ನಡೆದು ಬಾರಯ್ಯ ಮನೆಗೆ ವೆಂಕಟರಾಯ
ನಡೆದು ಬಾರಯ್ಯ ಮನೆಗೆ||
ನಡೆದು ಬಾರಯ್ಯ ಭವ
ಕಡಲಿಗೆ ಕುಂಭಸಂಭವ|
ಸಡಗರದಿಂದ ಮೆಲ್ಲಡಿಯನಿಡುತ ಬೇಗ|
ಎಡಬಲದಲಿ ನಿನ್ನ ಮಡದಿಯರಿಂದೊಪ್ಪುತ
ತಡಮಾಡದೆ ಬಾ ಮೃಡಸಖ ವೆಂಕಟ …ನಡೆದು ||
ವಿಜಯದಶಮಿ ಆಶ್ವಿಜಮಾಸ ಶುದ್ಧದಲ್ಲಿ
ನಿಜರಥಾರೂಢನಾಗಿ, ಸುಜನರಿಂದೊಡಗೂಡಿ
ಗಜಸಿಂಹ ,ಮಯೂರ, ದ್ವಿಜಸಿಂಗ ಸಾರಂಗ
ಮಜಭಾಪುರೆ ಎನಲು ತ್ರಿಜಗವು ತಲೆದೂಗೇ
ಅಜನು ಸ್ತುತಿಯ ಮಾಡೆ ರುಜಗಣಾಧಿಪ ಪಾಡೆ
ಗಜಮುಖನಯ್ಯನು ನಿಜಾನಂದದಲ್ಲಾಡೆ
ತ್ರಿಜಗಶ್ರೇಷ್ಠ ದ್ವಿಜರಾಜರು ಜಯವೆನ್ನೆ
ಕುಜನರೆದೆಯ ಮೆಟ್ಟಿ ರಜತಮ ಕಳೆಯುತ ನಡೆದು….||
ದಕ್ಷಿಣ ದಿಕ್ಕಿನಲ್ಲಿ ,ರಾಕ್ಷಸರೆದುರಾಗಿ ,
ಅಕ್ಷೋಹಿಣಿ ಬಲ ,ನಿನ್ನುಪೇಕ್ಷೆ ಮಾಡುತಲಿರೆ
ಪಕ್ಷಿವಾಹನನೆ ನೀನಾಕ್ಷಣೊದೊಳು ಖಳರ
ಶಿಕ್ಷಿಸಿ, ಸುಜನರ ರಕ್ಷಿಸಿ ಮೆರೆದಯ್ಯಾ|
ತಕ್ಷಕ ಸುತ ಸಹಸ್ರಾಕ್ಷನ ಮಗನನು
ಭಕ್ಷಿಸಬರುತಿರೆ ಈಕ್ಷಿಸಿ ರಥವನು
ತಕ್ಷಣ ನೆಲಕ್ಕೊತ್ತಿ ಮೋಕ್ಷವಗೈಸಿದೆ
ಕುಕ್ಷಿಯೊಳಗೆ ಜಗರಕ್ಷಿಪ ವಿಶ್ವ…..||ನಡೆದು ಬಾರಯ್ಯ||
ಅಂಬುಜಾಕ್ಷನೆ ಬಾರೊ ಅಂಬುಜ ವದನನೆ
ಅಂಬುಜಾಲಯೆಪತೆ ಅಂಬುಜನಾಭನೆ
ಅಂಬುಜಭವಜನಕ ಅಂಬುಜಾರಿಧರ
ಅಂಬುಜ ನಿವಾಸ ಅಂಬುಜ ಮಿತ್ರ ತೇಜ|
ಕೊಂಬು ಕಹಳೆಗಳು ಬೊಂಭೋರಿಡುತಿರೆ
ತುಂಬುರು ನಾರದರು ಬಾಗಿ ಪಾಡಲು
ಅಂಬರದಲಿ ವಾದ್ಯ ತುಂಬಿ ಧಿಂಧಿಮಿರೆನ್ನೆ
ಸಂಭ್ರಮದಲಿ ಬಾರೊ ಶಂಭು ವಂದಿತನೆ ನಡೆದೂ….||
ಮನಕೆ ಬಾರಯ್ಯ , ಸುಧಾಮನ ಸಖಹರಿಯೆ
ಸೋಮನ ಧರಿಸಿದವನ ಮನ ಕುಮುದಕೆ ಚಂದ್ರಮನೆ
ಕೇಳೋ ಎನ್ನ ದುಮ್ಮನ ಪರಿಹರಿಸಿ
ಕೊಡು ಒಮ್ಮನ ಅಹಿಗಿರಿ ತಿಮ್ಮನೆ ಕೇಳೊ ಬಿನ್ನಪಾ
ಮನ ನಿನ್ನದು ಹೇ ಮನಸಿಜ ಜನಕ
ಸುಮನಸರೊಡೆಯ ಬೊಮ್ಮನ ಪೆತ್ತನೆ
ಸುಮ್ಮನೆ ತಡವೇಕೆ ನಿಮ್ಮನೆಯವರೊಡನೆ
ಹಿಮ್ಮನ ಮಾಡದೆ ಗಮ್ಮನೆ ಬಾ ವೆಂಕಟ ||
ಪರಿಪರಿ ಬಗೆಯಿಂದ ಕರವ ಮುಗಿದು ನಿನ್ನ
