Showing posts with label ಇಷ್ಟವಿಲ್ಲದ ಕಾರ್ಯ ಕಟ್ಟುಣಿಸುವುದು vijaya ramachandra vittala. Show all posts
Showing posts with label ಇಷ್ಟವಿಲ್ಲದ ಕಾರ್ಯ ಕಟ್ಟುಣಿಸುವುದು vijaya ramachandra vittala. Show all posts

Wednesday 16 October 2019

ಇಷ್ಟವಿಲ್ಲದ ಕಾರ್ಯ ಕಟ್ಟುಣಿಸುವುದು ankita vijaya ramachandra vittala

 ಶ್ರೀ ವಿಜಯರಾಮಚಂದ್ರವಿಠಲ ಕೃತಿ


 ರಾಗ ಕಾಂಬೋಧಿ ಖಂಡಛಾಪುತಾಳ


ಇಷ್ಟವಿಲ್ಲದ ಕಾರ್ಯ ಕಟ್ಟುಣಿಸುವುದು ।

ಕಟ್ಟಳೆ ಎನ್ನದೆಂತೋ ॥ ಪ ॥

ನಷ್ಟಗೈಸುವುದಿನ್ನು ಕಷ್ಟಪಡಿಸಲಿ ಬ್ಯಾಡ ।

ಇಷ್ಟ ಕೃಷ್ಣಾರ್ಯನೇ ॥ ಅ ಪ ॥


ಪುಟ್ಟಿದ ಮೊದಲಾಗಿ ಭ್ರಷ್ಟತನವೇ ಪೊಂದಿ ।

ದುಷ್ಟರೊಳು ಶ್ರೇಷ್ಠನಾದೆ ॥

ಎಷ್ಟು ದಿನ ಇದರಂತೆ ಇಟ್ಟಿರುವೆಯೊ ಗುರುವೇ ।

ಇಷ್ಟೇನೆ ಎನ್ನ ಯೋಗ್ಯತೆಯು ॥ 1 ॥


ಪಾಪಿ ವಿಷಯ ಜ್ವಾಲೆಯು ಕುಪಿತನೆಂದೆನ್ನ ।

ತಪಿಸಿ ಬೇಯಿಸುವುದೋ ॥

ಕೃಪೆಯೆಂಬ ಮಳೆಗರೆದು ಉಪಶಮನ ಮಾಡೋ ।

ಆಪದ್ಭಾಂಧವನಲ್ಲವೇ ಗುರುವೇ ॥ 2 ॥


ಪಾಪಕಾರ್ಯರತನ ಪಾಪ ಎಣಿಸದೇ ಜನರಿಂದ ।

ತಾಪಸಿ ಎನಿಸುವುದ್ಯಾಕೋ ॥

ಭೂಪ ವಿಜಯರಾಮಚಂದ್ರವಿಠ್ಠಲನ।

ಆ ಪಾದಪದುಮವ ನಂಬಿಹ ಗುರುವೇ ॥ 3 ॥