Sunday 5 December 2021

ದಾರಿಯ ತೋರೊ ಮುಕುಂದ ನಾರಾಯಣ ಹರಿ ಗೋವಿಂದ purandara vittala DAARIYA TORO MUKUNDA NARAYANA HARI GOVINDA



ಪುರಂದರದಾಸರು

ದಾರಿಯ ತೋರೊ ಮುಕುಂದ , ನಾರಾಯಣ ಹರಿ ಗೋವಿಂದ ||ಪ||

ಬಂದೆನು ನಾನಾ ಜನ್ಮದಲಿ, ಬಹು, ಬಂಧನದೊಳು ಸಿಲುಕಿದೆನೊ
ಮುಂದಿನ ಪಯಣದ ಗತಿಯೇನೊ, ಇಂದು ನೀ ತೋರೋ ಇಂದಿರೆರಮಣನೆ ||

ಉಕ್ಕಿ ಹರಿವ ನದಿಯೊಳಗೆ, ನಾ ,ಸಿಕ್ಕಿದೆ ನಡು ನೀರೊಳಗೆ
ಕಕ್ಕುಲತೆಯಿಲ್ಲ ನಿನಗೆ, ಬೇಗ, ನೀ ಕೈ ಪಿಡಿದೆನ್ನ ಸಲಹಯ್ಯ ಬಿಡದೆ ||

ಕುಕ್ಷಿಯೊಳಗೆ ನೀ ಬಿಟ್ಟು, ಅಯ್ಯ, ಯಾರಿಗೆ ಉಸಿರುವೆನೊ
ಚಿಂತಿತದಾಯಕ ಕೇಳೊ, ನಮ್ಮ, ಪುರಂದರವಿಠಲನೆ ದಯವಾಗೊ ||
***

ರಾಗ ಪೂರ್ವಿ. ಏಕ ತಾಳ (raga tala may differ in audio)

pallavi

dAriya tOro mukunda nArAyaNa hari gOvinda

caraNam 1

bandenu nAnA janmadali bahu bandhanadoLu silukideno
mundina payaNada gatiyEno indu nI tOrO indire ramaName

caraNam 2

ukki hariva nadiyoLage nA sikkide naDu nIroLage
kakkulateyilla ninage bEga nI kai piDidenna salahayya biDade

caraNam 3

kukSiyoLage nI biTTu ayya yArige usiruveno
cintita dAyaka kELo namma purandara viTTalane dayavAgo
***


ದಾರಿಯ ತೋರೊ ಮುಕುಂದ ಹರಿ-|ನಾರಾಯಣ ಗೋವಿಂದ ಪ

ಬಂದೆನು ಬಹುಜ್ಮನದಲಿ -ನಾ-|ಬಂಧನದೊಳು ಸಿಲುಕುತಲಿ ||ಮುಂದಿನದಾವುದು ಪಯಣ -ತೋರೊ-|ಇಂದುನೀ ಇಂದಿರೆರಮಣ1

ಗತಿಯಿಲ್ಲದವರಿಗೆ ನೀನೆ -ಸದ್-|ಗತಿಯೆಂದು ಸ್ತುತಿಮಾಡಿದೆನೊ ||ಗತಿಯೆಂದು ನಂಬಿದೆ ನಿನ್ನ |ಸತುವ ತೋರು ನರಹರಿಯೆ ಗೋವಿಂದ 2

ಮಡವಿನೊಳಗೆ ಧಮುಕಿದೆನೆ -ಇನ್ನು-ಕಡಹಾಯಿಸುವರ ನಾ ಕಾಣೆ ||ಹಡೆದ ತಾಯಿ - ತಂದೆ ನೀನೆ -ಕೈ-|ಹಿಡಿದು ಸಲಹೊ ಎನ್ನೊಡೆಯ ಮುರಾರಿ 3

ಮಿಕ್ಕಿ ಬರುವ ಹೊಳೆಯೊಳಗೆ -ನಾನು-|ಸಿಕ್ಕಿದೆ ನಡುನೀರೊಳಗೆ ||ಕಕ್ಕುಲಾತಿನಿನಗಿರದೆ |ಭಕ್ತವತ್ಸಲ ನೀ ದಯಮಾಡೋ 4

ಕುಕ್ಷಿಯೊಳಗೆ ಇಂಬಿಟ್ಟು -ಎನ್ನ-|ರಕ್ಷಿಸಿ ಸಲಹಬೇಕು ||ಅಕ್ಷಯಅನಂತ ಮಹಿಮನೆ - ನೀನು |ಪಕ್ಷಿವಾಹನನೆಪುರಂದರವಿಠಲ5
********

No comments:

Post a Comment