ಕರೆದರೆ ಬಾರದ ಗರುವತನವು ಯಾಕೊ
ಕರಿಯ ಮೊರೆಯ ಕೇಳಿ, ಸಿರಿಗೆ ಹೇಳದೆ ಬಂದೆ
ಕರಿರಾಜ ಅವ ನಿನ್ನ ಹಿರಿಯಪ್ಪನ ಮಗನೇನೊ
ಶರಣಾಗತ ರಕ್ಷಾಮಣಿ ಎಂಬುವ
ಬಿರುದು ಬೇಕಾದರೆ ,ಸರಸರ ಬಾರಯ್ಯ,
ಗರುಡ ಗಮನ ಗೋಪಾಲ ವಿಠ್ಠಲರಾಯ
ಕರುವಿನಮೊರೆಗಾವು ನೆರೆದಂತೆ ಪೊರೆಯಲು ||
***
Nadedu barayya bhava kadalige kumbhasambhava
sadagaradimda ni melladiyaniduta baro||p||
Edabaladali ninna madadiyarimdopputa
tadamadade ba mrudasakha venmkata ||a||
vijayadashami ashvija shuddhamasadalli
nija ratharudhanagi sujanarindarodagudi
gajasimha mayura dvija singa saranga
maja bhapure enalu trijagavu taleduge
ajanu stutiya made rujaganadipa pade
gajamukhanayyanu nijanandadalade
bhujagashreshtanu dvijaraja jayavenne
kujanaredeya metti rajatama kaleyuta ||1||
dakshina dikkinalli rakshasa samuha onda
dakshohini bala ninnupekshe madutali
pakshivahananemi ninakshanadi khalara
shikshisi sujanara rakshisi meredayya
takshaka naranannu bhakshisa barutire ikshisi
takshana nelakottide lakshmishane akshaya phaladayaka
kukshiyolage jagarakshipa vishwa ||2||
paripariyindali karava mugidu stutise
karedare barada garuvatanavu yako
kariraja more ide siri gehlade bande
kariraja ava ninna kiriyappana maganeno
sharanagata rakshamani ennuva
birudu bekadare sarasarrane barayya
garudagamana gopalavithalareya…..
