Saturday 4 December 2021

ವೈಕುಂಠಗಿರಿಯವಾಸನ ಮಹಿಮೆ ಸ್ಮರಿಸು ankita gopalakrishna vittala VAIKUNTA GIRIYAVAASANA MAHIME SMARISU



ವೈಕುಂಠಗಿರಿಯವಾಸನ ಮಹಿಮೆ ಸ್ಮರಿಸು

ಜೋಕೆಯಿಂದಲಿ ಪೊರೆವ ಶ್ರೀಹರಿಯ ಭಜಿಸು ||ಪ||


ಭಕ್ತ ರಕ್ಷಕ ಹರಿಯು ಭಾಗ್ಯೋದಯದ ಸಿರಿಯು

ಮುಕ್ತಿದಾಯಕ ದೇವ ಮುನಿವರದ ಕಾವ

ಮುಕ್ತಿಯೋಗ್ಯರ ಸಂಗ ಮುದದಿಂದ ನೀಡೆಂದು

ಭಕ್ತಿಯಿಂದಲಿ ಭಜಿಸೆ ಬಂದು ಪೊರೆಯುವನು ||೧||


ನೀರೊಳಗೆ ಆಡಿದನು ಭಾರ ಬೆನ್ನೊಳು ವಹಿಸಿ

ಕೋರೆ ಹಲ್ಲನು ತೆರೆದು ಕಂಭದಲಿ ಬಂದ

ಮೂರಡಿಯ ಭೂ ಬೇಡಿ ಕ್ಷತ್ರಿಯ ಕುಲವನೆ ಸವರಿ

ವೀರ ರಾವಣನಸುವ ಹೀರಿದ ಹರಿಯು ||೨||


ಶ್ರೇಷ್ಠ ಯದುಕುಲದಲ್ಲಿ ಪುಟ್ಟಿ ಬತ್ತಲೆ ಕಲಿಯ

ಕುಟ್ಟಿ ಜಗ ರಕ್ಷಿಸಿದ ಸೃಷ್ಟಿಕರ್ತ

ದಿಟ್ಟ ಮೂರುತಿ ಸತತ ಕಾಯ್ವ ಶ್ರೀ ಗೋಪಾಲ-

ಕೃಷ್ಣವಿಠಲ ಶ್ರೀನಿವಾಸ ಜಗದೊಡೆಯ ||೩||

***


Vaikunthagiriyavasana mahime smarisu

jokeyindali poreva srihariya bhajisu ||pa||


Bhakta rakshaka hariyu bhagyodayada siriyu

muktidayaka deva munivarada kava

muktiyogyara sanga mudadinda nidendu

bhaktiyindali bhajise bandu poreyuvanu ||1||


Nirolage adidanu bhara bennolu vahisi

kore hallanu teredu kambhadali banda

muradiya bhu bedi kshatriya kulavane savari

vira ravananasuva hirida hariyu ||2||


Sreshtha yadukuladalli putti battale kaliya

kutti jaga rakshisida srushtikarta

ditta muruti satata kayva sri gopala-

krishnavittala srinivasa jagadodeya ||3||

***


ವೈಕುಂಠಗಿರಿಯವಾಸನ ಮಹಿಮೆ ಸ್ಮರಿಸು

ಜೋಕೆಯಿಂದಲಿ ಪೊರೆವ ಶ್ರೀಹರಿಯ ಭಜಿಸು ಪ.


ಭಕ್ತ ರಕ್ಷಕ ಹರಿಯು ಭಾಗ್ಯೋದಯದ ಸಿರಿಯು

ಮುಕ್ತಿದಾಯಕ ದೇವ ಮುನಿವರದ ಕಾವ

ಮುಕ್ತಿಯೋಗ್ಯರ ಸಂಗ ಮುದದಿಂದ ನೀಡೆಂದು

ಭಕ್ತಿಯಿಂದಲಿ ಭಜಿಸೆ ಬಂದು ಪೊರೆಯುವನು 1

ನೀರೊಳಗೆ ಆಡಿದನು ಭಾರ ಬೆನ್ನೊಳು ವಹಿಸಿ

ಕೋರೆ ಹಲ್ಲನು ತೆರೆದು ಕಂಭದಲಿ ಬಂದ

ಮೂರಡಿಯ ಭೂ ಬೇಡಿ ಕ್ಷತ್ರಿಯ ಕುಲವನೆ ಸವರಿ

ವೀರ ರಾವಣನಸುವ ಹೀರಿದ ಹರಿಯು 2

ಶ್ರೇಷ್ಠ ಯದುಕುಲದಲ್ಲಿ ಪುಟ್ಟಿ ಬತ್ತಲೆ ಕಲಿಯ

ಕುಟ್ಟಿ ಜಗ ರಕ್ಷಿಸಿದ ಸೃಷ್ಟಿಕರ್ತ

ದಿಟ್ಟ ಮೂರುತಿ ಸತತ ಕಾಯ್ವ ಶ್ರೀ ಗೋಪಾಲ-

ಕೃಷ್ಣವಿಠಲ ಶ್ರೀನಿವಾಸ ಜಗದೊಡೆಯ 3

****


No comments:

Post a Comment