ್ನ ಕಾಪಾಡಲಿ 
ಪೂರ್ವಾಹ್ನದಲಿ ನಾರಾಯಣ ರಕ್ಷಿಸಲಿ || 10 ||

ವಿಷ್ಣುಮೂರುತಿ ಮಧ್ಯಾಹ್ನದಿ ಕಾಯಲಿ 
ಮಾಧವ ಅಪರಾಹ್ನದಲೆನ್ನ ರಕ್ಷಿಸಲಿ 
ಬಾಧೆಯಿಂ ಸಾಯಂಕಾಲದಿ ರಕ್ಷಿಸಲಿ || 11 ||

ಪ್ರದೋಷದಲಿ ಹೃಷೀಕೇಶ ರಕ್ಷಿಸಲೆನ್ನ
ಪದುಮನಾಭಿ ಅರ್ಧರಾತ್ರಿಯೊಳು ಸಲಹಲಿ
ಶ್ರೀಧರನೆನ್ನ ಅಪರಾತ್ರಿಯೊಳು ಸಲಹಲಿ || 12 ||

ಜನಾರ್ಧನನು ಎನ್ನನು ಉಷಃಕಾಲದಲಿ
ಸಂಧ್ಯಾಕಾಲದಿ ದಾಮೋದರ ರಕ್ಷಿಸಲಿ
ಕಾಲನಾಮಕ ಬೆಳಗಿನ ಝಾವದಿ ಕಾಯಲಿ || 13 ||

ನಕ್ರನ ಹರಿಸಿದ ಚಕ್ರಾಯುಧವು ಎನ್ನ
ಶತ್ರುಬಾಧೆಗಳಿಂದ ರಕ್ಷಿಸುತಿರಲಿ
ವಿಕ್ರಮ ಗದೆಯು ಆಶ್ರಿತರುಪದ್ರ -
ದುರಾಗ್ರಹ ನಿಗ್ರಹ ಮಾಡಲಿ ಅನುದಿನ || 14 ||

ಪ್ರಮಥ ಭೂತ ಪಿಶಾಚ ಪ್ರೇತ ಭಯದಿ
ಪಾಂಚಜನ್ಯ ಶಂಖರಾಜ ರಕ್ಷಿಸಲಿ
ದುಮ್ಮನ ಶತ್ರು ಬಾಧೆಗಳಿಂದ ಖಡ್ಗವು
ಖೇಟವು ಸರ್ವ ಅನಿಷ್ಟದಿಂ ರಕ್ಷಿಸಲಿ || 15 ||

ಅವನ ನಾಮರೂಪ ದಿವ್ಯಾಯುಧದ ಸ್ಮರಣೆ
ಸರ್ವ ಬಂಧಗಳೆಲ್ಲ ತಕ್ಷಣದಲ್ಲಿ 
ನಿವಾರಣೆಯಾಗಿ ನಿವೃತ್ತಿ ಮಾರ್ಗಕ್ಕೆ ಶುಧ್ಧ 
ಭಾವ ಭಕುತಿಗೆ ಕಾರಣವು ಸತ್ಯ
ಗರುಡ ವಿಷ್ಟಕ್ಸೇನ ಕಷ್ಟದಿಂದ ರಕ್ಷಿಸಲಿ || 16 ||

ಹರಿಯ ವಾಹನಾದಿಗಳು ವಿಪತ್ತುಗಳ ಹರಿಸಲಿ
ಸರ್ವರಂತರ್ಯಾಮಿ ನಿನ್ನ ನಂಬಿರಲು
ಸರ್ವ ಬಾಧೆಗಳಲ್ಲಿ ಪರಿಹಾರವಾಗಲಿ || 17 ||

ಸರ್ವದೇಶ ಕಾಲ ಸರ್ವಾವಸ್ಥೆಯೊಳೆನ್ನ
ಸರ್ವೋತ್ತಮ ದೇವ ಸರ್ವದಾ ರಕ್ಷಿಸಲಿ
ಸರ್ವರೊಡೆಯ ಶ್ರೀಮನ್ನಾರಾಯಣ ನಿನ್ನ
ಕರುಣ ಕವಚವು ಎನಗಿರಲನುದಿನ || 18 ||

ಬಹಿರಾಂತರದಿ ಮೇಲೆ ಕೆಳಗು 
ಮಧ್ಯದಲ್ಲಿ ದಿಕ್ಕುವಿದಿಕ್ಕಿನೊಳು
ನಿರುತ ರಕ್ಷಕ ನರಹರಿಯೆ 
ನೀ ಪೊರೆ ಶ್ರೀ ವೇಂಕಟೇಶಾಭಿನ್ನ 
ಉರಗಾದ್ರಿವಾಸವಿಠಲ ಸ್ವಾಮಿ || 19 ||
********

No comments:

Post a Comment