Karuvina moregavu neredante poreyu ||3||
***
ನಡೆದು ಬಾರಯ್ಯ ವೆಂಕಟ ll ಪ ll
ನಡೆದು ಬಾರಯ್ಯ ಭವ ಕಡಲಿಗೆ ಕುಂಭ ಸಂಭವ
ಸಡಗರದಿಂದ ಮೆಲ್ಲಡಿಯ ನಿಡುತ ಬೇಗ
ಎಡಬಲದಲಿ ನಿನ್ನ ಮಡದಿಯರಿಂದೊಪ್ಪುತ
ತಡಮಾಡದೆ ಬಾ ಮೃಡಸಖ ವೆಂಕಟ ll ಅ ಪ ll
ನಮ್ಮೆಲ್ಲ ಪಾಪಗಳನ್ನು ಕಳೆಯುವ ಹೇ ವೆಂಕಟ ಬೇಗ ಬೇಗ ನಡೆದು ಬಾ. ಅಗಸ್ತ್ಯರು ಏಕಾಪೋಶನದಿಂದ ಸಮಗ್ರ ಸಾಗರವನ್ನು ಸ್ವಾಹಾಕಾರ ಮಾಡಿ ಖಾಲಿ ಮಾಡಿದಂತೆ ನೀ ಬಂದಲ್ಲಿ ಸಂಸಾರ ಸಾಗರ ನಾಶವಾಗಿ ಸರಿಯುವುದು. ಆದ್ದರಿಂದ ಸಡಗರದಿ ಬಾ ಆದರೆ ಮೆಲ್ಲನೆ ಅಡಿಯ ನಿಡುತ ಬಾ. ನಿನ್ನ ಅವಸರಕೆ ನಾನು ಅಸಮರ್ಥ. ನಿಧಾನವಿದ್ದಲ್ಲಿ ನನಗೆ ಸಮಾಧಾನ. ನಿನ್ನ ಎಡ-ಬಲದಲ್ಲಿ ಶ್ರೀ ಭೂದೇವಿಯನ್ನು ಕರೆದುಕೊಂಡು ಬಾ. ತಾಯಿಯಾದ ಲಕುಮಿಯನ್ನು ನೀ ಕರೆತಂದರೆ ಶಾಸ್ತ್ರದ ನೀರಿನಿಂದ, ಹೊಲಸಾದ ನನ್ನನ್ನು ಸ್ವಚ್ಛಗೊಳಿಸುವಳು. ನಂತರ ನೀನು ನನ್ನ ಕೈ ಹಿಡಿದು ಉದ್ಧರಿಸಬಹುದು. ತಡಮಾಡದೇ ಬಾ. ನೀನು ಮೃಡಸಖ ಮನೋಭಿಮಾನಿ ರುದ್ರನ ಸ್ನೇಹಿತ ನನ್ನ ಮನೋವೇದನೆ ವಿಚಾರ ನಿನಗೆ ತಿಳಿಯುವದು. ಆದ್ದರಿಂದ ಬೇಗ ಬಾ ಎಂದು ಆರ್ತಭಾವದಿಂದ ಕೊಂಡಾಡಿ ಕರೆಯುತ್ತಿದ್ದಾರೆ.
ಮುಂದೆ ನುಡಿಗಳಲ್ಲಿ ವರ್ಣಿಸುತ್ತ ಮೊದಲ ನುಡಿಯನ್ನು ತಿಳಿಸುತ್ತಾರೆ.
ವಿಜಯದಶಮಿ ಆಶ್ವೀಜ ಮಾಸ ಶುದ್ಧದಲ್ಲಿ
ನಿಜರಥರೂಢನಾಗಿ ಸುಜನರಿಂದೊಡಗೂಡಿ
ಗಜ ಹಂಸ ಮಯೂರ ದ್ವಿಜ ಸಿಂಗ ಸಾರಂಗ
ಮಜಭಾಪುರೆ ಎನಲು ತ್ರಿಜಗವು ತಲೆದೂಗೆ
ಅಜನು ಸ್ಥಿತಿಯು ಮಾಡೆ ಋಜುಗಣಾಧಿಪ ಪಾಡೆ
ಗಜಮುಖನಯ್ಯನು ನಿಜಾನಂದದ ಲಾಡೆ
ಭುಜಗಶ್ರೇಷ್ಠ ದ್ವಿಜರಾಜರು ಜಯವೆನ್ನೆ
ಕುಜನರೆದೆಯ ಮೆಟ್ಟಿ ರಜತಮ ಕಳೆಯುತ ll 1 ll
ವಿಜಯದಶಮಿ ಜಗತ್ತಿಗೆ ವಿಜಯ ತರುವ ದಶಮಿ ಅಂದು ಸ್ವತಃ ಬ್ರಹ್ಮದೇವರು ರಥೋತ್ಸವದಲ್ಲಿ ಬ್ರಹ್ಮದೇವರು ದೇವರನ್ನು ಕರೆತರುವರು. ನಿನ್ನ ರಥದಲ್ಲಿ ನಿನ್ನೆಲ್ಲ ಭಕ್ತರಾದ ಸುಜನರಿಂದ ಕೂಡಿ ಬಾ.
