Monday 6 September 2021

ಶ್ರೀಶ ಮುಖ್ಯಪ್ರಾಣಪತಿ ಪದ ದ್ವಂದ್ವ ಪದ್ಮಾರಾಧಕ ankita tirumaleshahari vittala

 ankita ತಿರುಮಲೇಶಹರಿವಿಠಲ 


ಶ್ರೀಶ ಮುಖ್ಯಪ್ರಾಣಪತಿ ಪದ ದ್ವಂದ್ವ ಪದ್ಮಾರಾಧಕ

ದೋಷವೆಣಿಸದೆ ವಾಸುದೇವನ ದಾಸವೃಂದದ ಪೋಷಕ

ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ

ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ  1

ಹೀನ ಮಾನವ ನಾನು ನಿಮ್ಮಯ ಧ್ಯಾನ ಮಾಡದೆ ಬಳಲಿದೆ

ನಾನು ನನ್ನದು ಎಂಬ ವರ್ತುಲದಲ್ಲಿ ಸುತ್ತುತ ತೊಳಲಿದೆ

ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ

ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ  2

ಸ್ನಾನ ಸಂಧ್ಯಾ ಜಪವ ತೊರೆದು ನಿಂದ್ಯ ಕರ್ಮವ ಮಾಡಿದೆ

ಮಾನವಂತರ ಮನವ ನೋಯಿಸಿ ಮಂದ ಜನರನು ಕೂಡಿದೆ

ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ

ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ  3

ಘನವನರಿಯದೆ ಪರರ ಮಾನಿನಿ ಸಂಗ ಸುಖವನು ಬಯಸಿದೆ

ತನುವ ಭರಿಸಲು ಎಂಜಲೆನ್ನದೆ ಶ್ವಾನನಂದದಿ ಚರಿಸಿದೆ

ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ

ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ  4

ಮಧ್ವಶಾಸ್ತ್ರದ ಶುದ್ಧ ಜ್ಞಾನದ ಗಂಧ ಗಾಳಿಯನರಿಯದೆ

ಬದ್ಧ ಜನರನು ದೇವರೆನ್ನುತ ಅಪದ್ಧ ವಾದವ ಮಾಡಿದೆ

ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ

ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ  5

ವೇದಶಾಸ್ತ್ರವ ತುಚ್ಛೀಕರಿಸುತ ಶ್ರೀಶನಾಜ್ಞೆಯ ಮೀರಿದೆ

ವೇದವೇದ್ಯನ ದಿನದಿ ಬಯಸುತ ಉದರ ಪೋಷಣೆ ಮಾಡಿದೆ

ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ

ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ  6

ಹರಿಯ ಚರಿತೆಯು ಕಿವಿಗೆ ಬೀಳಲು ಬಧಿರನಂತೆ ನಟಿಸಿದೆ

ಹರಿಯ ದಾಸರು ಬಂದು ಕರೆಯಲು ಕುಂಟು ನೆಪವನು ಪೇಳಿದೆ

ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ

ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ  7

ಶರಣಜನ ಸಂರಕ್ಷಕ ನಿಮ್ಮ ಚರಣ ಪಿಡಿದಿಹೆ ರಕ್ಷಿಸಿ

ತಿರುಮಲೇಶಹರಿವಿಠಲರಾಯನ ಪಾದ ಪಂಕಜ ತೋರಿಸಿ

ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ

ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ  8

***


No comments:

Post a Comment