Saturday 1 May 2021

ವ್ಯೋಮಕೇಶನೇ ಧರೆಗಿಳಿದು ಕಾಮಿತಗಳ ಕೊಡುತಿಪ್ಪ ವರದೇಂದ್ರ ankita venkatanatha varadendra teertha stutih

  varadendra teertha rayara mutt yati 1785 stutih

by ಆಚಾರ್ಯ ನಾಗರಾಜು ಹಾವೇರಿ....

ವ್ಯೋಮಕೇಶನೇ ಧರೆಗಿಳಿದು ।
ಕಾಮಿತಗಳ ಕೊಡುತಿಪ್ಪ 
ವರದೇಂದ್ರ ರೂಪದಲಿ ।। ಪಲ್ಲವಿ ।।

ಗುರು ವಸುಧೇಂದ್ರರ 
ಕರ ಸಂಜಾತ ನೆನಿಸಿ ।
ಗುರು ಭುವನೇಂದ್ರ ಪಿತ 
ವರದೇಂದ್ರರಾಯ ।। ಚರಣ ।।

ಜಗನ್ನಾಥದಾಸರಿಗೆ 
ವಿದ್ಯಾದಾತನಾಗಿ ।
ಜಗನ್ನಾಥ ಮೂಲರಾಮನರ್ಚಕ 
ವರದೇಂದ್ರ ರಾಯ ।। ಚರಣ ।।

ಹರಿದಾಸ ಪ್ರಾಣೇಶರಾಯ
ಗುರುಜಗನ್ನಾಥ ಶಿಷ್ಯ ಪ್ರಶಿಷ್ಯರನ್ನು ।
ಹರಿ ವೇಂಕಟನಾಥನ ಕರುಣದಿ ಸಲುಹಿ
ಪೋಷಿಸಿದ ದಾಸ ಸಾಹಿತ್ಯವನು 
ಬೆಳೆಸಿದ ಮಹರಾಯ ।। ಚರಣ ।।
****

ಆಚಾರ್ಯ ನಾಗರಾಜು ಹಾವೇರಿ....

ವ್ಯೋಮಕೇಶನೇ ಧರೆಗಿಳಿದು ।
ಕಾಮಿತಗಳ ಕೊಡುತಿಪ್ಪ -
ವರದೇಂದ್ರರಾಯ ।।
ಗುರು ವಸುಧೇಂದ್ರರ -
ಕರ ಸಂಜಾತ ನೆನಿಸಿ ।
ಗುರು ಭುವನೇಂದ್ರ -
ಪಿತ ವರದೇಂದ್ರರಾಯ ।।
ಜಗನ್ನಾಥದಾಸರಿಗೆ -
ವಿದ್ಯಾದಾತನಾಗಿ ।
ಜಗನ್ನಾಥ ಮೂಲರಾಮ-
ನರ್ಚಕ ವರದೇಂದ್ರ ರಾಯ ।।
ಹರಿದಾಸ ಪ್ರಾಣೇಶರಾಯ -
ಗುರುಜಗನ್ನಾಥ ಶಿಷ್ಯ ಪ್ರಶಿಷ್ಯರನ್ನು ।
ಹರಿ ಕರುಣದಿ ಸಲುಹಿ -
ಪೋಷಿಸಿದ ದಾಸ ಸಾಹಿತ್ಯವನು 
ವರದೇಂದ್ರರಾಯನೇ -
 ವೇಂಕಟನಾಥನ ನಿಜ ದಾಸ ।। ಚರಣ ।।
***

No comments:

Post a Comment