ಆನೆ ಮೊದಲಾದ ಸಕಲ ಪ್ರಾಣಿಗಳು ನಿನ್ನ ಜಯಕಾರದ ಝೇಂಕಾರಕ್ಕೆ ತಲೆದೂಗುತ್ತಿವೆ.
ತ್ರಿಲೋಕವೇ ನಿನ್ನ ವೈಭವಕ್ಕೆ ತಲೆಯಾಡಿಸುತ್ತಿದೆ. ಬ್ರಹ್ಮನ ಮುಂದು ಮಾಡಿ ಸಮಸ್ತ ಋಜುಗಣ ನಿನ್ನ ಪಾಡುತ್ತಿದೆ. ರುದ್ರ, ಶೇಷ ಗರುಡರು ಆನಂದದಿ ಜಯಕಾರ ಹಾಕುತ್ತಿದ್ದಾರೆ. ಅವರೆಲ್ಲರ ಕರೆಗೆ ಬೆಲೆಕೊಟ್ಟು ಕುಜನರ ಮೆಟ್ಟಲು ಓಡೋಡಿ ಬಾ.
ಅದರಿಂದ ರಜೋಗುಣದಿಂದಾದ ನನ್ನ ಅಜ್ಞಾನ ನಾಶ ಮಾಡು.
ದಕ್ಷಿಣ ದಿಕ್ಕಿನಲ್ಲಿ ರಾಕ್ಷಸ ಸಮೂಹ
ಒಂದಕ್ಷೋಹಿಣಿ ಬಲ ನಿನ್ನಪೇಕ್ಷೆ ಮಾಡುತಲಿರೆ
ಪಕ್ಷಿವಾಹನ ದೇವ ನೀನಾಕ್ಷಣದಿ ಖಳರ
ಶಿಕ್ಷಿಸಿ ಸುಜನರ ರಕ್ಷಿಸಿ ಮೆರೆದೆ
ತಕ್ಷಕ ನರನನ್ನು ಭಕ್ಷಿಸೆ ಬರುತಿರೆ
ಈಕ್ಷಿಸಿ ರಥವ ತಕ್ಷಣ ನೆಲಕೊತ್ತಿದೆ
ಲಕ್ಷ್ಮೀಶನೇ ಅಕ್ಷಯ ಫಲದಾಯಕ
ಕುಕ್ಷಿಯೊಳಗೆ ಜಗರಕ್ಷಿಪ ವಿಶ್ವ ll 2 ll
ದಕ್ಷಿಣ ದಿಕ್ಕಿನೊಳಗೆ ದೊಡ್ಡದಾದ ರಾಕ್ಷಸರ ಸಮೂಹವೇ ಬರುತ್ತಿದೆ. ಅಕ್ಷೋಹಿಣಿಯವರೆಗಿದ್ದ ಸೈನ್ಯ ನಿನ್ನ ಉದಾಸೀನ ಮಾಡುತ್ತಿದೆ. ನಿನ್ನ ಭಯವಿಲ್ಲದೆ ಮೆರೆಯುತ್ತಿದೆ. ಉರಿಯುತ್ತಿದೆ. ಆ ಎಲ್ಲ ದುಷ್ಟರನ್ನು ಶಿಕ್ಷಿಸು. ಶಿಷ್ಟರನ್ನು ರಕ್ಷಿಸು.
