Friday 27 December 2019

ಬಂದು ಭಕ್ತಿಯಲಿಂದ ಇಂದಿರೆ ರಮಣನ ankita madhwesha krishna

ಬಂದು ಭಕ್ತಿಯಲಿಂದ ಇಂದಿರೆ ರಮಣನ 
ಚರಣಕ್ಕೊಂದನೆ ಮಾಡಿರೋ 
ಸಂದೇಹವಿಲ್ಲದೆ ಸಲಹುವ ತಾನು 
ಸುಂದರಾಂಗನು ಚಂದಿರವದನನು||ಪಲ್ಲ||

ಪಾದದಿ ಪಾಗಡ ಋಳಿ ಗೆಜ್ಜೆಕಟ್ಟಿದ 
ಮೋದಭರಿತನು,ಮೇಧಿನಿಪತಿಯಿವ
ಕಾದು ಕೊಂಡಿಹ ತನ್ನ ಭಕ್ತರ ಸಲಹುವ
ಯಾದವರೊಡೆಯ ಯದುಕುಲ ತಿಲಕ||೧||

ಹರಿದಾಸರನುದಿನ ಹಾಡಿಹೊಗಳುವ
ಪರಮಪಾವನಮೂರ್ತಿಶ್ರೀಹರಿಯ
ಕರಿಯ ಕರೆಗೆ ಬಂದ ಕರುಣಾಮಯನು 
ಕಾರುಣ್ಯ ಮೂರ್ತಿ ಶ್ರೀಕೃಷ್ಣನ \\೨\\

ರಮೆಯರಸನ ಧ್ಯಾನ ಸುಮನಸದಲಿ 
ಮಾಡೆಕಮನೀಯ ಮೂರ್ತಿ ತಾನೊಲಿವ
ಅಮರರಿಂದೊಂದಿತ ಭುವನಾದಿಪತಿಯು
ಆದರದಲಿ ಭಜಿಸೆಅನುಗ್ರಹಿಸುವನು||೩||

ನಿತ್ಯ ತೃಪ್ತನು ತನ್ನಭಕ್ತರ ಸಲಹುವ 
ಸತ್ಯಭಾಮೆಯ ಪತಿ ಸಾರ್ವಭೌಮ
ಅತ್ಯಂತ ವಿನಯದಿ ತೃಪ್ತಿ ಪಡುವನು 
ಭಕ್ತರ ಮಾತಿಗೆ ಕತೃಪತಿಯ||೪||

ಸರ್ವ ಕಾಲಗಳಲ್ಲು ಸರ್ವ  ದೇಶಗಳಲ್ಲು 
ಸನ್ನಿಹಿತನಾಗಿರುವ ಸರ್ವಶಕ್ತ
ಸರುವರ ಆಧಾರಿ ಸರಸಿಜದಳನೇತ್ರ 
ಸರುವರಿಂದೊಂದಿತ ಮಧ್ವೇಶ ಕೃಷ್ಣ ||೫||
********

No comments:

Post a Comment