Friday 27 December 2019

ಯಾತಕೆ ಮರುಳಾದೆಯೋ ಮನವೆ others

ರಾಗ ಶಂಕರಾಭರಣ ಝಂಪೆತಾಳ

ಯಾತಕೆ ಮರುಳಾದೆಯೋ ಮನವೆ
ಏತಕೆ ಮರುಳಾದೆಯೋ
ಯಾತಕೆ ಮರುಳಾದೆ ಕಾಕುದೈವವ ನಂಬಿ
ಕಾತರಪಟ್ಟು ನೀ ನೀತಿಮಾರ್ಗವ ಬಿಟ್ಟು ||ಪ||

ಮಾರಿಯು ಮಸಣಿಯು ಕಾಯ್ವುದೆ ನಿನ್ನ
ಕೋರಿಕೆಯನು ಕೊಡಬಲ್ಲುದೆ
ಧೀರನು ನೀನಾಗಿ ಹರಿಪಾದವ ನಂಬಲು
ಆರಿಗು ತೀರದ ಮುಕುತಿಯ ಕೊಡುವನು ||೧||

ಆ ಜಾತಿ ಈ ಜಾತಿ ಎನ್ನದೆ ನೀನು
ಸೋಜಿಗವ ಪಟ್ಟು ಸಾಯದೆ
ಮೂಜಗದೀಶನ್ನ ದಾಸರ ನಂಬಲು
ಮಾಜದೆ ಜಾನದ ದಾರಿಯ ತೋರ್ಪರು ||೨||

ಏನಾಯ್ತು ಈ ಕರ್ಮಮಾರ್ಗದಿ ನೀನು
ನಾನಾ ದುಃಖವ ಪೊಂದಿದೆ
ಇನ್ನಾದರು ಶ್ರೀ ಅಚ್ಯುತನ ನೆನೆದರೆ
ಜಾನದ ತತ್ವವು ತಾನೆ ತಿಳಿವುದಲ ||
*******

No comments:

Post a Comment