ಹಿಂದೆ ನೀನು ಇದನ್ನೇ ಮಾಡಿದ್ದೀಯಾ. ನಿನ್ನ ಪ್ರೀತಿಯ ಅರ್ಜುನನನ್ನು ಕರ್ಣನ ಬಾಣದಲ್ಲಿ ಸೇರಿದ ತಕ್ಷಕ ಸಾಯಿಸಲು ಬಂದಾಗ ತಕ್ಷಣ ರಥವನ್ನು ಕೆಳಗೆ ಒತ್ತಿದೆ. ಕುತ್ತಿಗೆಗೆ ಗುರಿಯಿದ್ದ ಬಾಣ ಕಿರೀಟವನ್ನು ಮಾತ್ರ ಕಿತ್ತುಕೊಂಡು ಹೋಯಿತು. ಅಕ್ಷಯ ಫಲವನ್ನು ನೀಡುವ ಲಕ್ಷ್ಮೀಪತಿಯಾದ ಜಗತ್ತನ್ನು ನಿನ್ನ ಉದರದೊಳಗೆ ಧರಿಸಿದ ವಿಶ್ವ ರಕ್ಷಿಸುವ ವಿಶ್ವರೂಪಿ ಶ್ರೀನಿವಾಸ ಬೇಗನೇ ಓಡೋಡಿ ಬಾ .
ಅಂಬುಜಾಕ್ಷನೇ ಬಾರೋ ಅಂಬುಜವದನನೇ
ಅಂಬುಜಾಲಯ ಪತಿ ಅಂಬುಜನಾಭನೇ
ಅಂಬುಜ ಜನಕ ಅಂಬುಜಾರಿಧರ
ಅಂಬುಜ ನಿವಾಸ ಅಂಬುಜಮಿತ್ರ ತೇಜ
ಕೊಂಬು ಕಹಳೆಗಳು ಭೊಂ ಭೊಂ ರಿಡು ತಿರೆ
ತುಂಬುರು ನಾರದರು ಇಂಪಾಗಿ ಪಾಡಲು
ಅಂಬರದಲಿ ವಾದ್ಯ ಧಂ ಧಂ ಧಣಿರೆನೆ
ಸಂಭ್ರಮದಲಿ ಬಾರೊ ಶಂಭುವಂದಿತನೇ ll 3 ll
ಈ ನುಡಿಯ ವಿಶೇಷ "ಅಂಬುಜ" ಎನ್ನುವ ಒಂದೇ ಪದವನ್ನೇ ಎಂಟು ಬಾರಿ ಪ್ರಯೋಗಿಸಿ ಬೇರೆ ಬೇರೆ ಅರ್ಥಕ್ಕಾಗಿ ಬಳಸುತ್ತಾರೆ.
ಅಂಬುಜ ಎಂದರೆ ನೀರಿನಲ್ಲಿ ಹುಟ್ಟಿದ ಕಮಲ. ಶ್ರೀನಿವಾಸನ ಕಣ್ಣು ಕಮಲದಂತಿದೆ. ಮುಖವು ಕಮಲದಂತೆ ಅರಳಿದೆ. ಕಮಲ ನಿವಾಸಿಯಾದ ಕಮಲಾಳ ಪತಿಯಾಗಿರುವ ನಾಭಿಯಲ್ಲೂ ಕಮಲವಿದೆ. ಆ ಕಮಲ ಹುಟ್ಟಿಸಿದವನು ನೀನೇ. ಕೈಯಲ್ಲಿ ಕಮಲವನ್ನು ಹಿಡಿದಿರುವೆ, ನೀರಿನಲ್ಲಿಯ ಕಮಲದಲ್ಲಿ ಇರುವೆ.. ಅಥವಾ ಹೃದಯ ಕಮಲದಲ್ಲಿ ಇರುವೆ. ಕಮಲದಲ್ಲಿ ಹುಟ್ಟಿದ ಬ್ರಹ್ಮನಿಗೆ ತಂದೆಯಾಗಿರುವೆ. ಕಮಲ ಸಖನಾದ ಸೂರ್ಯನ ಕಾಂತಿಗಿಂತ ಅನಂತಪಟ್ಟು ಕಾಂತಿಮಂತನಾದವನು ಶ್ರೀನಿವಾಸ.
ವೆಂಕಟೇಶ ಬರುವನೆಂದಾದರೆ ಸಕಲ ವಾದ್ಯ ಧ್ವನಿಗೈಯುತ್ತಿವೆ. ತುಂಬುರು ನಾರದಾದಿಗಳು ಸುಂದರವಾಗಿ ಹಾಡುತ್ತಾರೆ. ಶಿವನೂ ವಂದಿಸಿ ಸ್ವಾಗತಿಸುವ ಸರ್ವರಿಗೂ ಸಂಭ್ರಮವೆ ಸಂಭ್ರಮ.
