Wednesday 1 September 2021

ಏಳಯ್ಯ ಸದ್ಗುರುರಾಯ ಈಗ ಏಳು ತುರಗ ಸೂತನುದಯಿಸುವ ಸಮಯ ankita shyamasundara

 ..

ಏಳಯ್ಯ ಸದ್ಗುರುರಾಯ | ಈಗ

ಏಳು ತುರಗ ಸೂತನುದಯಿಸುವ ಸಮಯ ಪ


ಎದ್ದು ಶಿಷ್ಯರ ಕರೆಯಬೇಕು | ಗುರು

ಮಧ್ವಮತದ ತತ್ವ ಭೋಧಿಸಬೇಕು

ಇದ್ದ ದೋಷವ ಕಳೆಯಬೇಕು ಪರಿ

ಶುದ್ಧರ ಮಾಡಿ ನೀನುದ್ಧರಿಸಬೇಕು 1


ಶೌರಿಕಥಾಮೃತ ಸಾರೋದ್ಧಾರ | ಭಾಗವತ ಶಾಸ್ತ್ರವಿಚಾರ

ಮುರೆರಡು ವಿಧ ಭೇದ ತಾರತಮ್ಯ

ಸಾರುತ ಸಲಹೋ ಶಿಷ್ಯಪರಿವಾರ 2


ಪದಸುಳಾದಿಗಳ ಕೇಳಬೇಕು | ಕೇಳಿ

ಅದರೊಳಿರುವ ತತ್ವವಿವರಿಸಬೇಕು

ಮದಡತನವ ಕಳೆಯಬೇಕು ನಿನ್ನ

ಪದ ನಂಬಿದವರಿಗೆ ಮುದಗರಿಯ ಬೇಕು 3


ಸತ್ಯನಾರಾಯಣ ಕಥೆಯ | ಬಹುವಿಸ್ತಾರವಾಗಿ

ನೀ ಬಿತ್ತರಿಸಯ್ಯ | ಭೃತ್ಯರಾ ಮಾಯೆ

ಓಡಿಸಯ್ಯ ಅಜ್ಞಾನ

ಜ್ಞಾನ ಭಕ್ತಿ ವೈರಾಗ್ಯ ಸಂಪತ್ತು ನೀಡಯ್ಯ 4


ಒಂದೂರು ನಿಲಯನೆ ಏಳೊ ಶಾಮ

ಸುಂದರವಿಠಲನ ಮಂದಿರನಾಳೋ

ಬಂದ ನಿಂದೆಗಳೆಲ್ಲ ಹೂಳೋ ನಿನ್ನ

ಪೊಂದಿದ ನಮ್ಮನ್ನು ಅಗಲಿದೆ ಆಳೊ 5

***


No comments:

Post a Comment