Thursday 26 December 2019

ಸ್ಮರಿಸಿ ಬದುಕಿರೋ ಸರ್ವ ankita bheemesha krishna SMARISI BADUKIRO SARVA GURUVIJAYA VITTALAANKITA SHESHADASA STUTIH


ಶೇಷದಾಸರ ಮೇಲಿನ ಹಾಡು
ರಚನೆ.ಹರಪನಹಳ್ಳಿ ಭೀಮವ್ವನವರು.

ಸ್ಮರಿಸಿ ಬದುಕಿರೋ ಸರ್ವನಂದಗುರುಗಳ
ನಿರುತದಿಂದೆ ಇಷ್ಟಫಲವ ನೀಡೊವರಗಳಾ ಬೇಡಿ||ಪಲ್ಲ||

ಆದಿಕಲ್ಲಿನಲ್ಲೆ ಮಹಾದೇವ ಕರಿಯೆ ಬಂದು ನಿಂತು
ಶ್ರೀ ದೇವಿರಮಣನ್ನಮುದ್ದು
ಪಾದಾಂಬುಜವ ಪೂಜಿಸುವರು,||೧/

ಉತ್ತಮವಾಗಿದ್ದ ದಿವ್ಯ ಛತ್ರವಿಜಯತೀರ್ಥನಿರ್ಮಿಸಿ
ನಿತ್ಯದಲ್ಲಿ ಮೃಷ್ಟಾನ್ನ ದಾನವಿಸ್ತಾರವನೆ ಪೇಳಲೊಶವೆ||೨|

ಕುಷ್ಠರೋಗ ವ್ಯಾಧಿ ಜ್ವರ ಚತುರ್ಥಿಭಯ ಭೀತಿಗಳನ್ನೆಲ್ಲ
ಬಿಟ್ಟೋಡಿಸಿ ತೀರ್ಥಂಗಾರದಲಿ
ಸಮಸ್ತರ ಮಹಿಮೆಯ ನೋಡಿ||೩||

ಸಂತಾನ ಸಾಯುತದ ಫಲವ
ನಿಂತು ಕೊಡುತಮಂತ್ರಾಕ್ಷತೆಯ
ಗ್ರಂಥಪದ ಸುಳಾದಿಯಲಕ್ಷ್ಮೀಕಾಂತಗೆಮಾಡರ್ಪಿಸುವರ||೪||

ಹರಿಯ  ದಿವ್ಯಾಹಾಸಿಕೆಯ ನಾಮ ಗುರುವಿಜಯರಾಯರ‌ಪ್ರೇಮ
ಪಡೆದು ಭೀಮೇಶಕೃಷ್ಣನಂಘ್ರಿ
ಬಿಡದೆ ಭಜನೆ ಮಾಡುವವರ||೫||
************




No comments:

Post a Comment