ಮನಕೆ ಬಾರಯ್ಯ ಸುಧಾಮನಸಖ ಹರಿಯೇ
ಸೋಮನ ಧರಿಸಿದವನ ಮನಕುಮುದಕೆ ಚಂದ್ರ
ಮನ ಕೇಳೋ ಎನ್ನ ದುಮ್ಮಾನ ಪರಿಹರಿಸೊ
ಒಮ್ಮನ ಕೊಡೊ ಅಹಿಗಿರಿ ತಿಮ್ಮನೆ ಕೇಳೊ ಬಿನ್ನಪ
ಮನ ನಿನ್ನದು ಹೇ ಮನಸಿಜ ಪಿತನೇ ಸುಮನಸರೊಡೆಯ
ಬೊಮ್ಮನ ಪೆತ್ತನೆ ಸುಮ್ಮನೆ ತಡವ್ಯಾತಕೊ
ನಿಮ್ಮನೆಯವರೊಡನೆ ಇಮ್ಮನೆಮಾಡದೆ ಗಮ್ಮನೆ ಬಾ ll 4 ll
ವೆಂಕಟೇಶ ನೀನು ನನ್ನ ಮನೆಯವರೆಗೂ ಬಾ ಅಷ್ಟಕ್ಕೆ ಮುಗಿಯದು. ಮನೆಗೆ ಬಂದಂತೆ ಮನಕ್ಕೂ ಬಾ ಅಖಂಡ ಬ್ರಹ್ಮಾಂಡಪತಿಯಾದ ನಿನ್ನನ್ನು ಆದರಿಸುವ ಆಸ್ತಿ ನನ್ನಲಿಲ್ಲ. ಆದರೆ ಭಕ್ತಿಯಿದೆ. ಸಂಪತ್ತಿನಲ್ಲಿ ಬಡವನಾದರೂ ಭಕುತಿಯಲ್ಲಿ ಶ್ರೀಮಂತ. ನೀನು ಬಡವನಾದ ಸುಧಾಮನ ಸಖನಾಗಿರುವಿ. ನನಗೂ ಸಖನಾಗು. ವಿರಕ್ತನಾದ ಚಂದ್ರಚೂಡ ಶಿವಶಂಕರನ ಮನಪುಷ್ಪವನ್ನು ಅರಳಿಸಿ ಆನಂದ ನೀಡುವ ಚಂದಿರನು ನೀನು. ನನ್ನ ಮನಸ್ಸಿನ ದುಃಖವನ್ನು ಕೇಳು. ನಿನ್ನಲ್ಲಿ ಏಕಚಿತ್ತವನ್ನು ನೀಡು.
ಈ ಮನ ನಿನ್ನ ಅಧೀನ. ನಿನ್ನ ಸ್ನಾನ. ಅಲ್ಲಿ ಒಳ್ಳೆಯ ಕಾಮವನ್ನೇ ಕರುಣಿಸು. ನೀನು ಕಾಮನ ಪಿತನಲ್ಲವೇ. ಬ್ರಹ್ಮಪಿತನೇ ಸುಮ್ಮನೆ ನನ್ನ ಕರ್ಮ ಬಿಟ್ಟು ಬೇರಾವ ಕಾರಣಗಳಿಲ್ಲದೇ ತಡಮಾಡಬೇಡ. ನೀನೊಬ್ಬನೇ ಬರಬೇಡ. ನಿನ್ನ ಮನೆಯ ಪರಿವಾರವನ್ನೇ ಕರೆದುಕೊಂಡು ಬಾ. ಆ ವಿಷಯದಲ್ಲಿ ಎರಡು ವಿಚಾರ ಬೇಡ. ಅತ್ಯಂತ ವೈಭವದಿಂದ ನಡೆದು ಬಾ ವೆಂಕಟ. ನಡೆದು ಬಾ.
ಪರಿಪರಿಯಿಂದಲಿ ಕರವ ಮುಗಿದು ಸ್ತುತಿಸಿ
ಕರೆದರೆ ಬಾರದ ಗರವುತನವು ಯಾಕೊ
ಕರಿಯ ಮೊರೆಯ ಕೇಳಿ ಸಿರಿಗೆ ಹೇಳದೆ ಬಂದೆ
ಕರಿರಾಜ ಅವನಿನ್ನ ಹಿರಿಯಪ್ಪನ ಮಗನೇನೋ
ಶರಣಾಗತರಕ್ಷಾಮಣಿ ಎಂಬುವ
ಬಿರುದು ಬೇಕಾದರೆ ಸರಸರ ಬಾರಯ್ಯ
ಗರುಡ ಗಮನ ಗೋಪಾಲವಿಟ್ಠಲರೇಯ
ಕರುವಿನ ಮೊರೆಗಾವು ನೆರೆದಂತೆ ಪೊರೆಯುತ ll 5 ll
ಅನೇಕ ರೀತಿಯಿಂದ ನಿನ್ನನ್ನು ಪ್ರಾರ್ಥಿಸುವೆ. ಸ್ತುತಿಸುವೆ, ಕೈ ಮುಗಿವೆ, ನಾ ಕರೆದರೂ ನೀ ಬರಲಾರೆ ಏಕೆ ಈ ಗರ್ವ. ಒಂದು ಆನೆ ಕರೆದರೆ ಹೆಂಡತಿಗೂ ಹೇಳದೆ ಬಂದೆ. ಆ ಕರಿರಾಜ ನಿನ್ನ ಸಂಬಂಧಿಕನೇ ? ದೊಡ್ಡಪ್ಪನ ಮಗನೇ ? ನಿನಗೊಂದು ಬಿರುದುಂಟು "ಶರಣಾಗತ ರಕ್ಷಾಮಣಿ" ಎಂದು. ನಿನಗೆ ನಾನು ಶರಣಾಗತನಾಗಿರುವೆ. ನೀನು ರಕ್ಷಿಸು, ಆಕಳು ತನ್ನ ಕರುವಿನ ಕೂಗಿಗೆ ಓಡಿ ಬರುವಂತೆ ನೀನು ಆಕಳಿನಂತೆ ಪವಿತ್ರ. ಸಾಧುತಮ ಸದಾ ಉಪಕಾರಿ. ನಾನು ನಿನ್ನ ಪುಟ್ಟದಾದ ಪ್ರೀತಿಯ ಕರು, ಬೇಗನೇ ಓಡೋಡಿ ಬಾ, ನಡೆದು ಬಾ, ವೆಂಕಟ ಗೋಪಾಲವಿಟ್ಠಲ ಎನ್ನುವರ ಗೋಪಾಲದಾಸರು.
ಹೀಗೆ ಕರೆದಾಗ ರಥ ಧಾವಿಸಿತು. ಶ್ರೀನಿವಾಸನ ಕರುಣೆ ಹಾಗೂ ಗೋಪಾಲದಾಸರ ಭಕುತಿ ಜಗತ್ತಿಗೆ ಅರಿವಾಯಿತು.
-ಶ್ರೀ ದಾಸಶ್ರೀಶ (ಪಂll ಪ್ರಮೋದಾಚಾರ್ಯ ಪೂಜಾರ)
***
ಸಡಗರದಿಂದ ಮೆಲ್ಲಡಿಯನಿಡುತ ಬೇಗ
ಎಡಬಲದಲಿ ನಿನ್ನ ಮಡದಿಯರೊಡಗೂಡಿ
ತಡಮಾಡದೆ ಬಾ ಮ್ರಡಸಖ ವೆಂಕಟ …ನಡೆದು ||
ವಿಜಯದಶಮಿ ಆಶ್ವಿಜಶುಧ್ಧ ಮಾಸದಲ್ಲಿ
ನಿಜರಥಾರೂಢನಾಗಿ, ಸುಜನರಿಂದ ಒಪ್ಪುತ
ಗಜಸಿಂಹ ,ಮಯೂರ, ಧ್ವಿಜಸಿಂಗ ಸಾರಂಗ
ಮಜಬಾಪುರೆ ಎನಲು ತ್ರಿಜಗವು ತಲೆದೂಗೇ
ಅಜನು ಸ್ತುತಿಯ ಮಾಡೆ ರುಜಗಣಾಧಿಪ ಪಡೆ
ಗಜಮುಖನಯ್ಯ ನಿಜಾನಂದದಲಾಡೆ
ಭುಜಗಶ್ರೇಷ್ಠ ಧ್ವಿಜರಾಜರು ಜಯವೆನ್ನೆ
ಕುಜನರೆದೆಯ ಮುಟ್ಟಿ ರಜತಮ ಕಲೆಯುತ ನಡೆದು….ನಡೆದು||
ದಕ್ಷಿಣ ಧಿಕ್ಕಿನಲ್ಲಿ ,ರಾಕ್ಷಸರೆದುರಾಗಿ ,
ಒಂದಕ್ಷೋಹಿಣಿ ಬಲ ,ನಿನ್ನ ಅಪೇಕ್ಷೆ ಮಾಡುತಲಿರೆ
ಪಕ್ಷಿವಾಹನನೆಣಿಸಿ ಅ ಕ್ಷಣೊದೊಲು ಖಳರ
ಶಿಕ್ಷಿಸಿ, ಸುಜನರ ರಕ್ಷಿಸಿ ಮೆರೆದಯ್ಯಾ
ತಕ್ಷಕ ನರನನು ಭಕ್ಷಿಸಬರುತಿರೆ ಈಕ್ಷಿಸಿ ತಕ್ಷಣ
ರಥನೆಲಕ್ಕೊತ್ತಿದೆ, ಲಕ್ಷೀಶನೆ ಅಕ್ಷಯ ಫಲದಾಯಕ
ಕುಕ್ಷಿಯೊಳಗೆ ಜಗರಕ್ಷಿಪ ವಿಶ್ವನೇ…..||ನಡೆದು ಬಾರಯ್ಯ||
ಮನಕೆ ಬಾರಯ್ಯ , ಸುಧಾಮನ ಸಖಹರಿಯೆ
ಸೋಮನ ಧರಿಸಿದವನೆ ,ಮನ ಕುಮುದಕೆ
ಚಂದ್ರಮನೆ ಕೇಳು ಎನ್ನ ದುಮ್ಮನವನೆ ಪರಿಹರಿಸಿ
ಒಮ್ಮನ ಕೊಡು ಅಹಿಗಿರಿ ತಿಮ್ಮನೆ ಕೇಳೊ ಬಿನ್ನಪಾ
ಕೊಂಬು ಕಹಳೆಗಳು ಬೊಂಬೋರಿಡುತಿರೆ
ತುಂಬುರು ನಾರದ ಇಂಪಾಗಿ ಪಾಡಲು
ಅಂಭರದಲಿ ವಾದನ ತುಂಬಿ ಧಿಮಿಕ್ಕೆನ್ನೆ
ಸಂಭ್ರಮದಲಿ ಬಾರೊ ಶಂಭು ವಂದಿತನೆ ನಡೆದೂ….||
ಪರಿಪರಿ ಬಗೆಯಿಂದ ಕರವ ಮುಗಿದು ಸ್ತುತಿಸಿ
ಕರೆದರೆ ಬಾರದೆ ಗರ್ವವು ಯಾಕೊ
ಕರಿಯ ಮೊರೆಯ ಕೇಳಿ, ಸಿರಿಗೆ ಹೇಳದೆ ಬಂದೆ
ಕರಿರಾಜ ಅವನಿನ್ನ ಹಿರಿಯಪ್ಪನ ಮಗನೇನೊ
ಶರಣಾಗತರಕ್ಷಕ ಮಣಿ ಎಂಬುವ
ಬಿರುದು ಬೇಕಾದರೆ ,ಸರಸರ ಬಾರಯ್ಯ,
ಗರುಡ ಗಮನ ಗೋಪಾಲ ವಿಠ್ಠಲರಾಯ
ಕರುವಿನಮೊರೆಗಾವು ನೆರೆದಂತೆ ಪೊರೆಯೊ ||
*******
No comments:
Post a Comment